ಮಾರುಕಟ್ಟೆ ಮೇಲೆ ದಾಳಿ online desk
ವಿದೇಶ

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

ಘಟನೆಯಲ್ಲಿ ಅನೇಕರಿಗೆ ಗಾಯಗಳಾಗಿವೆ ಎಂದು ಮಾನವ ಹಕ್ಕು ಸಂಘಟನೆ ಹಾಗೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಬುಜಾ: ನೈಜೀರಿಯಾ ವಾಯುಪಡೆಯು ಜಿಹಾದಿ ಬಂಡುಕೋರರನ್ನು ಗುರಿಯಾಗಿಸಿ ನಡೆಸಿದ ವಾಯುದಾಳಿ ಈಶಾನ್ಯ ನೈಜೀರಿಯಾದ ಸ್ಥಳೀಯ ಮಾರುಕಟ್ಟೆಗೆ ತಗುಲಿ, 100 ಕ್ಕೂ ಹೆಚ್ಚು ನಿವಾಸಿಗಳು ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಅನೇಕರಿಗೆ ಗಾಯಗಳಾಗಿವೆ ಎಂದು ಮಾನವ ಹಕ್ಕು ಸಂಘಟನೆ ಹಾಗೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಧಿಕಾರಿಗಳು ದಾಳಿ ತಪ್ಪಾಗಿ ನಡೆದಿರುವುದನ್ನು ಒಪ್ಪಿಕೊಂಡರೂ, ಹೆಚ್ಚಿನ ವಿವರಗಳನ್ನು ನೀಡಿಲ್ಲ. ಯೋಬೆ ರಾಜ್ಯದ, ಬೊರ್ನೋ ರಾಜ್ಯ ಗಡಿಗೆ ಸಮೀಪವಿರುವ ಒಂದು ಹಳ್ಳಿಯಲ್ಲಿ ನಡೆದ ಈ ವಾಯುದಾಳಿಯಲ್ಲಿ ಕನಿಷ್ಠ 100 ಜನರು ಸಾವಿಗೀಡಾಗಿದ್ದಾರೆ ಎಂಬುದನ್ನು ಬದುಕುಳಿದವರಿಂದ ದೃಢಪಡಿಸಿದ್ದೇವೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ತಿಳಿಸಿದೆ.

ಜಿಹಾದಿ ದಂಗೆ ದಶಕಕ್ಕಿಂತ ಹೆಚ್ಚು ಕಾಲದಿಂದ ಅಟ್ಟಹಾಸ ಮೆರೆಯುತ್ತಿರುವ ಈ ಪ್ರದೇಶದಲ್ಲಿ, ನೈಜೀರಿಯಾದಲ್ಲಿ ಇಂತಹ ತಪ್ಪು ದಾಳಿಗಳು ಸಾಮಾನ್ಯವಾಗಿವೆ; ಸೇನೆ ಅರಣ್ಯ ಪ್ರದೇಶಗಳನ್ನು ಅಡಗುದಾಣವನ್ನಾಗಿಸಿಕೊಂಡಿರುವ ಶಸ್ತ್ರಸಜ್ಜಿತ ಗುಂಪುಗಳ ವಿರುದ್ಧ ಆಗಾಗ್ಗೆ ವಾಯುದಾಳಿಗಳನ್ನು ನಡೆಸುತ್ತದೆ. ಆದರೆ ಈ ದಾಳಿಗಳ ಪರಿಣಾಮವಾಗಿ 2017 ರಿಂದ ಕನಿಷ್ಠ 500 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾದ ಸಾವುಗಳ ಎಪಿ ಲೆಕ್ಕಾಚಾರ ಸೂಚಿಸುತ್ತದೆ.

ಗುಪ್ತಚರ ಮಾಹಿತಿ ಸಂಗ್ರಹಣೆಯಲ್ಲಿನ ಕೊರತೆಗಳು, ಭೂದಳ, ವಾಯುಪಡೆ ಹಾಗೂ ಇತರ ಪಾಲುದಾರರ ನಡುವೆ ಸಮನ್ವಯದ ಅಭಾವವೇ ಇಂತಹ ಘಟನೆಗಳಿಗೆ ಕಾರಣವೆಂದು ಭದ್ರತಾ ವಿಶ್ಲೇಷಕರು ಸೂಚಿಸುತ್ತಾರೆ.

ಯೋಬೆ ರಾಜ್ಯ ಸರ್ಕಾರ ಪ್ರಕಟಣೆ ಮೂಲಕ, ನೈಜೀರಿಯಾ ಸೈನ್ಯದ ದಾಳಿ ಆ ಪ್ರದೇಶದಲ್ಲಿರುವ ಬೊಕೊ ಹರಾಮ್ ಜಿಹಾದಿ ಸಂಘಟನೆಯ ಗಡಿಪಾರನ್ನು ಗುರಿಯಾಗಿಸಿಕೊಂಡಿತ್ತು ಮತ್ತು “ಜಿಲ್ಲಿ ವಾರಾಂತರ ಮಾರುಕಟ್ಟೆಗೆ ಹೋದ ಕೆಲವರು ಪರಿಣಾಮಕ್ಕೆ ಒಳಗಾಗಿದ್ದಾರೆ” ಎಂದು ದೃಢಪಡಿಸಿದೆ.

“ನಾವು ಅಲ್ಲಿ ಇರುವ ಜನರೊಂದಿಗೆ ಸಂಪರ್ಕದಲ್ಲಿದ್ದೇವೆ, ಆಸ್ಪತ್ರೆಯವರೊಂದಿಗೆ ಮಾತನಾಡಿದ್ದೇವೆ. ಗಾಯಾಳುಗಳ ಜವಾಬ್ದಾರರಾಗಿರುವ ವ್ಯಕ್ತಿಯೊಂದಿಗೆ ಹಾಗೂ ಬಾಧಿತರೊಂದಿಗೆ ಸಹ ಮಾತುಕತೆ ನಡೆಸಿದ್ದೇವೆ,” ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ನೈಜೀರಿಯಾ ನಿರ್ದೇಶಕ ಇಸಾ ಸನುಸಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ನೈಜೀರಿಯಾ ವಾಯುಪಡೆಯು ಎಪಿ ಕಳುಹಿಸಿದ ಪ್ರಶ್ನೆಗೆ ತಕ್ಷಣ ಪ್ರತಿಕ್ರಿಯಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel