ಸುಧನ್ ಗುರುಂಗ್ 
ವಿದೇಶ

ನೇಪಾಳದಲ್ಲಿ ಭುಗಿಲೆದ್ದ ಆಕ್ರೋಶ: ಬಾಲೆನ್ ಶಾ ಸರ್ಕಾರದ ಮೊದಲ ವಿಕೆಟ್ ಪತನ; 26 ದಿನಕ್ಕೇ ಗೃಹ ಸಚಿವ ರಾಜಿನಾಮೆ!

ನೇಪಾಳದ ಗೃಹ ಸಚಿವ ಸುಧನ್ ಗುರುಂಗ್ ಅವರು ಅಧಿಕಾರ ವಹಿಸಿಕೊಂಡ 26 ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಹಣಕಾಸಿನ ಆಸ್ತಿಗಳ ಬಗ್ಗೆ ಎದ್ದಿರುವ ಕಳವಳಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನು ಉಲ್ಲೇಖಿಸಿ ಸುಧನ್ ಗುರುಂಗ್ ರಾಜಿನಾಮೆ ನಿರ್ಧಾರ ಪ್ರಕಟಿಸಿದ್ದಾರೆ.

ನೇಪಾಳದ ಗೃಹ ಸಚಿವ ಸುಧನ್ ಗುರುಂಗ್ ಅವರು ಅಧಿಕಾರ ವಹಿಸಿಕೊಂಡ 26 ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಹಣಕಾಸಿನ ಆಸ್ತಿಗಳ ಬಗ್ಗೆ ಎದ್ದಿರುವ ಕಳವಳಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನು ಉಲ್ಲೇಖಿಸಿ ಸುಧನ್ ಗುರುಂಗ್ ರಾಜಿನಾಮೆ ನಿರ್ಧಾರ ಪ್ರಕಟಿಸಿದ್ದಾರೆ. ಉದ್ಯಮಿ ದೀಪಕ್ ಭಟ್ಟ ಅವರೊಂದಿಗೆ ವ್ಯವಹಾರ ಪಾಲುದಾರಿಕೆ ಮತ್ತು ಸೂಕ್ಷ್ಮ ವಿಮಾ ಕಂಪನಿಗಳಲ್ಲಿ ಅನುಮಾನಾಸ್ಪದ ಹೂಡಿಕೆಗಳನ್ನು ಹೊಂದಿರುವ ಆರೋಪವನ್ನು ಸುಧನ್ ಗುರುಂಗ್ ಎದುರಿಸುತ್ತಿದ್ದಾರೆ. ದೀಪಕ್ ಭಟ್ಟ ಅವರ ಮೇಲೆ ಹಣ ವರ್ಗಾವಣೆ ಆರೋಪವಿದ್ದು, ತನಿಖೆ ನಡೆಯುತ್ತಿದೆ.

ಗೃಹ ಸಚಿವರಾದ ನಂತರ ಭ್ರಷ್ಟಾಚಾರದ ವಿರುದ್ಧ ಆಕ್ರಮಣಕಾರಿ ನಿಲುವು ತೆಗೆದುಕೊಂಡ ಸುಧನ್ ಗುರುಂಗ್, ಈಗ ತಮ್ಮ ವೈಯಕ್ತಿಕ ಹೂಡಿಕೆಗಳ ಬಗ್ಗೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವ್ಯಾಪಕ ಪ್ರತಿಭಟನೆಗಳ ನಂತರ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುಧನ್ ಗುರುಂಗ್ ಬರೆದಿದ್ದಾರೆ. ನನ್ನ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ಅಧಿಕಾರದಲ್ಲಿರುವಾಗ ಯಾವುದೇ ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಲು ಮತ್ತು ತನಿಖಾ ಪ್ರಕ್ರಿಯೆಯ ಮೇಲೆ ಯಾವುದೇ ಪ್ರಭಾವ ಬೀರುವುದನ್ನು ತಪ್ಪಿಸಲು, ನಾನು ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ನನಗೆ, ನೈತಿಕತೆಯು ಸ್ಥಾನಕ್ಕಿಂತ ಹೆಚ್ಚು. ಸಾರ್ವಜನಿಕ ನಂಬಿಕೆಗಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ. ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬೇಡುತ್ತಿರುವ ನೇಪಾಳದಲ್ಲಿ ನಡೆಯುತ್ತಿರುವ Gen Z ಚಳುವಳಿಯು ಸಹ ಅದೇ ಸಂದೇಶವನ್ನು ರವಾನಿಸಿದೆ. ಸಾರ್ವಜನಿಕ ಜೀವನವು ಶುದ್ಧವಾಗಿರಬೇಕು. ನಾಯಕತ್ವವು ಜವಾಬ್ದಾರಿಯುತವಾಗಿರಬೇಕು. ನನ್ನ 46 ಸಹೋದರ ಸಹೋದರಿಯರ ರಕ್ತ ಮತ್ತು ತ್ಯಾಗದಿಂದ ರೂಪುಗೊಂಡ ಸರ್ಕಾರವನ್ನು ಯಾರಾದರೂ ಪ್ರಶ್ನಿಸಿದರೆ, ನನ್ನ ಉತ್ತರ ನೈತಿಕತೆ. ತಮ್ಮ ವಿರುದ್ಧದ ಆರೋಪಗಳ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿಯೂ ಹೇಳಿದ್ದಾರೆ.

ಹಲವಾರು ವದಂತಿಗಳನ್ನು ಉಲ್ಲೇಖಿಸಿ ಸುಧನ್ ಗುರುಂಗ್ ಎಲ್ಲರಿಗೂ ಊಹಾಪೋಹಗಳಿಂದ ದೂರವಿರಲು ಮನವಿ ಮಾಡಿದರು. ಆರೋಪಗಳು ಮತ್ತು ಸತ್ಯ ಒಂದೇ ಅಲ್ಲ. ನಿರ್ಧಾರಗಳು ಭಾವನೆಗಳ ಆಧಾರದ ಮೇಲೆ ಇರಬೇಕು. ಪುರಾವೆಗಳ ಆಧಾರದ ಮೇಲೆ ಇರಬೇಕು. ಪಕ್ಷವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ ಮತ್ತು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ ಎಂದು ಹೇಳಿದರು.

ಬಾಲೆನ್ ಶಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಹೊಸ ಸರ್ಕಾರದ ವಿರುದ್ದ ಜನಾಕ್ರೋಶ ಭುಗಲೆದಿದ್ದು ವಿದ್ಯಾರ್ಥಿಗಳು, ರಾಜಕೀಯ ಗುಂಪುಗಳು ಮತ್ತು ಸಾಮಾನ್ಯ ನಾಗರಿಕರು ಸೇರಿದಂತೆ ಪ್ರತಿಭಟನಾಕಾರರು ಕಠ್ಮಂಡು ಮತ್ತು ಇತರ ನಗರಗಳಲ್ಲಿ ಬೀದಿಗಿಳಿದಿದ್ದಾರೆ. ಸದ್ಯ ಈ ಪ್ರತಿಭಟನೆಗಳು ಬೀದಿಗಳಿಂದ ದೇಶದ ಆಡಳಿತ ಕೇಂದ್ರವಾದ ಸಿಂಘಾ ದರ್ಬಾರ್‌ಗೆ ಹರಡಿವೆ. ಭಾರತದಿಂದ ತರುವ 100 ರೂ.ಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಮೇಲಿನ ಕಡ್ಡಾಯ ಸುಂಕ ಸೇರಿದಂತೆ ವಿದ್ಯಾರ್ಥಿ ಯೂನಿಯನ್‌ ಬ್ಯಾನ್‌ ಮಾಡಿರುವುದು ಪ್ರತಿಭಟನೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ 'ಟೆರರಿಸ್ಟ್': ಮಲ್ಲಿಕಾರ್ಜುನ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್; 24 ಗಂಟೆ ಗಡುವು!

ಹಲವು ಗೊಂದಲಗಳ ನಡುವೆ ನಾಳೆ SSLC ಫಲಿತಾಂಶ ಪ್ರಕಟ: ಕೋರ್ಟ್ ಆದೇಶದಂತೆ ಹಿಂದಿಗೆ ಅಂಕ

ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಮೇಲೆ ಅತ್ಯಾಚಾರ; ಮಗುವಾಗಿರುವುದರಿಂದ ಮದ್ವೆಯಾಗುವುದೇ ಉತ್ತಮ: ಹೈಕೋರ್ಟ್

ರೆಟ್ರೋ ಲುಕ್, ಮಂಡ್ಯ ಸ್ಲ್ಯಾಂಗ್.. ಕೈಯಲ್ಲಿ ಲಾಂಗು, ಮೈ ತುಂಬ ನೆತ್ತರು..; ಕುತೂಹಲ ಕೆರಳಿಸಿದ KD ಚಿತ್ರದ ಟ್ರೈಲರ್!

ನಾವು ಯಾರ ಮಾತು ಕೇಳಲ್ಲ: ಹಾರ್ಮುಜ್ ಮೂಲಕ ಭಾರತಕ್ಕೆ ಬರುತ್ತಿದ್ದ ಹಡಗು ಸೇರಿ 3 ಹಡಗುಗಳನ್ನು ವಶಕ್ಕೆ ಪಡೆದ ಇರಾನ್!

SCROLL FOR NEXT