ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಖಾಯೀ 
ವಿದೇಶ

ಏನೇ ಶಾಂತಿ ಒಪ್ಪಂದವಾದ್ರೂ ನಾವು ಅಮೆರಿಕವನ್ನ ನಂಬಲ್ಲ: ಡೊನಾಲ್ಡ್ ಟ್ರಂಪ್ ಗೆ ಶಾಕ್ ಕೊಟ್ಟ Iran

ಅಮೆರಿಕ ಮತ್ತು ಇರಾನ್ ಮಧ್ಯಪ್ರಾಚ್ಯದ ಯುದ್ಧವನ್ನು ಅಂತ್ಯಗೊಳಿಸಿ, ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಪುನಃ ಎಲ್ಲ ನೌಕೆಗಳಿಗೆ ತೆರೆಯುವ ಒಪ್ಪಂದವನ್ನು ಘೋಷಿಸಿವೆ.

ಟೆಹ್ರಾನ್: ಮಧ್ಯ ಪ್ರಾಚ್ಯ ಸಂಘರ್ಷಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹತ್ವದ ಶಾಂತಿ ಸಂಧಾನ ಒಪ್ಪಂದದ ಬೆನ್ನಲ್ಲೇ ಅಮೆರಿಕಕ್ಕೆ ಮತ್ತೆ ಶಾಕ್ ನೀಡಿರುವ ಇರಾನ್, 'ಏನೇ ಶಾಂತಿ ಒಪ್ಪಂದವಾದ್ರೂ ನಾವ್ ಅಮೆರಿಕವನ್ನ ನಂಬಲ್ಲ' ಎಂದು ಹೇಳಿದೆ.

ಅದ್ಯಾಕೋ ಶಾಂತಿ ಸಂಧಾನ ಒಪ್ಪಂದ ಹೊರತಾಗಿಯೂ ಅಮೆರಿಕ ವಿರುದ್ಧದ ಇರಾನ್ ಕೋಪ ತಣ್ಣಗಾಗುವಂತೆ ಕಾಣುತ್ತಿಲ್ಲ. ಯುದ್ಧ ಅಂತ್ಯವಾಗಿದ್ದರೂ ಇರಾನ್ ಮಾತ್ರ ಅಮೆರಿಕ ವಿರುದ್ಧ ಕೆಂಡಕಾರುತ್ತಲೇ ಇದೆ.

ಹೌದು.. ಅಮೆರಿಕ ಮತ್ತು ಇರಾನ್ ಮಧ್ಯಪ್ರಾಚ್ಯದ ಯುದ್ಧವನ್ನು ಅಂತ್ಯಗೊಳಿಸಿ, ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಪುನಃ ಎಲ್ಲ ನೌಕೆಗಳಿಗೆ ತೆರೆಯುವ ಒಪ್ಪಂದವನ್ನು ಘೋಷಿಸಿವೆ. ಆ ಮೂಲಕ ಹಲವು ತಿಂಗಳುಗಳಿಂದ ನಡೆದಿದ್ದ ಪ್ರಾಣಹಾನಿಕರ ಹಿಂಸಾಚಾರ ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆಯ ಬಳಿಕ ಈ ಘೋಷಣೆ ಸೋಮವಾರ ಜಾಗತಿಕ ಮಟ್ಟದಲ್ಲಿ ನೆಮ್ಮದಿಯ ಭಾವನೆ ಮೂಡಿಸಿದೆ.

ಆದರೆ, ಇರಾನ್ ವಿದೇಶಾಂಗ ಸಚಿವಾಲಯವು ಸೋಮವಾರ ಹೇಳಿಕೆಯಲ್ಲಿ, ಯುದ್ಧ ಅಂತ್ಯಗೊಳಿಸುವ ರೂಪರೇಷೆ ಒಪ್ಪಂದವಾಗಿದ್ದರೂ ಅಮೆರಿಕದ ಮೇಲಿನ “ಆಳವಾದ ಅವಿಶ್ವಾಸ” ಇನ್ನೂ ಉಳಿದಿದೆ ಎಂದು ಶಾಕ್ ನೀಡಿದೆ.

ಅವಿಶ್ವಾಸ ಇದೆ ಎಂದ ಇರಾನ್ ವಿದೇಶಾಂಗ ಸಚಿವಾಲಯ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಖಾಯೀ, 'ದುರದೃಷ್ಟವಶಾತ್, ಇರಾನ್‌ಗೆ ಅಮೆರಿಕದ ಮೇಲಿರುವ ಆಳವಾದ ಅವಿಶ್ವಾಸವು ಅಮೆರಿಕದ ನಾಯಕರ ದೀರ್ಘಕಾಲದ ತಪ್ಪು ನಡೆಗಳಿಂದಲೇ ಉಂಟಾಗಿದೆ ಎಂಬುದನ್ನು ಒಪ್ಪಲೇಬೇಕು” ಎಂದು ಹೇಳಿದ್ದಾರೆ.

“ಇರಾನ್ ಜನರ ವಿಶ್ವಾಸವನ್ನು ಗಳಿಸಲು ಅಮೆರಿಕ ಇನ್ನೂ ಬಹಳ ದೂರ ಸಾಗಬೇಕಿದೆ. ಈ ರೂಪರೇಷೆ ಒಪ್ಪಂದವು ಉದ್ವಿಗ್ನತೆ ಕಡಿಮೆ ಮಾಡುವ ದಿಕ್ಕಿನ ಒಂದು ಹೆಜ್ಜೆ ಮಾತ್ರ” ಎಂದು ಅವರು ಹೇಳಿದರು.

ಯುದ್ಧ ಪರಿಹಾರಕ್ಕೆ ಅಮೆರಿಕ ಒಪ್ಪಿಗೆ!

ಬಖಾಯೀ ಅವರ ಪ್ರಕಾರ, ರೂಪರೇಷೆ ಒಪ್ಪಂದದಡಿಯಲ್ಲಿ ಅಮೆರಿಕವು ವಿದೇಶಗಳಲ್ಲಿ ಸ್ಥಗಿತಗೊಳಿಸಲಾಗಿದ್ದ ಇರಾನ್‌ನ ನಿಧಿಗಳನ್ನು ಬಿಡುಗಡೆ ಮಾಡುವುದು ಹಾಗೂ ಯುದ್ಧದಿಂದ ಉಂಟಾದ ಹಾನಿಗೆ ಪರಿಹಾರ ನೀಡುವುದಾಗಿ ಒಪ್ಪಿಕೊಂಡಿದೆ.

“ಸ್ಥಗಿತಗೊಳಿಸಲಾದ ಇರಾನಿಯನ್ ಆಸ್ತಿಗಳ ಬಿಡುಗಡೆ ಹಾಗೂ ಹಾನಿಗೆ ಪರಿಹಾರ ನೀಡುವುದು — ಇವು ಎರಡು ಪ್ರಮುಖ ಅಂಶಗಳು. ಈ ಎರಡೂ ಕ್ಷೇತ್ರಗಳಲ್ಲಿ ಕ್ರಮ ಕೈಗೊಳ್ಳಲು ಅಮೆರಿಕ ಬದ್ಧವಾಗಿದೆ,” ಎಂದು ಅವರು ಹೇಳಿದರು.

ಒಪ್ಪಂದದ ಪ್ರಕಾರ, ಜಾಗತಿಕ ತೈಲ ಸರಬರಾಜಿನ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿರ್ವಹಿಸಲಿದೆ. ಯುದ್ಧ ಆರಂಭವಾದ ಬಳಿಕದಿಂದ ಇರಾನ್ ಈ ಜಲಮಾರ್ಗವನ್ನು ತಡೆಹಿಡಿದಿತ್ತು. ಈಗ, ಹಡಗುಗಳ ಮೇಲೆ ನೇರ ಸುಂಕ ವಿಧಿಸುವ ಬದಲು ನಾವಿಗೇಶನ್ ಸೇವೆಗಳು, ಪರಿಸರ ಸಂರಕ್ಷಣೆ, ಹಡಗು ವಿಮೆ ಹಾಗೂ ಇತರ ಅಗತ್ಯ ಸೇವೆಗಳಿಗಾಗಿ ಶುಲ್ಕ ವಸೂಲಿ ಮಾಡಲಿದೆ.

ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ಬಖಾಯೀ, 'ನಾವು ಸಂಚಾರ ಸುಂಕ ವಸೂಲಿ ಮಾಡುವ ಉದ್ದೇಶ ಹೊಂದಿಲ್ಲ. ಆದರೆ ನಾವಿಗೇಶನ್ ಸೇವೆಗಳು, ಪರಿಸರ ರಕ್ಷಣೆ, ಹಡಗು ವಿಮೆ ಮತ್ತು ಇತರ ಅಗತ್ಯ ಸೇವೆಗಳಿಗಾಗಿ ಶುಲ್ಕ ವಿಧಿಸಲಾಗುತ್ತದೆ” ಎಂದು ಹೇಳಿದರು.

ಇಸ್ರೇಲ್ ಮೇಲೂ ನಂಬಿಕೆ ಇಲ್ಲ

ನಮಗೆ ಇಸ್ರೇಲ್ ಮೇಲೂ ಅಮೆರಿಕ ಮೇಲೂ ವಿಶ್ವಾಸವಿಲ್ಲ ಎಂದ ಬಖಾಯಿ, 'ಅಮೆರಿಕ ತನ್ನ ಬದ್ಧತೆಗಳನ್ನು ಗೌರವಿಸಬೇಕು. ಲೆಬನಾನ್ ಸಂಬಂಧಿತ ಒಪ್ಪಂದವನ್ನೂ ಇಸ್ರೇಲ್ ಪಾಲಿಸುವಂತೆ ನೋಡಿಕೊಳ್ಳಬೇಕು. ಲೆಬನಾನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇಸ್ರೇಲ್ ಬದ್ಧವಾಗಿರುವುದನ್ನು ಅಮೆರಿಕ ಖಚಿತಪಡಿಸಬೇಕು ಎಂದು ಹೇಳಿದರು.

ಅಂದಹಾಗೆ ಮಾರ್ಚ್ ಆರಂಭದಲ್ಲಿ, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ನಂತರ ಲೆಬನಾನ್ ಈ ಯುದ್ಧಕ್ಕೆ ಎಳೆಯಲ್ಪಟ್ಟಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ವಾಯುದಾಳಿ ಹಾಗೂ ಭೂಸೇನಾ ಕಾರ್ಯಾಚರಣೆ ಆರಂಭಿಸಿತು. ಈ ರೂಪರೇಷೆ ಒಪ್ಪಂದವು ಅಂತಿಮ ಒಪ್ಪಂದಕ್ಕಾಗಿ 60 ದಿನಗಳ ಮಾತುಕತೆಗಳಿಗೆ ದಾರಿ ಮಾಡಿಕೊಡುತ್ತದೆ. ಅಂತಿಮ ಒಪ್ಪಂದವು ಇರಾನ್‌ನ ವಿವಾದಾತ್ಮಕ ಅಣುಕಾರ್ಯಕ್ರಮ ಮತ್ತು ಅದರ ಮೇಲಿನ ದೀರ್ಘಕಾಲದ ನಿರ್ಬಂಧಗಳ ಸಡಿಲಿಕೆಯನ್ನು ಒಳಗೊಂಡಿರಲಿದೆ.

'60 ದಿನಗಳ ಬಳಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಮೂಲಕ ಅಂತಿಮ ಒಪ್ಪಂದಕ್ಕೆ ಮನ್ನಣೆ ದೊರೆಯುವ ನಿರೀಕ್ಷೆಯಿದೆ. ಇರಾನ್ ಕಳೆದ ಅನುಭವಗಳಿಂದ ಪಾಠ ಕಲಿಯಲಿದೆ. ಭದ್ರತಾ ಮಂಡಳಿಯ ನಿರ್ಣಯ ಅತ್ಯವಶ್ಯಕವಾಗಿರುತ್ತದೆ. ಆದರೆ ಯಾವುದೇ ಬದ್ಧತೆಯ ಅನುಷ್ಠಾನಕ್ಕೆ ಅತ್ಯಂತ ಪರಿಣಾಮಕಾರಿ ಭರವಸೆ ಕಳೆದ ಮೂರು ತಿಂಗಳಲ್ಲಿ ನಾವು ಗುರುತಿಸಿಕೊಂಡಿರುವ ನಮ್ಮದೇ ಶಕ್ತಿ ಮತ್ತು ಪ್ರಭಾವದಲ್ಲಿದೆ' ಎಂದು ಬಖಾಯೀ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಹಿರಿಯ ಶಾಸಕ HK ಪಾಟೀಲ್‌ಗೆ ತಪ್ಪಿದ ಸಚಿವ ಸ್ಥಾನ: 21 ಕಾಂಗ್ರೆಸ್ ಕೌನ್ಸಿಲರ್‌ಗಳ ಸಾಮೂಹಿಕ ರಾಜೀನಾಮೆ!

'ಬಿಜೆಪಿಯ ದುರಹಂಕಾರದ ವಿರುದ್ಧ ಜನಾದೇಶ': ತಮ್ಮ ಐತಿಹಾಸಿಕ ಗೆಲುವಿಗೆ ಮೂರು ಕಾರಣ ನೀಡಿದ ಪ್ರಶಾಂತ್ ಕಿಶೋರ್!

ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕೀಯದ ದರ್ಬಾರು: ಡಿಕೆಶಿ ಸಂಪುಟದಲ್ಲಿಯೂ 2ನೇ ತಲೆಮಾರಿನ ನಾಯಕರ ಕಾರುಬಾರು; ಸಾಮರ್ಥ್ಯಕ್ಕಿಂತ ಸಂಪರ್ಕ ಮುಖ್ಯವೇ?

ನಟಿ ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ನಾನು ಅವರ ಹೆಸರನ್ನೂ ಉಲ್ಲೇಖಿಸಿದ್ದೇನೆಯೇ? ಬಂಧನದ ಬಳಿಕ ಉದಯನಿಧಿ ಸ್ಟಾಲಿನ್