B-2 Spirit ರೋಚಕ ಪಯಣ 
ವಿದೇಶ

'37 ಗಂಟೆ ಸತತ ಪಯಣ, ಆಗಸದಲ್ಲಿಯೇ ಇಂಧನ ಭರ್ತಿ': Iran ಪರಮಾಣು ಘಟಕದ ಮೇಲೆ ದಾಳಿ ಮಾಡಿದ B-2 Spirit ರೋಚಕ ಪಯಣ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಮುಂಜಾನೆ ಇರಾನ್‌ನ ಪರಮಾಣು ಘಟಕಗಳ ಮೇಲೆ ಪ್ರಬಲ ದಾಳಿ ನಡೆಸಿದ್ದು, ಈ ದಾಳಿಗಾಗಿ ಅಮೆರಿಕ ಸೇನೆ ತನ್ನ ಬಲಿಷ್ಠ ಬಿ-2 ಸ್ಪಿರಿಟ್ ಬಾಂಬರ್‌ ಯುದ್ಧ ವಿಮಾನವನ್ನು ಬಳಕೆ ಮಾಡಿತ್ತು.

ವಾಷಿಂಗ್ಟನ್: ಇರಾನ್‌ನ ಪರಮಾಣು ನೆಲೆಗಳನ್ನು ಹೊಡೆದುರುಳಿಸಲು ಅಮೆರಿಕ ಸೇನೆ ಬಳಸಿದ B-2 Spirit ಯುದ್ಧ ವಿಮಾನ ಇರಾನ್ ಗೆ ಪಯಣಿಸಲು ಮಾಡಿದ ಸಾಹಸದ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ಹೌದು.. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಮುಂಜಾನೆ ಇರಾನ್‌ನ ಪರಮಾಣು ಘಟಕಗಳ ಮೇಲೆ ಪ್ರಬಲ ದಾಳಿ ನಡೆಸಿದ್ದು, ಈ ದಾಳಿಗಾಗಿ ಅಮೆರಿಕ ಸೇನೆ ತನ್ನ ಬಲಿಷ್ಠ ಬಿ-2 ಸ್ಪಿರಿಟ್ ಬಾಂಬರ್‌ ಯುದ್ಧ ವಿಮಾನವನ್ನು ಬಳಕೆ ಮಾಡಿತ್ತು.

ಈ ಪ್ರಬಲ ಯುದ್ದ ವಿಮಾನ ಅಮೆರಿಕದ ಮಿಸೌರಿಯಿಂದ ಸುಮಾರು 37 ಗಂಟೆಗಳ ಕಾಲ ನಿರಂತರವಾಗಿ ಹಾರಾಟ ನಡೆಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಆಗಸದಲ್ಲೇ ಇಂಧನ ಭರ್ತಿ

ಇನ್ನು ಈ ಸತತ 37 ಗಂಟೆಗಳ ಪಯಣಕ್ಕಾಗಿ ಬಿ 2 ಸ್ಪಿರಿಟ್ ಯುದ್ಧ ವಿಮಾನಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಲಾಗಿತ್ತು. ಹಲವಾರು ಬಾರಿ ಮಧ್ಯದಲ್ಲೇ ಯುದ್ಧ ವಿಮಾನಕ್ಕೆ ಇಂಧನ ತುಂಬಿಸಲಾಗಿತ್ತು.

ಇರಾನ್ ಅಣು ಸ್ಥಾವರಗಳ ಮೇಲೆ ದಾಳಿ

ಈ 37 ಗಂಟೆಗಳ ನಿರಂತರ ಪಯಣದ ಬಳಿಕ B 2 ಸ್ಪಿರಿಟ್ ಯುದ್ಧ ವಿಮಾನ ಇರಾನಿನ ಮೂರು ಪ್ರಮುಖ ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ದಾಳಿ ಮಾಡಿತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಫೋರ್ಡೋ ಅಣು ಸ್ಥಾವರ ನಾಶವಾಗಿದೆ ಎಂದು ಘೋಷಿಸಿದರು.

ಅಂದಹಾಗೆ ಇರಾನ್ ನ ಅತ್ಯಂತ ಸುರಕ್ಷಿತ ಪರಮಾಣು ನೆಲೆ ಎಂದೇ ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿದ್ದ ಫೋರ್ಡೋ ಅಣು ಸ್ಥಾವರ, ಇರಾನ್ ನ ಭಾರೀ ಕೋಟೆಯ ಭೂಗತ ಅಣು ಸೌಲಭ್ಯವಾಗಿತ್ತು. ಇಂತಹ ಭದ್ರನೆಲೆಯನ್ನೇ ಹೊಡೆದುರುಳಿಸಲಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.

ಬಂಕರ್-ಬಸ್ಟರ್ ಬಾಂಬ್‌ಗಳು ಮತ್ತು ಟೊಮಾಹಾಕ್ ಕ್ಷಿಪಣಿಗಳ ಸಂಯೋಜನೆಯೊಂದಿಗೆ ನಡೆಸಲಾದ ದಾಳಿಗಳು, ವರ್ಷಗಳಲ್ಲಿ ಇರಾನ್ ವಿರುದ್ಧದ ಅತ್ಯಂತ ನೇರವಾದ ಅಮೆರಿಕ ಮಿಲಿಟರಿ ಕ್ರಮವಾಗಿತ್ತು. ಫೋರ್ಡೋ ಮೇಲೆ ಆರು ಬಂಕರ್-ಬಸ್ಟರ್ ಬಾಂಬ್‌ಗಳನ್ನು ಬೀಳಿಸಲಾಗಿದೆ ಮತ್ತು ಸುಮಾರು 30 ಟೊಮಾಹಾಕ್ ಕ್ಷಿಪಣಿಗಳು ಇತರ ಪರಮಾಣು ಸ್ಥಾಪನೆಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆದಿವೆ ಎಂದು ಟ್ರಂಪ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ