ಡೊನಾಲ್ಡ್ ಟ್ರಂಪ್, ಪತ್ರಕರ್ತೆ ಕ್ರಿಸ್ಟನ್ ವೆಲ್ಕರ್ 
ವಿದೇಶ

You're Crooked: ಪರ್ತಕರ್ತೆ ಕೇಳಿದ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ತಬ್ಬಿಬ್ಬು; TV ಸಂದರ್ಶನ ಮೊಟಕುಗೊಳಿಸಿ, ಮಧ್ಯದಲ್ಲಿಯೇ ಹೊರನಡೆದ ಟ್ರಂಪ್! Video

ವಿಸ್ಕಾನ್ಸಿನ್‌ನಲ್ಲಿ ನಡೆದ ಚುನಾವಣೆಗಳ ಬಗ್ಗೆ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಕೋಪಗೊಂಡ ಟ್ರಂಪ್, ನಿಮ್ಮ ತಲೆ ಸರಿಯಿಲ್ಲ ಎಂದು ಹೇಳಿ ಸಂದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.

ವಾಷಿಂಗ್ಟನ್: NBC ನ್ಯೂಸ್ ಚಾನೆಲ್ ಪತ್ರಕರ್ತೆ ಕ್ರಿಸ್ಟನ್ ವೆಲ್ಕರ್ ಕೇಳಿದ ಪ್ರಶ್ನೆಯಿಂದ ಕೋಪಗೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಟರ್ವ್ಯೂ ಮಧ್ಯೆದಲ್ಲಿಯೇ ಹೊರ ನಡೆದಿದ್ದಾರೆ.

ವಿಸ್ಕಾನ್ಸಿನ್‌ನಲ್ಲಿ ನಡೆದ ಚುನಾವಣೆಗಳ ಬಗ್ಗೆ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಕೋಪಗೊಂಡ ಟ್ರಂಪ್, ನಿಮ್ಮ ತಲೆ ಸರಿಯಿಲ್ಲ ಎಂದು ಹೇಳಿ ಸಂದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.

ಅಮೆರಿಕದಲ್ಲಿನ ಅಕ್ರಮ ಚುನಾವಣೆಗಳ ಬಗ್ಗೆ ಟ್ರಂಪ್ ಪದೇ ಪದೇ ಹೇಳಿದ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಮಾತಿನ ಚಕಮಕಿ ನಡೆದಿದೆ. ಪ್ರಮುಖ ಮಾಧ್ಯಮ ಸಂಸ್ಥೆಗಳ ಮೇಲೆ ಟ್ರಂಪ್ ಅವರ ನಿರಂತರ ದಾಳಿ ಹಾಗೂ ಪುರಾವೆಗಳ ಕೊರತೆ ನಡುವೆ ಅಮೆರಿಕದ ಚುನಾವಣೆಗಳು ದೋಷಪೂರಿತವಾಗಿವೆ ಎಂಬ ಹೇಳಿಕೆ ಕುರಿತು ಗಮನ ಸೆಳೆದಾಗ ಈ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾದಂತಹ ರಾಜ್ಯಗಳಲ್ಲಿನ ಚುನಾವಣೆಗಳು ವಿಕೃತ"ವಾಗಿವೆ ಎಂಬ ಟ್ರಂಪ್ ಅವರ ಹೇಳಿಕೆಯನ್ನು ವೆಲ್ಕರ್ ತಳ್ಳಿಹಾಕಿದಾಗ ಸಂದರ್ಶನ ತಾರಕಕ್ಕೇರಿತು ಎಂದು ವರದಿಯಾಗಿದೆ. ಈ ಹೇಳಿಕೆಯನ್ನು ಬೆಂಬಲಿಸಲು ಅವರ ಬಳಿ ಪುರಾವೆಗಳಿವೆಯೇ ಎಂದು ಕೇಳಿದಾಗ, "ನಾನು ಮಾಡಬೇಕಾಗಿರುವುದು ನೋಡುವುದಷ್ಟೇ ಎಂದಿದ್ದಾರೆ.

ನಂತರ ವೆಲ್ಕರ್ ನೋಡುವುದು "ಪುರಾವೆಯಲ್ಲ" ಎಂದು ಉತ್ತರಿಸಿದ್ದಾರೆ. ಇದರಿಂದ ಕೋಪಗೊಂಡ ಟ್ರಂಪ್ ಅರ್ಧದಲ್ಲಿಯೇ ಸಂದರ್ಶನ ಮೊಟಕುಗೊಳಿಸಿ ಹೊರನಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮ ಇಲ್ಲ, ಸರ್ಕಾರದಿಂದ ಭರವಸೆ- ಜೆ.ಪಿ. ನಡ್ಡಾ

ಪ್ರಧಾನ್ ರಾಜೀನಾಮೆ: ಕನ್ನಡಿಗ ಪ್ರಹ್ಲಾದ್ ಜೋಶಿಗೆ ಜಾಕ್‌ಪಾಟ್; ಹೆಚ್ಚುವರಿಯಾಗಿ ಶಿಕ್ಷಣ ಖಾತೆ ಜವಾಬ್ದಾರಿ!

ಮುಸ್ಲಿಂ, ಕ್ರೈಸ್ತ-ವಿರೋಧಿ ರಾಜಕೀಯದ ಆಡಳಿತ ನಿಲ್ಲಿಸಿ: ಇದು ಕೇವಲ ಟ್ರೈಲರ್ ಅಷ್ಟೇ, ಅಸಲಿ ಪಿಕ್ಚರ್ ಬಾಕಿಯಿದೆ- ಸೌರವ್ ದಾಸ್!

ಐರ್ಲೆಂಡ್, ಇಂಗ್ಲೆಂಡ್ ವಿರುದ್ಧ T20 ಸರಣಿ ಸೋಲಿನ ಕಹಿ ಬಳಿಕ ಈಗ ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಭಾರತ!

ಸಿಜೆಪಿ ಅಭಿಜಿತ್ ದೀಪ್ಕೆ ರಾಜಕೀಯ ಪ್ರವೇಶ? ಮೊದಲು ಸುರಕ್ಷಿತವಾಗಿ ಮನೆಗೆ ಬರಲಿ- ಪೋಷಕರ ಆತಂಕ!