ಗಾಜಾಗೆ ಹೋಗುವ ಸುಮುದ್ ಫ್ಲೋಟಿಲ್ಲಾ ಹಡಗು  
ವಿದೇಶ

ಇಸ್ರೇಲ್ ಪ್ರತಿಬಂಧ: ಗಾಜಾ ಕಡೆ ನೆರವು ಹೊತ್ತು ಸಾಗಿದ ಫ್ಲೋಟಿಲ್ಲಾ ಹಡಗು

ಫ್ಲೋಟಿಲ್ಲಾ 42 ಹಡಗುಗಳನ್ನು ಅಕ್ರಮವಾಗಿ ತಡೆಹಿಡಿಯಲಾಗಿದೆ, ಪ್ರಯಾಣಿಕರನ್ನು ಕಾನೂನುಬಾಹಿರವಾಗಿ ಅಪಹರಿಸಲಾಗಿದೆ ಎಂದು ಹೇಳಿದೆ.

ಜೆರುಸಲೆಮ್: ಇಸ್ರೇಲ್ ನೌಕಾಪಡೆಯು ತನ್ನ ಸಹವರ್ತಿ ಹಡಗುಗಳನ್ನು ತಡೆಹಿಡಿದ ನಂತರ, ಗಾಜಾಗೆ ನೆರವು ಸಾಗಿಸುತ್ತಿದ್ದ ಫ್ಲೋಟಿಲ್ಲಾದಲ್ಲಿ ಉಳಿದಿದ್ದ ಏಕೈಕ ಹಡಗು ಯುದ್ಧಪೀಡಿತ ಪ್ಯಾಲೆಸ್ತೀನ್ ಪ್ರದೇಶದ ಕಡೆಗೆ ಸಾಗಿತು.

ಇಸ್ರೇಲ್ ನೌಕಾಪಡೆಯು ತನ್ನ ಸಹವರ್ತಿ ಹಡಗುಗಳನ್ನು ತಡೆದಿದೆ. ವಿಶ್ವಸಂಸ್ಥೆಯು ಹೇಳುವಂತೆ ಸ್ವೀಡಿಷ್ ಪ್ರಚಾರಕಿ ಗ್ರೆಟಾ ಥನ್‌ಬರ್ಗ್ ಸೇರಿದಂತೆ ರಾಜಕಾರಣಿಗಳು ಮತ್ತು ಕಾರ್ಯಕರ್ತರನ್ನು ಗಾಜಾ ಕಡೆಗೆ ಕರೆದೊಯ್ಯುವ ಡಜನ್‌ಗಟ್ಟಲೆ ಹಡಗುಗಳನ್ನು ಒಳಗೊಂಡ ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ಕಳೆದ ತಿಂಗಳು ಪ್ರಯಾಣ ಬೆಳೆಸಿತ್ತು.

ಇಸ್ರೇಲ್ ನೌಕಾಪಡೆ ಬುಧವಾರ ಅವರನ್ನು ತಡೆಹಿಡಿಯಲು ಪ್ರಾರಂಭಿಸಿತು. ಮರುದಿನ 400 ಕ್ಕೂ ಹೆಚ್ಚು ಜನರಿದ್ದ ದೋಣಿಗಳನ್ನು ಕರಾವಳಿ ಪ್ರದೇಶವನ್ನು ತಲುಪದಂತೆ ತಡೆಯಲಾಗಿದೆ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ಹೇಳಿದರು.

ಫ್ಲೋಟಿಲ್ಲಾ 42 ಹಡಗುಗಳನ್ನು ಅಕ್ರಮವಾಗಿ ತಡೆಹಿಡಿಯಲಾಗಿದೆ, ಪ್ರಯಾಣಿಕರನ್ನು ಕಾನೂನುಬಾಹಿರವಾಗಿ ಅಪಹರಿಸಲಾಗಿದೆ ಎಂದು ಹೇಳಿದೆ. ಇದರಿಂದಾಗಿ ಫ್ಲೋಟಿಲ್ಲಾದ ಟ್ರ್ಯಾಕರ್ ಪ್ರಕಾರ, ಗಾಜಾದ ಇಸ್ರೇಲ್ ದಿಗ್ಬಂಧನವನ್ನು ಮುರಿಯುವ ತನ್ನ ಕಾರ್ಯಾಚರಣೆಯೊಂದಿಗೆ ಮ್ಯಾರಿನೆಟ್ ಎಂಬ ಒಂದೇ ಒಂದು ಹಡಗು ಮುಂದುವರಿಯಿತು.

ನೆತನ್ಯಾಹು ಪ್ರಶಂಸೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಬಂಧಗಳನ್ನು ಶ್ಲಾಘಿಸಿದರು. ಯೋಮ್ ಕಿಪ್ಪೂರ್‌ನಲ್ಲಿ ತಮ್ಮ ಕಾರ್ಯಾಚರಣೆಯನ್ನು ಅತ್ಯಂತ ವೃತ್ತಿಪರ ಮತ್ತು ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸಿದ ಸೈನಿಕರು ಮತ್ತು ನೌಕಾಪಡೆಯ ಕಮಾಂಡರ್‌ಗಳನ್ನು ನಾನು ಶ್ಲಾಘಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರ ಪ್ರಮುಖ ಕ್ರಮವು ಡಜನ್ ಗಟ್ಟಲೆ ಹಡಗುಗಳು ಯುದ್ಧ ವಲಯಕ್ಕೆ ಪ್ರವೇಶಿಸುವುದನ್ನು ತಡೆಯಿತು ಮತ್ತು ಇಸ್ರೇಲ್ ವಿರುದ್ಧದ ಕಾನೂನುಬಾಹಿರ ಕಾರ್ಯಾಚರಣೆಯನ್ನು ಹಿಮ್ಮೆಟ್ಟಿಸಿತು.

ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಮತ್ತು ಆಸ್ಪತ್ರೆಗಳು, ಪ್ರದೇಶದ ಮೇಲೆ ಇಸ್ರೇಲಿ ದಾಳಿಗಳು ಗುರುವಾರ ಕನಿಷ್ಠ 56 ಜನರನ್ನು ಕೊಂದಿವೆ ಎಂದು ಹೇಳಿವೆ. ಇದರಲ್ಲಿ ಫ್ರೆಂಚ್ ಚಾರಿಟಿ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್‌ನ ಉದ್ಯೋಗಿಯೂ ಸೇರಿದ್ದಾರೆ.

ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯು ಗಾಜಾದಲ್ಲಿ 66,225 ಪ್ಯಾಲೆಸ್ತೀನಿಯರನ್ನು ಕೊಂದಿದೆ, ಅವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT