ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ಅಣ್ವಸ್ತ್ರ ಹೊಂದಿದ್ದರೆ ಮಧ್ಯಪ್ರಾಚ್ಯವನ್ನೇ ನಾಶ ಮಾಡುತ್ತಿತ್ತು, ಇಸ್ರೇಲ್ ಅಸ್ತಿತ್ವವೇ ಇರುತ್ತಿರಲಿಲ್ಲ: ಟ್ರಂಪ್

ಇರಾನ್ ಬಳಿ ಅಣ್ವಸ್ತ್ರ ಇದ್ದಿದ್ದರೆ ಇಂದು ಇಸ್ರೇಲ್ ಎಂಬ ದೇಶವೇ ಇರುತ್ತಿರಲಿಲ್ಲ. ಮಧ್ಯಪ್ರಾಚ್ಯವೂ ಸುರಕ್ಷಿತವಾಗಿರುತ್ತಿರಲಿಲ್ಲ. ಅವರು ನಮ್ಮ ಮೇಲೂ ದಾಳಿ ನಡೆಸುತ್ತಿದ್ದರು.

ವಾಷಿಂಗ್ಟನ್: ಅಮೆರಿಕ-ಇರಾನ್ ಸಂಘರ್ಷ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ನಡುವೆಯೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

"ಇರಾನ್ ಬಳಿ ಅಣ್ವಸ್ತ್ರ ಇದ್ದಿದ್ದರೆ ಇಸ್ರೇಲ್ ಎಂಬ ರಾಷ್ಟ್ರವೇ ಉಳಿಯುತ್ತಿರಲಿಲ್ಲ" ಎಂದು ಹೇಳಿರುವ ಅವರು, ಟೆಹ್ರಾನ್ ವಿರುದ್ಧ ಅಮೆರಿಕದ ಸೇನಾ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಶ್ವೇತಭವನದ ಓವಲ್ ಕಚೇರಿಯಲ್ಲಿ ಮಾತನಾಡಿದ ಟ್ರಂಪ್, "ಇರಾನ್ ಬಳಿ ಅಣ್ವಸ್ತ್ರ ಇದ್ದಿದ್ದರೆ ಇಂದು ಇಸ್ರೇಲ್ ಎಂಬ ದೇಶವೇ ಇರುತ್ತಿರಲಿಲ್ಲ. ಮಧ್ಯಪ್ರಾಚ್ಯವೂ ಸುರಕ್ಷಿತವಾಗಿರುತ್ತಿರಲಿಲ್ಲ. ಅವರು ನಮ್ಮ ಮೇಲೂ ದಾಳಿ ನಡೆಸುತ್ತಿದ್ದರು. ನಾವು ನಿನ್ನೆ ಅವರಿಗೆ ದೊಡ್ಡ ಮಟ್ಟಜಲ್ಲೇ ಬಿಸಿ ಮುಟ್ಟಿಸಿದ್ದೇವೆ, ಇಂದೂ ದೊಡ್ಡ ಮಟ್ಟದಲ್ಲೇ ಹೊಡೆತ ಬೀಳಲಿದೆ. ಮುಂದೇನಾಗುತ್ತದೆ ನೋಡೋಣ" ಎಂದು ಹೇಳಿದ್ದಾರೆ.

ಇದೇ ವೇಳೆ ಇರಾನ್ ಜೊತೆಗಿನ ಅಣು ಒಪ್ಪಂದದ ಮಾತುಕತೆಗಳು ಅಂತಿಮ ಹಂತ ತಲುಪಿದ್ದರೂ, ಟೆಹ್ರಾನ್ ನಿರಂತರವಾಗಿ ಕಾಲಹರಣ ಮಾಡುತ್ತಿದೆ ಎಂದೂ ಆರೋಪಿಸಿದ್ದಾರೆ.

"ನಾವು ಒಪ್ಪಂದಕ್ಕೆ ಬಹಳ ಹತ್ತಿರದಲ್ಲಿದ್ದೆವು. ಆದರೆ, ಅವರು ನಮ್ಮನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೆ ಕೆಲ ಅಸಮರ್ಥ ನಾಯಕರು ಅಧಿಕಾರದಲ್ಲಿದ್ದ ಕಾರಣ ಇರಾನ್ ಈ ರೀತಿ ವರ್ತಿಸಿತು" ಎಂದು ಟೀಕಿಸಿದರು.

ಇದೇ ವೇಳೆ ಅಮೆರಿಕವು ಇರಾನ್ ವಿರುದ್ಧ ತನ್ನ ಸೇನಾ ಕಾರ್ಯಾಚರಣೆ ಮುಂದುವರಿಸಲಿದೆ ಎಂಬ ಸ್ಪಷ್ಟ ಸಂದೇಶವನ್ನೂ ಟ್ರಂಪ್ ನೀಡಿದ್ದಾರೆ. "ನಾವು ನಿನ್ನೆ ದಾಳಿ ನಡೆಸಿದ್ದೇವೆ, ಇಂದು ಮತ್ತೆ ಕಠಿಣ ದಾಳಿ ನಡೆಸಲಿದ್ದೇವೆ. ಪರಿಸ್ಥಿತಿ ಹೇಗೆ ಬೆಳೆಯುತ್ತದೆ ಎಂಬುದನ್ನು ನೋಡೋಣ" ಎಂದು ಅವರು ಹೇಳಿದರು.

ಇತ್ತೀಚೆಗೆ ಅಮೆರಿಕದ ಅಪಾಚೆ ಹೆಲಿಕಾಪ್ಟರ್ ಅನ್ನು ಇರಾನ್ ಹೊಡೆದುರುಳಿಸಿದ ಘಟನೆಯೂ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಘಟನೆಯನ್ನು ಉಲ್ಲೇಖಿಸಿದ ಟ್ರಂಪ್, "ಆ ಹೆಲಿಕಾಪ್ಟರ್ ಘಟನೆಯ ನಂತರ ನಮಗೆ ಪ್ರತಿದಾಳಿ ನಡೆಸುವ ಸಂಪೂರ್ಣ ಹಕ್ಕಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದಲ್ಲಿ ಮುಸ್ಲಿಮರು PM, CM ಆಗದಿರುವುದಕ್ಕೆ ಕಾರಣ ಏನು ಗೊತ್ತ? Owaisi ಮುಸ್ಲಿಮರ ದೊಡ್ಡ ಶತ್ರು: ಮೌಲಾನಾ ಸಾಜಿದ್

'ಪ್ರಧಾನ್ ರಾಜೀನಾಮೆಯಿಂದ ಭಾರತ ಅಸ್ಥಿರಗೊಳಿಸುವ ವಿದೇಶಿ ಶಕ್ತಿಗಳ ಸಂಚು ವಿಫಲ': ಕೈಲಾಶ್ ವಿಜಯವರ್ಗೀಯ

UP ಚುನಾವಣೆ: ಈಗಲೇ ಮೈತ್ರಿ ಮಾತುಕತೆ ಆರಂಭಿಸೋಣ; ಚುನಾವಣೆ ಬಳಿಕ ಅತ್ತರೆ ಪ್ರಯೋಜನ ಇಲ್ಲ- ಅಖಿಲೇಶ್ ಗೆ ಓವೈಸಿ ಆಫರ್!

ಮಹಾ'ಸಂಚಲನ: ರಾಷ್ಟ್ರ ರಾಜಕಾರಣಕ್ಕೆ ದೇವೇಂದ್ರ ಫಡ್ನವಿಸ್ ಶಿಫ್ಟ್?

3rd T20I: 15ರ ವಯಸ್ಸಿನಲ್ಲೇ ವಿಶ್ವದಾಖಲೆ! ಜಿಂಬಾಬ್ವೆ ವಿರುದ್ಧ ಮತ್ತೊಮ್ಮೆ ಅಬ್ಬರಿಸಿದ Vaibhav Sooryavanshi