ಸಾಂದರ್ಭಿಕ ಚಿತ್ರ 
ವಿದೇಶ

ಯುರೋಪ್: 67 ಮಕ್ಕಳ ಗರ್ಭಧಾರಣೆಗೆ ಕ್ಯಾನ್ಸರ್ ಬಾಧಿತ ದಾನಿಯಿಂದ ವೀರ್ಯ; ಈಗಾಗಲೇ 10 ಮಂದಿಗೆ ಕ್ಯಾನ್ಸರ್ ಪತ್ತೆ!

2008 ರಲ್ಲಿ ವೀರ್ಯ ದಾನ ಮಾಡುವ ಸಂದರ್ಭದಲ್ಲಿ ಈ ರೂಪಾಂತರ ಇತ್ತು. ಆದರೆ ಕ್ಯಾನ್ಸರ್‌ಗೂ ಅದಕ್ಕೂ ಸಂಬಂಧ ಇರಲಿಲ್ಲ ಎಂದು ದೃಢಪಡಿಸಿದ ಯುರೋಪಿಯನ್ ವೀರ್ಯ ಬ್ಯಾಂಕ್‌, ದಾನಿ ವೀರ್ಯದ ಬಳಕೆಯ ಮೇಲೆ ಮಿತಿ ಇಲ್ಲದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಯುರೋಪಿನಾದ್ಯಂತ ಅಪರೂಪದ ಕ್ಯಾನ್ಸರ್ ಉಂಟು ಮಾಡುವ ಅಪಾಯ ಹೊಂದಿರುವ ವ್ಯಕ್ತಿಯ ವೀರ್ಯವನ್ನು 67 ಮಕ್ಕಳ ಗರ್ಭ ಧಾರಣೆಗೆ ಬಳಸಿರುವುದು ಬೆಳಕಿಗೆ ಬಂದಿದೆ. ಅವರಲ್ಲಿ 10 ಮಕ್ಕಳಲ್ಲಿ ಈಗಾಗಲೇ ಕ್ಯಾನ್ಸರ್ ಪತ್ತೆಯಾಗಿದೆ ಎಂದು ದಿ ಗಾರ್ಡಿಯನ್ ಮತ್ತು ಇಂಡಿಪೆಂಡೆಂಟ್ ವರದಿ ಮಾಡಿದೆ. ಇಪ್ಪತ್ಮೂರು ಮಕ್ಕಳು ಈಗ ಈ ರೂಪಾಂತರವನ್ನು ಹೊಂದಿದ್ದರೆ, ಕೆಲವರು ಲ್ಯುಕೇಮಿಯಾ ಮತ್ತು ಹಾಡ್ಗ್ಕಿನ್ ಅಲ್ಲದ ಲಿಂಫೋಮಾದಂತಹ ಕ್ಯಾನ್ಸರ್ ಗಳಿಂದ ಬಳಲುತ್ತಿದ್ದಾರೆ.

ತಮ್ಮ ಮಕ್ಕಳಲ್ಲಿ ಕ್ಯಾನ್ಸರ್ ಲಕ್ಷಣಗಳು ಪತ್ತೆಯಾದ ನಂತರ ಎರಡು ಕುಟುಂಬಗಳು ಪ್ರತ್ಯೇಕವಾಗಿ ತಮ್ಮ ಫರ್ಟಿಲಿಟಿ ಕ್ಲಿನಿಕ್ ಗಳನ್ನು ಸಂಪರ್ಕಿಸಿದಾಗ ಇದು ಬೆಳಕಿಗೆ ಬಂದಿದೆ. TP53 ಎಂಬ ಜೀನ್‌ನಲ್ಲಿನ ರೂಪಾಂತರವು ದಾನಿಗಳ ಕೆಲವು ವೀರ್ಯಗಳಲ್ಲಿದೆ ಎಂಬುದನ್ನು ವೀರ್ಯವನ್ನು ಪೂರೈಸಿದ ಯುರೋಪಿಯನ್ ವೀರ್ಯ ಬ್ಯಾಂಕ್ ದೃಢಪಡಿಸಿದೆ.

2008 ರಲ್ಲಿ ವೀರ್ಯ ದಾನ ಮಾಡುವ ಸಂದರ್ಭದಲ್ಲಿ ಈ ರೂಪಾಂತರ ಇತ್ತು. ಆದರೆ ಕ್ಯಾನ್ಸರ್‌ಗೂ ಅದಕ್ಕೂ ಸಂಬಂಧ ಇರಲಿಲ್ಲ ಎಂದು ದೃಢಪಡಿಸಿದ ಯುರೋಪಿಯನ್ ವೀರ್ಯ ಬ್ಯಾಂಕ್‌, ದಾನಿ ವೀರ್ಯದ ಬಳಕೆಯ ಮೇಲೆ ಮಿತಿ ಇಲ್ಲದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

“ಒಬ್ಬ ದಾನಿಯಿಂದ ಜನನ ಅಥವಾ ಕುಟುಂಬಗಳ ಸಂಖ್ಯೆಗಾಗಿ ಯುರೋಪಿಯನ್ ವೀರ್ಯ ಬ್ಯಾಂಕ್ ಮಿತಿಯನ್ನು ಹೊಂದಿರಬೇಕು ಎಂದು ಫ್ರಾನ್ಸ್‌ನ ರೂಯೆನ್ ಯೂನಿವರ್ಸಿಟಿ ಆಸ್ಪತ್ರೆಯ ಜೀವಶಾಸ್ತ್ರಜ್ಞೆ ಡಾ. ಎಡ್ವಿಜ್ ಕ್ಯಾಸ್ಪರ್ ಹೇಳಿದ್ದಾರೆ.

ಎಲ್ಲಾ ವೀರ್ಯ ದಾನಿಗಳಿಗೆ ಸಂಪೂರ್ಣ-ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ಸಾಧ್ಯವಿಲ್ಲ. ಆದರೆ ಇದು ಆನುವಂಶಿಕ ಕಾಯಿಲೆಯ ಅಸಹಜ ಪ್ರಕರಣವಾಗಿದೆ. ಯುರೋಪಿನಾದ್ಯಂತ ಪ್ರತಿಯೊಬ್ಬ ಮನುಷ್ಯನು 75 ಮಕ್ಕಳನ್ನು ಹೊಂದಿಲ್ಲ ಎಂದು ಅವರು ಹೇಳಿದರು.

ರೋಗಿಗಳ ಡೇಟಾಬೇಸ್‌ಗಳು, ಕಂಪ್ಯೂಟರ್ ಭವಿಷ್ಯ ಸಾಧನಗಳು ಮತ್ತು ಕ್ರಿಯಾತ್ಮಕ ಪ್ರಯೋಗಗಳ ಫಲಿತಾಂಶಗಳನ್ನು ಬಳಸಿಕೊಂಡು ರೂಪಾಂತರವನ್ನು ವಿಶ್ವೇಷಿಸಿದಾಗ ಇದು ಬಹುಶಃ ಕ್ಯಾನ್ಸರ್-ಉಂಟುಮಾಡುತ್ತದೆ ಎಂಬುದು ತಿಳಿದುಬಂದಿದೆ. ಈ ದಾನಿಯಿಂದ ಜನಿಸಿದ ಮಕ್ಕಳು ಆನುವಂಶಿಕ ಸಲಹೆಯನ್ನು ಪಡೆಯಬೇಕು ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT