ವಿದೇಶ

ಅಮೆರಿಕದ ಓಹಿಯೊ ಲೈವ್ ಮ್ಯೂಸಿಕ್ ಉತ್ಸವ ವೇಳೆ ಗುಂಡಿನ ದಾಳಿ: ಕನಿಷ್ಠ 12 ಮಂದಿ ಗಾಯ

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಟೊಲೆಡೊ ಪೊಲೀಸ್ ಇಲಾಖೆಯ ಉಪ ಪೊಲೀಸ್ ಮುಖ್ಯಸ್ಥ ಜೋ ಹೆಫರ್ನನ್ ತಿಳಿಸಿದ್ದಾರೆ. ಕನಿಷ್ಠ ಇಬ್ಬರು ಪರಸ್ಪರ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದಂತೆ ಕಂಡುಬರುತ್ತಿದೆ ಎಂದು ಅವರು ಹೇಳಿದರು.

ಅಮೆರಿಕದ ಓಹಿಯೊ ರಾಜ್ಯದ ಟೊಲೆಡೊ ನಗರದಲ್ಲಿ ನಡೆದ ಸಮುದಾಯ ಉತ್ಸವದ ಸಮೀಪ ಗುಂಡಿನ ದಾಳಿಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆದ ನಂತರ ಜನರು ಆತಂಕದಿಂದ ಸುರಕ್ಷಿತ ಸ್ಥಳಗಳತ್ತ ಓಡಿಹೋಗಿದ್ದು, ಶಂಕಿತ ದಾಳಿಕೋರರಿಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಟೊಲೆಡೊ ಪೊಲೀಸ್ ಇಲಾಖೆಯ ಉಪ ಪೊಲೀಸ್ ಮುಖ್ಯಸ್ಥ ಜೋ ಹೆಫರ್ನನ್ ತಿಳಿಸಿದ್ದಾರೆ. ಕನಿಷ್ಠ ಇಬ್ಬರು ಪರಸ್ಪರ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದಂತೆ ಕಂಡುಬರುತ್ತಿದೆ ಎಂದು ಅವರು ಹೇಳಿದರು.

ಟೊಲೆಡೊ ಪೊಲೀಸ್ ಇಲಾಖೆ ತಿಳಿಸಿದಂತೆ, ಈ ಘಟನೆ ನಗರದ ಐತಿಹಾಸಿಕ ಪ್ರದೇಶದಲ್ಲಿ ಪ್ರತಿವರ್ಷ ನಡೆಯುವ ಓಲ್ಡ್ ವೆಸ್ಟ್ ಎಂಡ್ ಫೆಸ್ಟಿವಲ್ ಸಮೀಪ ಸಂಭವಿಸಿದೆ. ಈ ಉತ್ಸವದಲ್ಲಿ ಲೈವ್ ಮ್ಯೂಸಿಕ್ ಕಾರ್ಯಕ್ರಮಗಳು ಮತ್ತು ಐತಿಹಾಸಿಕ ಮನೆಗಳ ವೀಕ್ಷಣೆ ಪ್ರಮುಖ ಆಕರ್ಷಣೆಯಾಗಿರುತ್ತವೆ.

ಈ ದಾಳಿಗೆ ಹೊಣೆಗಾರರಾಗಿರುವವರಿಗಾಗಿ ಸಕ್ರಿಯ ಶೋಧ ಕಾರ್ಯ ನಡೆಯುತ್ತಿದೆ ಎಂದು ಇಲಾಖೆ ತಿಳಿಸಿದೆ.

ಇಂದು ರಾತ್ರಿ ಟೊಲೆಡೊದಲ್ಲಿ ನಡೆದ ಘಟನೆಯ ಬಗ್ಗೆ ನನಗೆ ತೀವ್ರ ಕಳವಳವಾಗಿದೆ. ಬೇಸಿಗೆ ಉತ್ಸವಗಳು ಕುಟುಂಬಗಳು ಯಾವುದೇ ಹಿಂಸೆಯ ಭಯವಿಲ್ಲದೆ ಒಟ್ಟಾಗಿ ಸಮಯ ಕಳೆಯುವ ಸುರಕ್ಷಿತ ಸ್ಥಳಗಳಾಗಿರಬೇಕು ಎಂದು ಓಹಿಯೊ ರಾಜ್ಯಪಾಲ Mike DeWine ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಹಲವು ವೀಡಿಯೊಗಳಲ್ಲಿ ಗುಂಡಿನ ಸದ್ದು ಕೇಳಿಬರುತ್ತಿದ್ದಂತೆ ಜನರು ಓಡುತ್ತಿರುವುದು ಹಾಗೂ ತುರ್ತುಸೇವಾ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವುದು ಕಾಣಿಸಿಕೊಂಡಿದೆ.

ಕೆವಿನ್ ಬೆರಿ ಎಂಬವರು ತಮ್ಮ ಸ್ನೇಹಿತರೊಂದಿಗೆ ಪ್ರದೇಶದ ಸಸ್ಯೋದ್ಯಾನದಲ್ಲಿ ಕುಳಿತು ಲೈವ್ ಮ್ಯೂಸಿಕ್ ಆಲಿಸುತ್ತಿದ್ದಾಗ ಕೆಲವು ಗುಂಡಿನ ಸದ್ದುಗಳನ್ನು ಕೇಳಿದ್ದಾಗಿ ಹೇಳಿದ್ದಾರೆ.

ಗಾಯಗೊಂಡವರು ಸಸ್ಯೋದ್ಯಾನದ ಸುತ್ತಮುತ್ತ ವಿವಿಧ ಕಡೆಗಳಲ್ಲಿ ಚದುರಿಕೊಂಡಿದ್ದರು ಎಂದು ಅವರು ಹೇಳಿದರು.

ಓಲ್ಡ್ ವೆಸ್ಟ್ ಎಂಡ್ ಫೆಸ್ಟಿವಲ್ ಟೊಲೆಡೊ ನಗರದ ಐತಿಹಾಸಿಕ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಯುವ ಸಂಭ್ರಮಾಚರಣೆಯಾಗಿದ್ದು, ಇದರಲ್ಲಿ ಲೈವ್ ಮ್ಯೂಸಿಕ್, ಆಹಾರ ಮಳಿಗೆಗಳು, ಮನೆಗಳ ವೀಕ್ಷಣೆ ಹಾಗೂ ಖರೀದಿ ಅವಕಾಶಗಳು ಸೇರಿವೆ.

ಈ ಉತ್ಸವವನ್ನು ಟೊಲೆಡೊ ನಗರದ ಬೇಸಿಗೆ ಉತ್ಸವಗಳ ಆರಂಭದ ಸಂಕೇತ ಎಂದು ಬೆರಿ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ: ಗೃಹಬಳಕೆ ಸಿಲಿಂಡರ್‌ ದರ ಮತ್ತೆ ಏರಿಕೆ, ಬರೋಬ್ಬರಿ 29 ರೂ. ಹೆಚ್ಚಳ..!

NEET-UG 2026: ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ 'ಸೋರಿಕೆ' ಆರೋಪ ತಳ್ಳಿಹಾಕಿದ NTA; ಸುಳ್ಳು ಸುದ್ದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಅಲ್ಪ ಜ್ಞಾನ ಅಪಾಯಕಾರಿ: NFHS-6 ಸಂಶೋಧನೆಗಳ ಕುರಿತು ಖರ್ಗೆ ವಿರುದ್ಧ ನಡ್ಡಾ ವಾಗ್ದಾಳಿ

ಈ ಬೆದರಿಕೆಗಳನ್ನು ನಿಲ್ಲಿಸಿ, ನಾಗಾ ಬಾಬು: DCM ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರಾಜ್ ಎಚ್ಚರಿಕೆ!

ಕಾಂಗ್ರೆಸ್ ಸಚಿವ ಸಂಪುಟ ಭಿನ್ನಮತ ಶಮನ: ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾ ರೆಡ್ಡಿ!

SCROLL FOR NEXT