ಸಿಡಿಎಸ್ ಅನಿಲ್ ಚೌಹಾಣ್ 
ವಿದೇಶ

1947 ರಲ್ಲಿ ಪಾಕಿಸ್ತಾನ ನಮಗಿಂತ ಎಲ್ಲದರಲ್ಲೂ ಮುಂದಿತ್ತು, ಆದರೆ ಇಂದು...: ಸೇನಾಪಡೆಗಳ ಮುಖ್ಯಸ್ಥ

ಎರಡೂ ದೇಶಗಳು ಒಂದೇ ಸಮಯದಲ್ಲಿ ಸ್ವಾತಂತ್ರ್ಯ ಗಳಿಸಿದವು ಮತ್ತು ಆಗ ಪಾಕಿಸ್ತಾನ ಸಾಮಾಜಿಕ, ಆರ್ಥಿಕ ಹಾಗೂ ತಲಾವಾರು ಜಿಡಿಪಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತಕ್ಕಿಂತ ಮುಂದಿತ್ತು.

ಸಿಂಗಾಪುರ: ದೀರ್ಘಕಾಲೀನ ಕಾರ್ಯತಂತ್ರದಿಂದಾಗಿ ನೆರೆಯ ದೇಶಕ್ಕಿಂತ ಹೆಚ್ಚಿನ ವೈವಿಧ್ಯತೆಯ ಹೊರತಾಗಿಯೂ ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪಾಕಿಸ್ತಾನಕ್ಕಿಂತ ಮುಂದಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಶನಿವಾರ ಹೇಳಿದ್ದಾರೆ.

ಸಿಂಗಾಪುರದಲ್ಲಿ ನಡೆದ ಶಾಂಗ್ರಿ-ಲಾ ಸಂವಾದದಲ್ಲಿ ಮಾತನಾಡಿದ ಸಿಡಿಎಸ್ ಚೌಹಾಣ್, ಎರಡೂ ದೇಶಗಳು ಒಂದೇ ಸಮಯದಲ್ಲಿ ಸ್ವಾತಂತ್ರ್ಯ ಗಳಿಸಿದವು ಮತ್ತು ಆಗ ಪಾಕಿಸ್ತಾನ ಸಾಮಾಜಿಕ, ಆರ್ಥಿಕ ಹಾಗೂ ತಲಾವಾರು ಜಿಡಿಪಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತಕ್ಕಿಂತ ಮುಂದಿತ್ತು. ಆದರೆ ಇಂದು ಭಾರತ ಎಲ್ಲದರಲ್ಲೂ ಅವರಿಗಿಂತ ಮುಂದಿದೆ ಎಂದರು.

"ರಾಜತಾಂತ್ರಿಕವಾಗಿ, 2014 ರಲ್ಲಿ ನಮ್ಮ ಪ್ರಧಾನಿ(ನರೇಂದ್ರ ಮೋದಿ), ನವಾಜ್ ಷರೀಫ್ ಅವರನ್ನು ಆಹ್ವಾನಿಸಿದ್ದರು. ನಾವು ಉತ್ತಮ ದ್ವಿಪಕ್ಷೀಯ ಸಂಬಂಧಕ್ಕಾಗಿ ಯತ್ನಿಸಿದೇವು. ಆದರೆ ಚಪ್ಪಾಳೆ ತಟ್ಟಲು ಎರಡು ಕೈಗಳು ಬೇಕಾಗುತ್ತವೆ. ಪ್ರತಿಯಾಗಿ ನಮಗೆ ಸಿಗುವುದು ಹಗೆತನವಾಗಿದ್ದರೆ, ಈಗ ಸಂಪರ್ಕ ಕಡಿತಗೊಳಿಸುವುದೇ ಒಂದು ಉತ್ತಮ ತಂತ್ರವಾಗಿದೆ" ಎಂದು ಸಿಡಿಎಸ್ ಚೌಹಾಣ್ ಹೇಳಿದ್ದಾರೆ.

ಇದೇ ವೇಳೆ ಭಾರತ-ಪಾಕಿಸ್ತಾನ ಸಂಬಂಧದ ಕುರಿತು ಮಾತನಾಡಿದ ಸಿಡಿಎಸ್, "ಈಗ, ನಾವು ಯಾವುದೇ ಕಾರ್ಯತಂತ್ರವಿಲ್ಲದೆ ಕಾರ್ಯನಿರ್ವಹಿಸುತ್ತಿಲ್ಲ" ಎಂದು ಹೇಳಿದರು.

ದಶಕಗಳಲ್ಲಿ ಭಾರತದ ಅಭಿವೃದ್ಧಿ ಆಕಸ್ಮಿಕವಲ್ಲ, ಬದಲಾಗಿ ಎಚ್ಚರಿಕೆಯ ದೀರ್ಘಕಾಲೀನ ಯೋಜನೆಯ ಪರಿಣಾಮವಾಗಿದೆ ಎಂದು ಎಂದು ಜನರಲ್ ಚೌಹಾಣ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT