ಎರಿಕ್ ಟ್ರಂಪ್ ಹಾಗೂ ಜೋಹ್ರಾನ್ ಮಮ್ದಾನಿ  
ವಿದೇಶ

ಭಾರತೀಯ ಮೂಲದ ಮಮ್ದಾನಿ "ಭಾರತೀಯರನ್ನು ದ್ವೇಷಿಸುತ್ತಾರೆ: ಹೊಸ ಬಾಂಬ್ ಸಿಡಿಸಿದ ಡೊನಾಲ್ಡ್ ಟ್ರಂಪ್ ಪುತ್ರ!

ಮಮ್ದಾನಿ ಯಹೂದಿ ಜನರನ್ನು ದ್ವೇಷಿಸುತ್ತಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬಂಧಿಸಲು ಬಯಸುತ್ತಿದ್ದಾರೆ

ವಾಷಿಂಗ್ಟನ್: ನ್ಯೂಯಾರ್ಕ್ ನ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಜೋಹ್ರಾನ್ ಮಮ್ದಾನಿ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಮ್ದಾನಿ ಭಾರತೀಯರನ್ನು ದ್ವೇಷಿಸುತ್ತಾರೆ ಎಂದು ಆರೋಪಿಸಿದ್ದು, ಅವರನ್ನು ಕಮ್ಯುನಿಸ್ಟ್ ಎಂದು ಕರೆದಿದ್ದಾರೆ.

ಮಮ್ದಾನಿ ಯಹೂದಿ ಜನರನ್ನು ದ್ವೇಷಿಸುತ್ತಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬಂಧಿಸಲು ಬಯಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನ್ಯೂಯಾರ್ಕ್ ನಗರದ ವಿರುದ್ಧ ಸ್ಪರ್ಧಿಸುವ ಸ್ಥಳ ಜಗತ್ತಿನಲ್ಲಿ ಯಾವುದು ಇಲ್ಲ. ನೀವು, ಸಮಾಜವಾದಿ, ಕಮ್ಯುನಿಸ್ಟ್. ಆದಾಗ್ಯೂ, ನೆತನ್ಯಾಹು ಅವರನ್ನು ಬಂಧಿಸಲು ಬಯಸುವ, ಯಹೂದಿಗಳನ್ನು ದ್ವೇಷಿಸುವ, ಭಾರತೀಯರನ್ನು ದ್ವೇಷಿಸುವ, ಕಾನೂನು ಜಾರಿ ಸಂಸ್ಥೆಗಳಿಗೆ ಹಣೆಪಟ್ಟಿ ಕಟ್ಟಲು ಬಯಸುವ ವ್ಯಕ್ತಿ. ಅದರಿಂದ ಎಷ್ಟು ಬೆಲೆ ತೆರಬೇಕಾಗುತ್ತದೆ ಎಂದು ನಿಮಗೆ ಗೊತ್ತಿದೆ. ಇದು ತುಂಬಾ ದುಃಖಕರವಾಗಿದೆ ಎಂದು ಎರಿಕ್ ಟ್ರಂಪ್ ಹೇಳಿದ್ದಾರೆ.

ಸುರಕ್ಷಿತ, ಸ್ವಚ್ಛ ಬೀದಿಗಳು, ಸಮಂಜಸವಾದ ತೆರಿಗೆಗಳ ಮೇಲೆ ಗಮನ ಕೇಂದ್ರೀಕರಿಸುವುದು ನೂತನ ಮೇಯರ್ ಕೆಲಸವಾಗಿದೆ ಎಂದು ಟ್ರಂಪ್ ಆರ್ಗನೈಸೇಶನ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರೂ ಆಗಿರುವ ಎರಿಕ್ ಹೇಳಿದ್ದಾರೆ.

ಜೋಹ್ರಾನ್ ಮಮ್ದಾನಿ, ಈ ತಿಂಗಳ ಆರಂಭದಲ್ಲಿ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಇವರು ನಗರದ ಮೊದಲ ಮುಸ್ಲಿಂ ಮೇಯರ್ ಹಾಗೂ ಕಿರಿಯ ಮೇಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಸಿಎನ್‌ಎನ್ ಪ್ರಕಾರ ಅವರು ಜನವರಿ 1 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ನವೆಂಬರ್ 2024 ರಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ಹೊರಡಿಸಿದ ಬಂಧನ ವಾರಂಟ್ ಅನ್ನು ಉಲ್ಲೇಖಿಸಿ, ಇಸ್ರೇಲಿ ಪ್ರಧಾನಿ ನ್ಯೂಯಾರ್ಕ್‌ಗೆ ಕಾಲಿಟ್ಟರೆ ನೆತನ್ಯಾಹು ಅವರನ್ನು ಬಂಧಿಸುವುದಾಗಿ ಮಮ್ದಾನಿ ಈ ಹಿಂದೆ ಹೇಳಿದ್ದರು. ನೆತನ್ಯಾಹು ಎಂದಾದರೂ ನಗರಕ್ಕೆ ಭೇಟಿ ನೀಡಿದರೆ, ಐಸಿಸಿ ವಾರಂಟ್ ಅನ್ನು ಗೌರವಿಸುವುದಾಗಿ ಮತ್ತು ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸುವುದಾಗಿ ಮಮ್ದಾನಿ ಪದೇ ಪದೇ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿಯ 'ವೋಟ್ ಚೋರಿ' ಆರೋಪ ಖಂಡಿಸಿ 272 ಗಣ್ಯರಿಂದ ಬಹಿರಂಗ ಪತ್ರ; ಚುನಾವಣಾ ಆಯೋಗದ ಪರವಾಗಿ ವಾದ!

'ನರಕಾಸುರ' ಮೋದಿಯನ್ನು ಕೊಲ್ಲಬೇಕು': ಜನರ ಎದುರೇ DMK ನಾಯಕನಿಂದ ಕೊಲೆ ಬೆದರಿಕೆ, ಚಪ್ಪಾಳೆ ತಟ್ಟಿದ ಮಹಿಳೆಯರು, Video

'ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೂ ನುಗ್ಗಿ ಭಾರತವನ್ನು ಹೊಡೆದಿದ್ದೇವೆ: ಈವರೆಗೂ ಶವ ಎಣಿಕೆ ಮಾಡೋದಕ್ಕೆ ಆಗ್ತಿಲ್ಲ! ಪಾಕಿಸ್ತಾನದ ಉದ್ಧಟತನ

ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್: ನನಗೇನು ಗೊತ್ತಿಲ್ಲ ಅನ್ನುತ್ತಿದ್ದ ಧನ್ವೀರ್ ಈಗ ವಿಜಯಲಕ್ಷ್ಮೀ ಹೆಸರು ಬಾಯಿಬಿಟ್ಟ!

ರೈಲಿನಲ್ಲಿ ಯುವಕನೋರ್ವ ನನ್ನ ಕುತ್ತಿಗೆ, ಬೆನ್ನು, ಖಾಸಗಿ ಭಾಗ ಮುಟ್ಟಿದ್ದ, ತಿರುಗಿ ನೋಡುವಷ್ಟರಲ್ಲಿ...: ಸಾರ್ವಜನಿಕ ಸ್ಥಳದಲ್ಲಾಗಿದ್ದ ಕರಾಳ ಘಟನೆ ತೆರದಿಟ್ಟ ನಟಿ Girija Oak

SCROLL FOR NEXT