ಯುಎಸ್ ಎಐಡಿ  
ವಿದೇಶ

USAID ಮತ್ತು ಸರ್ಕಾರದ ಇಲಾಖೆಗೆ 2 ಬಿಲಿಯನ್ ಡಾಲರ್ ಪಾವತಿ ಮಾಡಿ: ಟ್ರಂಪ್ ಸರ್ಕಾರಕ್ಕೆ ಫೆಡರಲ್ ನ್ಯಾಯಾಧೀಶ ಆದೇಶ

ನಿಧಿ ಸ್ಥಗಿತದ ವಿರುದ್ಧ ಮೊಕದ್ದಮೆ ಹೂಡಿದ ಸರ್ಕಾರೇತರ ಸಂಘಟನೆಗಳು ಮತ್ತು ಉದ್ಯಮಗಳ ಪರವಾಗಿ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಅಮೀರ್ ಅಲಿ ತೀರ್ಪು ನೀಡಿದ್ದಾರೆ.

ವಾಷಿಂಗ್ಟನ್: ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ(USAID) ಮತ್ತು ವಿದೇಶಾಂಗ ಇಲಾಖೆಯ ಪಾಲುದಾರರಿಗೆ ಬಾಕಿ ಇರುವ ಸುಮಾರು 2 ಬಿಲಿಯನ್ ಡಾಲರ್‌ಗಳನ್ನು ಬರುವ ಸೋಮವಾರದೊಳಗೆ ಪಾವತಿಸಲು ಫೆಡರಲ್ ನ್ಯಾಯಾಧೀಶರು ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಗಡುವು ನೀಡಿದ್ದಾರೆ, ಇದರಿಂದಾಗಿ ಎಲ್ಲಾ ವಿದೇಶಿ ನೆರವಿನ ಮೇಲಿನ ಆಡಳಿತದ ಆರು ವಾರಗಳ ಹಣಕಾಸು ಸ್ಥಗಿತಕ್ಕೆ ಬಿಡುಗಡೆ ಸಿಕ್ಕಿದೆ.

ನಿಧಿ ಸ್ಥಗಿತದ ವಿರುದ್ಧ ಮೊಕದ್ದಮೆ ಹೂಡಿದ ಸರ್ಕಾರೇತರ ಸಂಘಟನೆಗಳು ಮತ್ತು ಉದ್ಯಮಗಳ ಪರವಾಗಿ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಅಮೀರ್ ಅಲಿ ತೀರ್ಪು ನೀಡಿದ್ದಾರೆ, ಇದು ವಿಶ್ವದಾದ್ಯಂತದ ಸಂಸ್ಥೆಗಳು ಸೇವೆಗಳನ್ನು ಕಡಿತಗೊಳಿಸಲು ಮತ್ತು ಸಾವಿರಾರು ಕಾರ್ಮಿಕರನ್ನು ವಜಾಗೊಳಿಸಲು ಒತ್ತಾಯಿಸಿದೆ.

ವಿದೇಶಿ ನೆರವು ಸೇರಿದಂತೆ ವಿದೇಶಾಂಗ ನೀತಿಗೆ ಸಂಬಂಧಪಟ್ಟಂತೆ ಯುಎಸ್ ಕಾಂಗ್ರೆಸ್ ನಿರ್ಧಾರಗಳನ್ನು ಅತಿಕ್ರಮಿಸಲು ಅಧ್ಯಕ್ಷರಿಗೆ ವ್ಯಾಪಕ ಅಧಿಕಾರವಿದೆ ಎಂಬ ಟ್ರಂಪ್ ಆಡಳಿತದ ವಾದ ವಿರುದ್ಧ ನ್ಯಾಯಾಧೀಶ ಆಲಿ ಪ್ರಶ್ನೆ ಮಾಡಿದ್ದಾರೆ.

ನೀವು ಇದನ್ನು ಸಾಂವಿಧಾನಿಕ ದಾಖಲೆಯಲ್ಲಿ ಎಲ್ಲಿಂದ ಪಡೆಯುತ್ತಿದ್ದೀರಿ ಎಂದು ನ್ಯಾಯಾಧೀಶ ಆಲಿ ಸರ್ಕಾರಿ ವಕೀಲ ಇಂದ್ರನೀಲ್ ಸುರ್ ಅವರನ್ನು ಕೇಳಿದ್ದಾರೆ. ಟ್ರಂಪ್ ಆಡಳಿತವು ವಿಶ್ವಾದ್ಯಂತ ಶೇಕಡಾ 90ರಷ್ಟು USAID ಒಪ್ಪಂದಗಳನ್ನು ತ್ವರಿತವಾಗಿ ರದ್ದುಗೊಳಿಸುವ ಕುರಿತು ಮುಂದಿನ ದಿನಗಳಲ್ಲಿ ಇನ್ನಷ್ಟು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಯುಎಸ್ ಎಐಡಿ ಮೂಲಕ ಹಣವನ್ನು ಸ್ಥಗಿತಗೊಳಿಸುವ ಟ್ರಂಪ್ ಆಡಳಿತದ ಪ್ರಯತ್ನವನ್ನು ವಿಭಜಿತ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಅಲಿಯವರ ತೀರ್ಪು ಬಂದಿದೆ. ಈಗಾಗಲೇ ಮಾಡಲಾದ ಕೆಲಸಕ್ಕೆ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಸರ್ಕಾರವು ತನ್ನ ಹಿಂದಿನ ಆದೇಶವನ್ನು ಅನುಸರಿಸಲು ಏನು ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸುವಂತೆ ಹೈಕೋರ್ಟ್ ನ್ಯಾಯಾಧೀಶ ಅಲಿಯವರಿಗೆ ಸೂಚಿಸಿತು.

ಜನವರಿ 20 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶದಿಂದ ಹಣ ಸ್ಥಗಿತಗೊಂಡಿದೆ. ಅಲಿ ತಾತ್ಕಾಲಿಕ ತಡೆಯಾಜ್ಞೆ ಹೊರಡಿಸಿದ ನಂತರ ಮತ್ತು ಈಗಾಗಲೇ ಮಾಡಿದ ಕೆಲಸಕ್ಕೆ ಹಣ ಬಿಡುಗಡೆ ಮಾಡಲು ಗಡುವನ್ನು ನಿಗದಿಪಡಿಸಿದ ನಂತರ ಟ್ರಂಪ್ ಸರ್ಕಾರ ಮೇಲ್ಮನವಿ ಸಲ್ಲಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT