ಸಾಂದರ್ಭಿಕ ಚಿತ್ರ 
ವಿದೇಶ

ಹೆಂಡತಿಗೆ ಇಷ್ಟ ಬಂದಂಗೆ ಹೊಡೀಬೋದು; ಆದ್ರೆ ಮೂಳೆ ಮೂರಿಬಾರ್ದು ಅಷ್ಟೇ: ಕೌಟುಂಬಿಕ ದೌರ್ಜನ್ಯವನ್ನು ಕಾನೂನುಬದ್ಧಗೊಳಿಸಿದ ತಾಲಿಬಾನ್!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಪರಿಚಯಿಸಿದ ಹೊಸ ದಂಡ ಸಂಹಿತೆಯು, ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆಯನ್ನು ಕಾನೂನುಬದ್ಧಗೊಳಿಸಿದೆ.

ಕಾಬೂಲ್‌: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಸ್ತ್ರೀ ಸ್ವಾತಂತ್ರ್ಯ ಅಂದರೇನು ಎಂದು ಕೇಳುವಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಹುಚ್ಚು ಸರ್ಕಾರದಲ್ಲಿ ತಾಲಿಬಾನಿಗಳು ಇದೀಗ ಹೊಸದೊಂದು ಕಾನೂನು ಜಾರಿಗೆ ತಂದಿದ್ದಾರೆ.

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಪರಿಚಯಿಸಿದ ಹೊಸ ದಂಡ ಸಂಹಿತೆಯು, ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆಯನ್ನು ಕಾನೂನುಬದ್ಧಗೊಳಿಸಿದೆ.

ಮೂಳೆಗಳು ಮುರಿಯದ ರೀತಿಯಲ್ಲಿ ಗಂಡ ತನ್ನ ಹೆಂಡತಿ ಮತ್ತು ಮಕ್ಕಳನ್ನು ದೈಹಿಕವಾಗಿ ಶಿಕ್ಷಿಸಲು ಈ ಕಾನೂನು ಅನುವು ಮಾಡಿಕೊಡುತ್ತದೆ. ಇದರಿಂದ ಅಫ್ಘಾನಿಸ್ತಾನದ ಮಹಿಳೆಯರ ಸ್ಥಿತಿ ಇನ್ನಷ್ಟು ಶೋಚನೀಯಗೊಳ್ಳಲಿದೆ. ತಾಲಿಬಾನಿಗಳ ಹೊಸ ಕಾನೂನಿನ ಅನ್ವಯ ಹೆಂಡತಿಯು ದಾಸಿಯಾಗಿದ್ದು, ಆಕೆಗೆ ಹೊಡೆಯುವ ಸಂಪೂರ್ಣ ಅಧಿಕಾರವನ್ನು ಪತಿಗೆ ನೀಡಲಾಗಿದೆ.

ಸರ್ವೋಚ್ಚ ನಾಯಕ ಅಖುಂಡ್ಜಾದಾ ಸಹಿ ಮಾಡಿರುವ ಈ ಕಾನೂನಿನಲ್ಲಿ, ಸಣ್ಣ ತಪ್ಪುಗಳನ್ನು ಮಾಡಿದಾಗ ಹೆಂಡತಿಗೆ ಹೊಡೆಯಲು ಗಂಡನಿಗೆ ಹಾಗೂ ಮಕ್ಕಳಿಗೆ ಬಾರಿಸಲು ತಂದೆಗೆ ಥಳಿಸಲು ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅದರಿಂದ ಸಂತ್ರಸ್ತರಿಗೆ ಯಾವುದೇ ದೊಡ್ಡ ಗಾಯ ಅಥವಾ ಮೂಳೆ ಮುರಿತ ಆಗಬಾರದು ಎನ್ನಲಾಗಿದೆ. ಒಂದು ವೇಳೆ ಗಂಡ ಮೂಳೆ ಮುರಿಯುವಂತೆ ಹೆಂಡತಿಗೆ ಬಾರಿಸಿದರೆ ಗರಿಷ್ಠ 15 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಮತ್ತೊಂದೆಡೆ, ವಿವಾಹಿತ ಮಹಿಳೆ ತನ್ನ ಗಂಡನ ಅನುಮತಿಯಿಲ್ಲದೆ ತನ್ನ ಸಂಬಂಧಿಕರನ್ನು ಭೇಟಿ ಮಾಡಿದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು. ಅಲ್ಲದೇ ತನ್ನ ವಿರುದ್ಧದ ಕೌಟುಂಬಿಕ ಹಿಂಸೆಯನ್ನು ಸಾಬೀತುಪಡಿಸಲು, ಕಡ್ಡಾಯವಾಗಿ ತನ್ನ ಗಂಡನ ಜೊತೆಗೆ ಆಕೆ ನ್ಯಾಯಾಲಯಕ್ಕೆ ಬರಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ.

ಹೊಸ ದಂಡ ಸಂಹಿತೆಯ 9ನೇ ವಿಧಿಯು ಅಫ್ಘಾನ್‌ ಸಮಾಜವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸುತ್ತದೆ: ಧಾರ್ಮಿಕ ವಿದ್ವಾಂಸರು (ಉಲಮಾ), ಗಣ್ಯರು (ಅಶ್ರಫ್), ಮಧ್ಯಮ ವರ್ಗ ಮತ್ತು ಕೆಳವರ್ಗ. ಈ ವ್ಯವಸ್ಥೆಯಡಿಯಲ್ಲಿ ಒಂದೇ ಅಪರಾಧಕ್ಕೆ ಶಿಕ್ಷೆಯನ್ನು ಇನ್ನು ಮುಂದೆ ಪ್ರಾಥಮಿಕವಾಗಿ ಅಪರಾಧದ ಸ್ವರೂಪದಿಂದ ನಿರ್ಧರಿಸಲಾಗುವುದಿಲ್ಲ, ಬದಲಿಗೆ ಆರೋಪಿಯ ಸಾಮಾಜಿಕ ಸ್ಥಾನಮಾನದಿಂದ ನಿರ್ಧರಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಚಿತ ಕೊಡುಗೆಗಳು ಆರ್ಥಿಕ ಅಭಿವೃದ್ಧಿಗೆ ಅಡ್ಡಿ: ರಾಜಕೀಯದಲ್ಲಿ 'ಫ್ರೀಬೀಸ್‌' ಸಂಸ್ಕೃತಿ ಖಂಡಿಸಿದ ಸುಪ್ರೀಂ ಕೋರ್ಟ್

AI ಭಾರತದ ಭವಿಷ್ಯ, ಅದಕ್ಕೆ ಮುಕ್ತ ಅವಕಾಶ ಕೊಡಿ, ನಿಯಂತ್ರಣ ನಮ್ಮ ಕೈಯಲ್ಲಿರಲಿ, ಮಕ್ಕಳ ಸುರಕ್ಷತೆಯಿರಲಿ: ಪ್ರಧಾನಿ ಮೋದಿ-Video

ರಾಹುಲ್ ಗಾಂಧಿ, 25 ಸಂಸದರಿಗೆ ಕೊಲೆ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ 'ಗೋಡ್ಸೆ ಕಾರ್ಖಾನೆ' - ಕಾಂಗ್ರೆಸ್ ಕಿಡಿ

ಆಂಥ್ರೊಪಿಕ್ ವಿರುದ್ಧ ಆಂಥ್ರೊಪಿಕ್ ದೂರು: ಬೆಳಗಾವಿ ನ್ಯಾಯಾಲಯದಲ್ಲಿ ಕೇಸ್!

ಎಂಗೇಜ್‌ಮೆಂಟ್‌ ಮಾಡಿಕೊಂಡ ʻಗಿಚ್ಚಿ ಗಿಲಿ ಗಿಲಿʼ ಖ್ಯಾತಿಯ ಚಿಲ್ಲರ್ ಮಂಜು; ಹುಡುಗಿ ಯಾರು?

SCROLL FOR NEXT