ಸುಪ್ರಿಯಾ ಠಾಕೂರ್ 
ವಿದೇಶ

ನನ್ನ ಹೆಂಡತಿಯನ್ನು ಸಾಯಿಸಿದ್ದೇನೆ, ಆದರೆ ಅದು ಕೊಲೆಯಲ್ಲ: ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿ ತಪ್ಪೊಪ್ಪಿಗೆ!

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾದ ತನ್ನ ಪತ್ನಿ ಸುಪ್ರಿಯಾ ಠಾಕೂರ್ ಅವರ ಸಾವಿನ ಪ್ರಕರಣದ ಎರಡನೇ ವಿಚಾರಣೆಗೆ ಜನವರಿ 14 ರಂದು ಅಡಿಲೇಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ 42 ವರ್ಷದ ವಿಕ್ರಾಂತ್ ಠಾಕೂರ್ ಹಾಜರಾಗಿದ್ದರು.

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ತನ್ನ ಪತ್ನಿಯನ್ನು ಕೊಂದ ಆರೋಪ ಹೊತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬ ಆಕೆಯನ್ನು ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಆದರೆ ತಾನು ಕೊಲೆ ಮಾಡಿಲ್ಲ ಎಂದು ವಾದಿಸಿದ್ದಾನೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾದ ತನ್ನ ಪತ್ನಿ ಸುಪ್ರಿಯಾ ಠಾಕೂರ್ ಅವರ ಸಾವಿನ ಪ್ರಕರಣದ ಎರಡನೇ ವಿಚಾರಣೆಗೆ ಜನವರಿ 14 ರಂದು ಅಡಿಲೇಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ 42 ವರ್ಷದ ವಿಕ್ರಾಂತ್ ಠಾಕೂರ್ ಹಾಜರಾಗಿದ್ದರು.

ನರಹತ್ಯೆ ಕೊಲೆಗಿಂತ ಕಡಿಮೆ ಅಪರಾಧವಾಗಿದೆ, ನಾನು ನರಹತ್ಯೆಯನ್ನು ಸಮರ್ಥಿಸುತ್ತೇನೆ, ಆದರೆ ಕೊಲೆ ಮಾಡಿಲ್ಲ ಎಂದು ಠಾಕೂರ್ ತಮ್ಮ ವಕೀಲರ ಸಲಹೆಯ ಆಧರಿಸಿ ನ್ಯಾಯಾಲಯದಲ್ಲಿ ಹೇಳಿದರು. ಕೊಲೆ ಗಂಭೀರ ಆರೋಪವಾಗಿದ್ದು, ಉದ್ದೇಶಪೂರ್ವಕ ಕೃತ್ಯವೆಂದು ಪರಿಗಣಿಸಲಾಗಿದ್ದರೂ, ಆರೋಪಿಯು ಉದ್ದೇಶಪೂರ್ವಕವಾಗಿ ಯಾರೊಬ್ಬರ ಸಾವಿಗೆ ಕಾರಣವಾಗಿದ್ದರೆ ನರಹತ್ಯೆಯೆಂದು ಪರಿಗಣಿಸಲಾಗುತ್ತದೆ.

36 ವರ್ಷದ ಸುಪ್ರಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ನಂತರ ಡಿಸೆಂಬರ್ 21 ರಂದು ಅಡಿಲೇಡ್‌ನ ಉತ್ತರ ಉಪನಗರದಲ್ಲಿರುವ ಮನೆಗೆ ಪೊಲೀಸರನ್ನು ಕರೆಸಲಾಯಿತು. ಡಿಸೆಂಬರ್ 22 ರಂದು ಅವರ ಮೊದಲ ನ್ಯಾಯಾಲಯ ಹಾಜರಾತಿಯಲ್ಲಿ, ವಿಕ್ರಾಂತ್ ಜಾಮೀನಿಗಾಗಿ ಅರ್ಜಿ ಸಲ್ಲಿಸಲಿಲ್ಲ. ಡಿಎನ್‌ಎ ವಿಶ್ಲೇಷಣೆ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಸೇರಿದಂತೆ ಪ್ರಮುಖ ಸಾಕ್ಷ್ಯಗಳಿಗಾಗಿ ಕಾಯುತ್ತಿರುವಾಗ, ಪ್ರಕರಣವನ್ನು 16 ವಾರಗಳ ಕಾಲ ಮುಂದೂಡಬೇಕೆಂದು ಪ್ರಾಸಿಕ್ಯೂಟರ್‌ಗಳು ವಿನಂತಿಸಿದರು. ನ್ಯಾಯಾಲಯವು ವಿನಂತಿಯನ್ನು ಸ್ವೀಕರಿಸಿತು ಮತ್ತು ಪ್ರಕರಣವನ್ನು ಏಪ್ರಿಲ್‌ನಲ್ಲಿ ಮತ್ತೆ ವಿಚಾರಣೆಗೆ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಬಂದ್! ಇಂದಿರಾ ಕ್ಯಾಂಟೀನ್ ನಡೆಯುತ್ತಾ?

ಇಂಧನ ಸುರಕ್ಷತೆ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮೂರು ಬಾರಿ ಮಾತುಕತೆ

ನೀವು ಮಿತಿ ಮೀರಿದ್ದೀರಿ: ಕನ್ನಡದಲ್ಲೇ ಎಚ್ಚರಿಕೆ ಕೊಟ್ಟ ರಶ್ಮಿಕಾ; ಸಂಕಷ್ಟದ ಸಮಯದಲ್ಲಿ ಕನ್ನಡವೇ ಬೇಕಾಯ್ತಾ? ಎಂದ ನೆಟ್ಟಿಗರು!

SCROLL FOR NEXT