ಹಮಾಸ್ ನಾಯಕ ಇಸ್ಸಾ 
ವಿದೇಶ

ಅಕ್ಟೋಬರ್ 7ರ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್! ಹಮಾಸ್ ನಾಯಕ ಇಸ್ಸಾನನ್ನು ಹೊಡೆದುರುಳಿಸಿದ ಇಸ್ರೇಲ್ ಸೇನಾಪಡೆ!

ಇಸ್ಸಾ ನೇತೃತ್ವದಲ್ಲಿ ಹಮಾಸ್ ಪಡೆಗಳ ರಚನೆ, ತರಬೇತಿ ಮತ್ತು ಅಕ್ಟೋಬರ್ 7ರ ಮಾರಣಾಂತಿಕ ದಾಳಿ ನಡೆದಿತ್ತು.

ಜೆರುಸೆಲೆಂ: ಅಕ್ಟೋಬರ್ 7, 2023 2023 ರಂದು ಇಸ್ರೇಲ್ ನೆಲದಲ್ಲಿ ಮಾರಣಾಂತಿಕ ದಾಳಿ ನಡೆಸಿದ ಹಮಾಸ್ ನಾಯಕ ಇಸ್ಸಾನನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.

ಈ ಕುರಿತು ಶನಿವಾರ ತಡರಾತ್ರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆ (IDF), "ELIMINATED, ಹಮಾಸ್ ನ ಮಿಲಿಟರಿ ವಿಭಾಗದ ಸ್ಥಾಪಕರಲ್ಲಿ ಒಬ್ಬರಾದ ಹಖಮ್ ಮುಹಮ್ಮದ್ ಇಸ್ಸಾ ಅಲ್-ಇಸ್ಸಾ ಅವರನ್ನು ಹತ್ಯೆ ಮಾಡಲಾಗಿದೆ.

ಇಸ್ಸಾ ನೇತೃತ್ವದಲ್ಲಿ ಹಮಾಸ್ ಪಡೆಗಳ ರಚನೆ, ತರಬೇತಿ ಮತ್ತು ಅಕ್ಟೋಬರ್ 7ರ ಮಾರಣಾಂತಿಕ ದಾಳಿ ನಡೆದಿತ್ತು. ಅವರು ಇಸ್ರೇಲಿಗಳ ವಿರುದ್ಧ ವೈಮಾನಿಕ ಮತ್ತು ನೌಕಾ ದಾಳಿಯನ್ನು ಮುನ್ನಡೆಸಿದ್ದರು ಎಂದು ಹೇಳಲಾಗಿದೆ.

ಅಕ್ಟೋಬರ್ 7 ರ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಎಲ್ಲಾ ಭಯೋತ್ಪಾದಕರನ್ನು IDF ಮತ್ತು ISA ಪತ್ತೆಹಚ್ಚಿ, ಹತ್ಯೆ ಮಾಡುವುದನ್ನು ಮುಂದುವರೆಸಲಿದೆ ಎಂದು ತಿಳಿಸಲಾಗಿದೆ.

ಈ ಮಧ್ಯೆ ಸುದ್ದಿಸಂಸ್ಥೆ ಅಲ್ ಜಜೀರಾ ಪ್ರಕಾರ, ಇಸ್ರೇಲ್ ಗಾಜಾ ಪಟ್ಟಿಯಾದ್ಯಂತ ತನ್ನ ದಾಳಿಯನ್ನು ಮುಂದುವರೆಸಿದೆ. ಇದರಲ್ಲಿ ಗಾಜಾ ನಗರದ ತುಫಾ ನೆರೆಹೊರೆಯಲ್ಲಿ ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 20 ಜನರನ್ನು ಕೊಂದ ದಾಳಿಯೂ ಸೇರಿದೆ.

ಒಂದು ವಾರದೊಳಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾದಲ್ಲಿ ಕದನ ವಿರಾಮ ಜಾರಿಯಾಗಬಹುದೆಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕದನ ವಿರಾಮಕ್ಕಾಗಿ ಪ್ರಯತ್ನಿಸುತ್ತಿರುವ ಕೆಲವು ಜನರೊಂದಿಗೆ ಮಾತನಾಡಿದ ನಂತರ ಈ ಭರವಸೆ ಸಿಕ್ಕಿದೆ. ಮುಂದಿನ ವಾರ ಕದನ ವಿರಾಮ ಜಾರಿಯಾಗುವ ನಿರೀಕ್ಷೆ ಹೊಂದಿರುವುದಾಗಿ ಟ್ರಂಪ್ ಹೇಳಿರುವುದಾಗಿ ಅಲ್ ಜಜೀರಾ ಹೇಳಿದೆ.

ಟ್ರಂಪ್ ಒತ್ತಡದಿಂದ ಇಸ್ರೇಲ್ ಪ್ರಧಾನಿ ನೆತನ್ಯಾಹು ಕದನ ವಿರಾಮವನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಾಗಿ ಅನೇಕ ವರದಿಗಳು ಹೇಳಿವೆ. ಗಾಜಾದಲ್ಲಿ ಇಸ್ರೇಲಿ ಪಡೆಗಳಿಂದ ಹೆಚ್ಚುತ್ತಿರುವ ಹತ್ಯೆಗಳು ಮತ್ತು ಇಸ್ರೇಲ್‌ನ ಯುದ್ಧದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ಹೆಚ್ಚಾಗುತ್ತಿರುವ ಸಮಯದಲ್ಲಿ ಟ್ರಂಪ್‌ ಕದನ ವಿರಾಮದ ಮಾತುಗಳನ್ನಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT