ಮೆಹುಲ್ ಚೋಕ್ಸಿ 
ವಿದೇಶ

ಭಾರತಕ್ಕೆ ಮೆಹುಲ್ ಚೋಕ್ಸಿ ಹಸ್ತಾಂತರ ಮುಂದೂಡಿಕೆ: 'ಸುಪ್ರೀಂ'ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹೊಸ ತಂತ್ರ!

ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ವಿನಂತಿಯನ್ನು ಜಾರಿಗೊಳಿಸಬಹುದಾಗಿದೆ ಎಂದು ಘೋಷಿಸಿದ ಆಂಟ್ವೆರ್ಪ್ ಮೇಲ್ಮನವಿ ನ್ಯಾಯಾಲಯದ ಅಕ್ಟೋಬರ್ 17ರ ಆದೇಶವನ್ನು ಚೋಕ್ಸಿ ಬೆಲ್ಜಿಯಂನ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ಅಂತಿಮ ಆದೇಶ ಬರುವವರೆಗೂ ಹಸ್ತಾಂತರ ಪ್ರಕ್ರಿಯೆಯು ಅಮಾನತಿನಲ್ಲಿರಲಿದೆ.

ನವದೆಹಲಿ: ಭಾರತದಲ್ಲಿ ಪಿಎನ್‌ಬಿ ಹಗರಣದ ಆರೋಪಿ, ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ವಿನಂತಿಯನ್ನು ಜಾರಿಗೊಳಿಸಬಹುದಾಗಿದೆ ಎಂದು ಘೋಷಿಸಿದ ಆಂಟ್ವೆರ್ಪ್ ಮೇಲ್ಮನವಿ ನ್ಯಾಯಾಲಯದ ಅಕ್ಟೋಬರ್ 17ರ ಆದೇಶವನ್ನು ಚೋಕ್ಸಿ ಬೆಲ್ಜಿಯಂನ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ಅಂತಿಮ ಆದೇಶ ಬರುವವರೆಗೂ ಹಸ್ತಾಂತರ ಪ್ರಕ್ರಿಯೆಯು ಅಮಾನತಿನಲ್ಲಿರಲಿದೆ. ಅಕ್ಟೋಬರ್ 30ರಂದು ಚೋಕ್ಸಿ ಕ್ಯಾಸೇಶನ್ ನ್ಯಾಯಾಲಯದಲ್ಲಿ (ಸುಪ್ರೀಂ ಕೋರ್ಟ್) ಮೇಲ್ಮನವಿ ಸಲ್ಲಿಸಿದ್ದರು ಎಂದು ಆಂಟ್ವೆರ್ಪ್ ಮೇಲ್ಮನವಿ ನ್ಯಾಯಾಲಯದ ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ. ಈ ಮೇಲ್ಮನವಿ ಕಾನೂನು ಅರ್ಹತೆಗಳಿಗೆ ಮಾತ್ರ ಸೀಮಿತವಾಗಿದ್ದು ಸುಪ್ರೀಂ ಕೋರ್ಟ್ ನಿರ್ಧರಿಸುತ್ತದೆ. ಈ ಪ್ರಕ್ರಿಯೆಯಿಂದಾಗಿ ಹಸ್ತಾಂತರ ಪ್ರಕ್ರಿಯೆಯು ಅಮಾನತಿನಲ್ಲಿ ಉಳಿಯುತ್ತದೆ ಎಂದರು.

ಅಕ್ಟೋಬರ್ 17ರಂದು, ಆಂಟ್‌ವೆರ್ಪ್ ಮೇಲ್ಮನವಿ ನ್ಯಾಯಾಲಯದ ನಾಲ್ವರು ಸದಸ್ಯರ ಪ್ರಾಸಿಕ್ಯೂಷನ್ ಚೇಂಬರ್, 2024ರ ನವೆಂಬರ್ 29ರಂದು ಜಿಲ್ಲಾ ನ್ಯಾಯಾಲಯದ ಪೂರ್ವ-ವಿಚಾರಣಾ ಕೊಠಡಿಯು ಹೊರಡಿಸಿದ ಆದೇಶದಲ್ಲಿ ಯಾವುದೇ ದೋಷಗಳಿಲ್ಲ ಎಂದು ಕಂಡುಹಿಡಿದಿದೆ. ನ್ಯಾಯಾಲಯವು ಮೇ 2018 ಮತ್ತು ಜೂನ್ 2021 ರಲ್ಲಿ ಮುಂಬೈನ ವಿಶೇಷ ನ್ಯಾಯಾಲಯವು ಹೊರಡಿಸಿದ ಬಂಧನ ವಾರಂಟ್‌ಗಳನ್ನು "ಜಾರಿಗೊಳಿಸಬಹುದಾಗಿದೆ" ಎಂದು ಘೋಷಿಸಿತು. ಇದು ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ದಾರಿ ಮಾಡಿಕೊಟ್ಟಿತು.

13,000 ಕೋಟಿ ರೂಪಾಯಿ ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ, ಪರಾರಿಯಾದ ಮೆಹುಲ್ ಚೋಕ್ಸಿಯನ್ನು ಹಸ್ತಾಂತರಿಸಿದರೆ ನ್ಯಾಯಯುತ ವಿಚಾರಣೆಯನ್ನು ನಿರಾಕರಿಸುವ ಅಥವಾ ಭಾರತದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುವ ಅಪಾಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. 13,000 ಕೋಟಿ ಹಗರಣದಲ್ಲಿ ಚೋಕ್ಸಿ ಮಾತ್ರ 6,400 ಕೋಟಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಭಾರತೀಯ ತನಿಖಾ ಸಂಸ್ಥೆ, ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ಆರೋಪಿಸಿದೆ. ಹಗರಣ ಪತ್ತೆಯಾಗುವ ಕೆಲವು ದಿನಗಳ ಮೊದಲು 2018ರ ಜನವರಿಯಲ್ಲಿ ಆಂಟಿಗುವಾ ಮತ್ತು ಬಾರ್ಬುಡಾಗೆ ಪಲಾಯನ ಮಾಡಿದ್ದ ಚೋಕ್ಸಿ ನಂತರ ಬೆಲ್ಜಿಯಂನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ವೈದ್ಯಕೀಯ ಚಿಕಿತ್ಸೆಗಾಗಿ ಹೋಗಿದ್ದರು ಎನ್ನಲಾಗಿದೆ.

ಮುಂಬೈನ ವಿಶೇಷ ನ್ಯಾಯಾಲಯ ಹೊರಡಿಸಿದ ಬಂಧನ ವಾರಂಟ್‌ನ ಆಧಾರದ ಮೇಲೆ, 2024ರ ಆಗಸ್ಟ್ 27ರಂದು ಭಾರತವು ಬೆಲ್ಜಿಯಂ ಸರ್ಕಾರಕ್ಕೆ ಹಸ್ತಾಂತರ ವಿನಂತಿಯನ್ನು ಕಳುಹಿಸಿತು. ಚೋಕ್ಸಿಯ ಸುರಕ್ಷತೆ, ಭಾರತದಲ್ಲಿ ವಿಚಾರಣೆಯ ಸಮಯದಲ್ಲಿ ಅವರು ಎದುರಿಸಲಿರುವ ಆರೋಪಗಳು, ಜೈಲು ವ್ಯವಸ್ಥೆಗಳು, ಮಾನವ ಹಕ್ಕುಗಳು ಮತ್ತು ವೈದ್ಯಕೀಯ ಅಗತ್ಯಗಳ ಕುರಿತು ಭಾರತವು ಬೆಲ್ಜಿಯಂಗೆ ಹಲವಾರು ಭರವಸೆಗಳನ್ನು ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ಪುನಾರಚನೆ: ಆತುರದ ನಿರ್ಧಾರ ಕೈಗೊಳ್ಳದೆ, ಕಾದು ನೋಡುವ ತಂತ್ರ ಅಳವಡಿಸಿಕೊಂಡ 'ಕೈ' ಕಮಾಂಡ್

ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್‌ಗೆ ಆಡಳಿತ ವಿರೋಧಿ ಅಲೆ ಸಹಾಯ ಮಾಡುತ್ತದೆ: ಸಿಎಂ ಸಿದ್ದರಾಮಯ್ಯ

ನವರತ್ನ ಧಾರಣೆ: ಗ್ರಹಗಳ ಅಧಿಪತಿ 'ಸೂರ್ಯ'ನ ಫಲ ಪಡೆಯಲು ಯಾವ ರತ್ನ ಧರಿಸಬೇಕು?

ಉಪ ಮುಖ್ಯಮಂತ್ರಿಯಾಗಲು ನಾನು ಸಿದ್ಧ: ಹೈಕಮಾಂಡ್ ಬಯಸಿದರೆ ಸಚಿವ ಸ್ಥಾನ ತ್ಯಾಗ; ಜಮೀರ್‌ ಅಹ್ಮದ್‌ ಖಾನ್‌

ನ.18ರಿಂದ Bengaluru Tech Summit 2025: ‘ಡೀಪ್‌ಟೆಕ್ ದಶಕ’ಕ್ಕೆ 600 ಕೋಟಿ ರೂ. ಹೂಡಿಕೆ; ಸಚಿವ ಪ್ರಿಯಾಂಕ್ ಖರ್ಗೆ

SCROLL FOR NEXT