ಪೊಲೀಸರು ವಶಕ್ಕೆ ಪಡೆದ ಹಣ 
ವಿದೇಶ

ನೇಪಾಳ ಪ್ರವಾಹದಲ್ಲಿ ಕೊಚ್ಚಿ ಹೋದ ಬ್ಯಾಂಕ್ ಲಾಕರ್! ಲೂಟಿ, 29 ಮಂದಿ ಬಂಧನ, 92 ಲಕ್ಷ ರೂ. ವಶ!

ಬ್ಯಾಂಕ್ ಲಾಕರ್ ಒಡೆದು ತೆರೆದ ಆರೋಪದ ಮೇಲೆ ನೇಪಾಳದ ಭದ್ರತಾ ಪಡೆಗಳು ಧಾಡಿಂಗ್‌ನಲ್ಲಿ 29 ಮಂದಿಯನ್ನು ಬಂಧಿಸಿವೆ.

ಕಠ್ಮಂಡು: ಜಗತ್ತಿನಲ್ಲಿ ಕಂಡು ಕೇಳರಿಯದ ರೀತಿಯ ಜಲ ಪ್ರಳಯಕ್ಕೆ ತುತ್ತಾಗಿರುವ ನೇಪಾಳದಲ್ಲಿ ಬಲಿಯಾದವರ ಸಂಖ್ಯೆ 600ಕ್ಕೂ ಮೀರಿದ್ದು, ಸಹಸ್ರಾರು ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿರುವಂತೆಯೇ ಸಾರ್ವಜನಿಕ, ವಾಣಿಜ್ಯ ಮತ್ತು ಖಾಸಗಿ ಆಸ್ತಿಗಳ ಕಳ್ಳತನ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿದೆ.

ರಸುವಾ ಮತ್ತು ಸುತ್ತಮುತ್ತಲಿನ ಮೇಲ್ಭಾಗದ ಜಲಾನಯನ ಪ್ರದೇಶಗಳಿಂದ ಉಗಮವಾಗುವ ತ್ರಿಶೂಲಿ ನದಿಯ ಭೀಕರ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬ್ಯಾಂಕ್ ಲಾಕರ್ ಒಡೆದು ತೆರೆದ ಆರೋಪದ ಮೇಲೆ ನೇಪಾಳದ ಭದ್ರತಾ ಪಡೆಗಳು ಧಾಡಿಂಗ್‌ನಲ್ಲಿ 29 ಮಂದಿಯನ್ನು ಬಂಧಿಸಿವೆ.

ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ ಜಂಟಿ ಗಸ್ತು ತಂಡವು, ಹಾನಿಗೊಳಗಾದ ಬ್ಯಾಂಕ್ ಲಾಕರ್ ನಿಂದ ಅಕ್ರಮವಾಗಿ ಹಣವನ್ನು ಹೊರತೆಗೆಯುತ್ತಿದ್ದ ಶಂಕಿತರನ್ನು ಸೆರೆಹಿಡಿದಿದೆ. ಅಧಿಕಾರಿಗಳು ಸ್ಥಳದಿಂದ 92, 68,505 ರೂ. ನೇಪಾಳಿ ನಗದು (ಸುಮಾರು 57ಲಕ್ಷ) ವಶಪಡಿಸಿಕೊಂಡಿದ್ದಾರೆ.

ಬಂಧಿತ 29 ಶಂಕಿತರನ್ನು ಪ್ರಸ್ತುತ ಧಾಡಿಂಗ್‌ನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇರಿಸಲಾಗಿದ್ದು, ಅಲ್ಲಿ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ನೇಪಾಳ ಪೊಲೀಸ್ ವಕ್ತಾರ ಹಾಗೂ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (DIG) ಅಭಿ ನಾರಾಯಣ್ ಕಫ್ಲೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ವಿಪತ್ತು ನಿರ್ವಹಣಾ ಕಾರ್ಯಗಳ ನಡುವೆ ಸಾರ್ವಜನಿಕ, ವಾಣಿಜ್ಯ ಮತ್ತು ಖಾಸಗಿ ಆಸ್ತಿಗಳ ಮೇಲಿನ ಕಳ್ಳತನ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ತಡೆಯಲು ಭದ್ರತಾ ಸಂಸ್ಥೆಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಣ್ಗಾವಲು ಮತ್ತು ಗಸ್ತು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ ‘ಕ್ರೇಜಿ ಸ್ಟಾರ್’ ಎಂಟ್ರಿ ಸಾಧ್ಯತೆ

'ಕುಮಾರಸ್ವಾಮಿ ತಮ್ಮ ಹೆಂಡ್ತಿ ಫೋನ್ ಟ್ಯಾಪಿಂಗ್ ಮಾಡಿದ್ದರು, ನಿನ್ನ ಪತ್ನಿ ಮೇಲೆಯೇ ನಂಬಿಕೆ ಇಲ್ಲ, ಇನ್ನೂ...?': ಸಚಿವ ಬಾಲಕೃಷ್ಣ

'ಅಪ್ಪಾ.. ಪ್ಲೀಸ್ ಕರ್ಕೊಂಡು ಹೋಗು, ನನ್ನ ಸಾಯಿಸಿಬಿಡ್ತಾರೆ': ಹೆರಿಗೆಗೂ ಮುನ್ನ ಗೋಗರೆದ ಮಗಳು, ಕೊನೆಗೂ ಸಾವು, ವೈದ್ಯರ ಅಮಾನತು!

ಹೃದಯ ವಿದ್ರಾವಕ ಘಟನೆ: ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ; ಅನಾಥವಾದ ಕಂದಮ್ಮ!

ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ: ಅಟ್ರಾಸಿಟಿ ಕಾಯ್ದೆಯಡಿ FIR ದಾಖಲಿಸಲು ರಾಹುಲ್ ಗಾಂಧಿ ಒತ್ತಾಯ!