ವಿಮಾನದಿಂದ ಮಾರ್ಗ ಮಧ್ಯೆ ಬೇರ್ಪಟ್ಟ ಕಿಟಕಿ online desk
ವಿದೇಶ

ಮಾರ್ಗ ಮಧ್ಯ ಒಡೆದ ವಿಮಾನ ಕಿಟಕಿ: ವಿಮಾನದ ಹೊರಗೆ ಸಿಲುಕಿದ ತಲೆ ಮತ್ತು ಭುಜ; ಪ್ರಯಾಣಿಕ ಬದುಕಿದ್ದೇ ಪವಾಡ!

ಆ ಪ್ರಯಾಣಿಕ ಗ್ರೀಸ್‌ನ ಥೆಸಲೋನಿಕಿಯಿಂದ ಜರ್ಮನಿಯ ಮೆಮ್ಮಿಂಗೆನ್‌ಗೆ ಪ್ರಯಾಣಿಸುತ್ತಿದ್ದ ಸೆರ್ಬಿಯಾದ ಪ್ರವಾಸಿಗನಾಗಿದ್ದರು. ಘರ್ಷಣೆಯಿಂದಾಗಿ ಆತನಿಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗ್ರೀಸ್: Passengers had woken up to a sound like that of a tyre bursting and screamsಗ್ರೀಸ್‌ನಿಂದ ಜರ್ಮನಿಗೆ ಹೋಗುತ್ತಿದ್ದ ರೈನೇರ್ ವಿಮಾನದ ಕಿಟಕಿ ಮಾರ್ಗಮಧ್ಯೆ "ಬೇರ್ಪಟ್ಟ" ನಂತರ ಒಬ್ಬ ವ್ಯಕ್ತಿ ಹೊರಗೆ ಬೀಳುವ ಅಪಾಯಕ್ಕೆ ಸಿಲುಕಿದ್ದರು. ಶುಕ್ರವಾರ ಈ ಘಟನೆ ನಡೆದಿದ್ದು, ವಿಮಾನಯಾನ ಅಧಿಕಾರಿಗಳ ಪ್ರಕಾರ, ಈ ಅಪಾಯಕ್ಕೆ ಸಿಲುಕಿದ್ದ ಪ್ರಯಾಣಿಕ ತನ್ನ ಸೀಟ್ ಬೆಲ್ಟ್ ಅನ್ನು ತೆಗೆಯದ ಕಾರಣ ಇತರ ಪ್ರಯಾಣಿಕರು ಅವನನ್ನು ಒಳಗೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾದರು.

ಆ ಪ್ರಯಾಣಿಕ ಗ್ರೀಸ್‌ನ ಥೆಸಲೋನಿಕಿಯಿಂದ ಜರ್ಮನಿಯ ಮೆಮ್ಮಿಂಗೆನ್‌ಗೆ ಪ್ರಯಾಣಿಸುತ್ತಿದ್ದ ಸೆರ್ಬಿಯಾದ ಪ್ರವಾಸಿಗನಾಗಿದ್ದರು. ಘರ್ಷಣೆಯಿಂದಾಗಿ ಆತನಿಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಟೈರ್ ಒಡೆದ ಶಬ್ದ ಮತ್ತು ಕಿರುಚಾಟದಂತಹ ಶಬ್ದದಿಂದ ಎಚ್ಚರಗೊಂಡೆವು ಎಂದು ಸಹ ಪ್ರಯಾಣಿಕರು ಹೇಳಿದರು, ನಂತರ ತಲೆ ಮತ್ತು ಭುಜ ಕಿಟಕಿಯ ಹೊರಗೆ ಇದ್ದ ಸ್ಥಿತಿಯಲ್ಲಿ ಪ್ರಯಾಣಿಕ ಕಂಡುಬಂದರು.

"ನಮ್ಮಲ್ಲಿ ಹೆಚ್ಚಿನವರು ನಿದ್ರಿಸುತ್ತಿದ್ದೆವು, ನಾವು ಕಣ್ಣು ಮುಚ್ಚಿದ್ದೆವು. ಟೈರ್ ಸಿಡಿದಂತೆ ಶಬ್ದ ಕೇಳಿಬಂತು" ಎಂದು ಸಹ ಪ್ರಯಾಣಿಕರೊಬ್ಬರು ರೇಡಿಯೋ ಥೆಸಲೋನಿಕಿಗೆ ತಿಳಿಸಿದರು.

"ಡಿಕಂಪ್ರೆಷನ್ ಉಂಟಾಗಿದೆ ಎಂದು ನಮಗೆ ತಕ್ಷಣ ಅರಿವಾಯಿತು. ಕಿರುಚಾಟಗಳು ಕೇಳಿಬಂದವು ... ಒಂದು ಕ್ಷಣ ಯಾರೋ ಆಕಸ್ಮಿಕವಾಗಿ ತುರ್ತು ಬಾಗಿಲು ತೆರೆದಿದ್ದಾರೆಂದು ನಾನು ಭಾವಿಸಿದೆ" ಎಂದು ಮಹಿಳೆ ಹೇಳಿದರು. "ಒಬ್ಬ ಪ್ರಯಾಣಿಕನ ತಲೆ ಮತ್ತು ಭುಜಗಳು ಕಿಟಕಿಯ ಹೊರಗೆ ಇದ್ದವು. ಅದೃಷ್ಟವಶಾತ್, ಅವನು ತನ್ನ ಸೀಟ್ ಬೆಲ್ಟ್ ಅನ್ನು ತೆಗೆದಿರಲಿಲ್ಲ."

ಆ ವ್ಯಕ್ತಿಯ ಬಳಿಯಿದ್ದ ಇತರ ಪ್ರಯಾಣಿಕರು ಅವನನ್ನು ಒಳಗೆ ಎಳೆಯಲು ಸಹಾಯ ಮಾಡಿದರು ಎಂದು ಸಹ ಪ್ರಯಾಣಿಕರು ಹೇಳಿದರು. ಗ್ರೀಕ್ ಮಾಧ್ಯಮಗಳ ಪ್ರಕಾರ, ವಿಮಾನದ ಎಂಜಿನ್‌ಗಳಲ್ಲಿ ಒಂದರಿಂದ ಬೇರ್ಪಟ್ಟ ಅವಶೇಷಗಳ ತುಂಡಿನಿಂದ ಕಿಟಕಿ ಮುರಿದುಹೋಗಿತ್ತು. ಈ ಘಟನೆ ಉತ್ತರ ಮ್ಯಾಸಿಡೋನಿಯಾದ ಮೇಲೆ ಸಂಭವಿಸಿದೆ.

ವಿಮಾನ "ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಥೆಸಲೋನಿಕಿಗೆ ಹಿಂತಿರುಗಿತು, ಹಾರಾಟದ ಸಮಯದಲ್ಲಿ ಪ್ರಯಾಣಿಕರ ಕಿಟಕಿ ಬೇರ್ಪಟ್ಟಿತು. ವಿಮಾನವು ಸಾಮಾನ್ಯವಾಗಿ ಇಳಿಯಿತು ಮತ್ತು ಪ್ರಯಾಣಿಕರು ಟರ್ಮಿನಲ್‌ಗೆ ಹಿಂತಿರುಗಿದರು." ಎಂದು ರೈನೇರ್ ಹೇಳಿಕೆಯಲ್ಲಿ ತಿಳಿಸಿದೆ.

ಉಳಿದ ಪ್ರಯಾಣಿಕರನ್ನು ಮೆಮ್ಮಿಂಗೆನ್‌ಗೆ ಕಳುಹಿಸಲು ಬದಲಿ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಐರಿಶ್ ವಿಮಾನ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!