ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ. 
ವಿದೇಶ

ಮೋದಿ ಕಠಿಣ ಸಂಧಾನಕಾರ: ವ್ಯಾಪಾರ ಒಪ್ಪಂದಗಳ ಬಗ್ಗೆ ಜೆ.ಡಿ ವ್ಯಾನ್ಸ್

ಗುರುವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಸುಂಕಗಳ ಕುರಿತು ಭಾರತದೊಂದಿಗೆ "ಉತ್ತಮ ಮಾತುಕತೆಗಳು" ನಡೆಯುತ್ತಿವೆ ಎಂದು ವ್ಯಾನ್ಸ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಠಿಣ ಸಂಧಾನಕಾರ ಎಂದು ಕರೆದಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಭಾರತ ಪರಸ್ಪರ ಸುಂಕಗಳನ್ನು ತಪ್ಪಿಸಲು ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವ ಮೊದಲ ದೇಶಗಳಲ್ಲಿ ಒಂದಾಗಿರಬಹುದು ಎಂದು ಭವಿಷ್ಯ ನುಡಿದಿದ್ದು, ಭಾರತ ಅಮೆರಿಕವನ್ನು ಬಳಸಿಕೊಳ್ಳುತ್ತಿದೆ ಇದೇ ವೇಳೆ ಆರೋಪಿಸಿದ್ದಾರೆ.

ಗುರುವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಸುಂಕಗಳ ಕುರಿತು ಭಾರತದೊಂದಿಗೆ "ಉತ್ತಮ ಮಾತುಕತೆಗಳು" ನಡೆಯುತ್ತಿವೆ ಎಂದು ವ್ಯಾನ್ಸ್ ಹೇಳಿದರು. ಹೆಚ್ಚಿನ ಆಮದು ತೆರಿಗೆಗಳನ್ನು ತಪ್ಪಿಸಲು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು, ಸುಂಕ ಹೆಚ್ಚಳದ ಪಟ್ಟಿಯಲ್ಲಿ ಹೆಚ್ಚಿನವು ಇದೀಗ ವಿರಾಮದಲ್ಲಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

"ಪ್ರಧಾನಿ ಮೋದಿ ಕಠಿಣ ಸಂಧಾನಕಾರರು, ಆದರೆ ನಾವು ಆ ಸಂಬಂಧವನ್ನು ಮರುಸಮತೋಲನಗೊಳಿಸಲಿದ್ದೇವೆ ಮತ್ತು ಅದಕ್ಕಾಗಿಯೇ ಅಧ್ಯಕ್ಷರು ಮೋದಿ ಏನು ಮಾಡುತ್ತಾರೋ ಅದನ್ನೇ ಮರಳಿ ಮಾಡುತ್ತಿದ್ದಾರೆ" ಎಂದು ವ್ಯಾನ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.

"ಭಾರತ ಮೊದಲ ಒಪ್ಪಂದವನ್ನು ಜಾರಿಗೆ ತರುತ್ತಿದೆಯೇ?" ಎಂದು ಫಾಕ್ಸ್ ನ್ಯೂಸ್‌ನ 'ವಿಶೇಷ ವರದಿ'ಯಲ್ಲಿನ ಸಂದರ್ಶನದಲ್ಲಿ ವ್ಯಾನ್ಸ್ ಅವರನ್ನು ಕೇಳಲಾಯಿತು. "ಇದು ನಿಮ್ಮ ಮೊದಲ ಒಪ್ಪಂದವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಇದು ಖಂಡಿತವಾಗಿಯೂ ಮೊದಲ ಒಪ್ಪಂದಗಳಲ್ಲಿ ಒಂದಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಶೀಘ್ರದಲ್ಲೇ ನೋಡಿ, ನಾವು ಜಪಾನ್, ಕೊರಿಯಾದೊಂದಿಗೆ ಮಾತುಕತೆ ನಡೆಸಿದ್ದೇವೆ, ಯುರೋಪಿನ ಕೆಲವು ಜನರೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ ಮತ್ತು ನಿಸ್ಸಂಶಯವಾಗಿ ನಾವು ಭಾರತದಲ್ಲಿ ಉತ್ತಮ ಮಾತುಕತೆ ನಡೆಸುತ್ತಿದ್ದೇವೆ" ಎಂದು ವ್ಯಾನ್ಸ್ ಉತ್ತರಿಸಿದರು.

ಏಪ್ರಿಲ್ 2 ರಂದು ಭಾರತ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳ ಮೇಲೆ ಪರಸ್ಪರ ಸುಂಕಗಳನ್ನು ಹೇರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದರು. ಆದಾಗ್ಯೂ, ಏಪ್ರಿಲ್ 9 ರಂದು, ಚೀನಾ ಮತ್ತು ಹಾಂಗ್ ಕಾಂಗ್ ಹೊರತುಪಡಿಸಿ, ಈ ವರ್ಷ ಜುಲೈ 9 ರವರೆಗೆ ಈ ಸುಂಕಗಳನ್ನು 90 ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಅವರು ಘೋಷಿಸಿದರು. ಸುಮಾರು 75 ದೇಶಗಳು ವ್ಯಾಪಾರ ಒಪ್ಪಂದಗಳಿಗಾಗಿ ಅಮೆರಿಕವನ್ನು ಸಂಪರ್ಕಿಸಿದ್ದರ ಪರಿಣಾಮ ಸುಂಕ ಸಮರಕ್ಕೆ ಬ್ರೇಕ್ ಹಾಕಲಾಗಿದೆ.

ಆದಾಗ್ಯೂ, ಉಕ್ಕು, ಅಲ್ಯೂಮಿನಿಯಂ ಮತ್ತು ಆಟೋ ಘಟಕಗಳ ಮೇಲಿನ ಶೇಕಡಾ 25 ರಷ್ಟು ಸುಂಕಗಳನ್ನು ಹೊರತುಪಡಿಸಿ ಏಪ್ರಿಲ್ 2 ರಂದು ದೇಶಗಳ ಮೇಲೆ ವಿಧಿಸಲಾದ ಶೇಕಡಾ 10 ರಷ್ಟು ಮೂಲ ಸುಂಕವು ಜಾರಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel