ಬಿಲಾವಲ್ ಭುಟ್ಟೋ  
ವಿದೇಶ

ಪಾಕಿಸ್ತಾನ ಶಾಂತಿಯುತ ದೇಶ, ಸಿಂಧು ನೀರು ನಿಲ್ಲಿಸಿದ್ರೆ ಯುದ್ಧಕ್ಕೆ ಸಿದ್ಧ: ಭಾರತದ ವಿರುದ್ಧ ಮತ್ತೆ ರಕ್ತ ಕಾರಿದ ಭುಟ್ಟೋ!

ಪಾಕಿಸ್ತಾನ ಶಾಂತಿಯುತ ದೇಶ, ಇಸ್ಲಾಂ ಶಾಂತಿಯುತ ಧರ್ಮ, ನಮಗೆ ಯುದ್ಧ ಬೇಕಾಗಿಲ್ಲ, ಆದರೆ ನಮ್ಮ ಸಿಂಧು ನೀರು ನಿಲ್ಲಿಸಿದ್ರೆ, ಭಾರತ ಯುದ್ಧಕ್ಕೆ ಸಿದ್ಧವಾಗಬೇಕು ಎಂದರು.

ಮೀರ್ ಪುರ್ ಖಾಸ್: ಪಾಕಿಸ್ತಾನ ಶಾಂತಿ ಬಯಸುವ ರಾಷ್ಟ್ರ ಆದರೆ ಭಾರತ ಪ್ರಚೋದಿಸಿದರೆ ಯುದ್ಧಕ್ಕೆ ಸಿದ್ಧವಿರುವುದಾಗಿ ಪಾಕ್ ನ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಮತ್ತೆ ರಕ್ತ ಕಾರಿದ್ದಾರೆ.

ಮೀರ್‌ಪುರ್ ಖಾಸ್‌ನಲ್ಲಿ ಗುರುವಾರ ಮಾತನಾಡಿದ ಭುಟ್ಟೋ, "ಪಾಕಿಸ್ತಾನ ಶಾಂತಿಯುತ ದೇಶ, ಇಸ್ಲಾಂ ಶಾಂತಿಯುತ ಧರ್ಮ, ನಮಗೆ ಯುದ್ಧ ಬೇಕಾಗಿಲ್ಲ, ಆದರೆ ನಮ್ಮ ಸಿಂಧು ನೀರು ನಿಲ್ಲಿಸಿದ್ರೆ, ಭಾರತ ಯುದ್ಧಕ್ಕೆ ಸಿದ್ಧವಾಗಬೇಕು ಎಂದರು.

ನಾವು ಯುದ್ಧದ ಡೋಲುಗಳನ್ನು ಬಾರಿಸುವುದಿಲ್ಲ, ಆದರೆ ಪ್ರಚೋದಿಸಿದರೆ, ಅಖಂಡ ಪಾಕಿಸ್ತಾನದ ಘರ್ಜನೆ ಕಿವುಡಾಗಿಸಲಿದೆ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರೆ.

ಇದಕ್ಕೂ ಮುನ್ನಾ ಸ್ಕೈ ನ್ಯೂಸ್‌ನ ಯಲ್ಡಾ ಹಕೀಮ್ ಜೊತೆಗೆ ಮಾತನಾಡಿದ ಭುಟ್ಟೋ, ಉಗ್ರರೊಂದಿಗೆ ಪಾಕ್ ನಂಟನ್ನು ಒಪ್ಪಿಕೊಂಡರು. ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದಂತೆ ಪಾಕಿಸ್ತಾನ ಹಿಂದೆ ಉಗ್ರರೊಂದಿಗೆ ಸಂಪರ್ಕ ಹೊಂದಿತ್ತು. ಇದರ ಪರಿಣಾಮ ಸಾಕಷ್ಟು ನೋವು ಅನುಭವಿಸಿದ್ದೇವೆ. ಉಗ್ರವಾದದ ಅಲೆಯನ್ನು ಎದುರಿಸಿದ್ದೇವೆ. ಈಗ ಪಾಠ ಕಲಿತಿದ್ದು, ಈಗ ಈ ಸಮಸ್ಯೆ ಸುಧಾರಣೆಯಾಗಿದೆ. ಇದು ನಮ್ಮ ಇತಿಹಾಸದ ದುರದೃಷ್ಟಕರ ಭಾಗವಾಗಿದೆ ಎಂಬುದು ನಿಜ ಎಂದು ಭುಟ್ಟೊ ಹೇಳಿದರು.

ರಕ್ಷಣಾ ಸಚಿವ ಖ್ವಾಜಾ ಆಸಿಫ್ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ಮತ್ತು ಧನಸಹಾಯದಲ್ಲಿ ಪಾಕಿಸ್ತಾನದ ನೆರವನ್ನು ಒಪ್ಪಿಕೊಂಡಿದ್ದರು. ಸುಮಾರು ಮೂರು ದಶಕಗಳಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ. ಅದು ತಪ್ಪು. ಅದಕ್ಕಾಗಿ ನಾವು ಅನುಭವಿಸಿದ್ದೇವೆ. ನಾವು ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಮತ್ತು ನಂತರದ ಯುದ್ಧದಲ್ಲಿ 9/11 ರ ನಂತರದ ಯುದ್ಧದಲ್ಲಿ ಭಾಗವಹಿಸದಿದ್ದರೆ, ಪಾಕಿಸ್ತಾನದ ದಾಖಲೆಯು ದೋಷರಹಿತವಾಗಿತ್ತು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT