ಹಾರ್ಮುಜ್ ಜಲಸಂಧಿ 
ವಿದೇಶ

'ಈಗ ಹಾರ್ಮುಜ್ ಅನ್ನು ಯಾವಾಗ ಬೇಕಾದರೂ ಬಂದ್ ಮಾಡುವ ಅಧಿಕಾರ ಇರಾನ್ ಹೊಂದಿದೆ; ಇದು ಅಮೆರಿಕಕ್ಕೆ ಮಾರಕ'

"ನಾವು ಈಗ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ಗೆ ವಾಸ್ತವಿಕ ನಿಯಂತ್ರಣವನ್ನು ಹಸ್ತಾಂತರಿಸಿದ್ದೇವೆ - ಇದು ಯಾವುದೇ ಪರಮಾಣು ಬಾಂಬ್‌ಗಿಂತ ಹೆಚ್ಚು ಶಕ್ತಿಶಾಲಿ ಆಯುಧ"

ವಾಷಿಂಗ್ಟನ್: ಅಮೆರಿಕ-ಇರಾನ್ ನಡುವಣ 107 ದಿನಗಳ ಯುದ್ಧ ಕೊನೆಗೂ ಅಂತ್ಯವಾಗುವ ಕಾಲ ಸನ್ನಿಹಿತವಾಗಿದ್ದು, ಉಭಯ ದೇಶಗಳು ಜಿನೀವಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವಾಗಿವೆ.

ಈ ಮಧ್ಯೆ, ಯುದ್ಧ ಮುಗಿದ ನಂತರ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸ್ವಂತ ಇಚ್ಛೆಯಿಂದ ಬಂದ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಬುಧವಾರ ಬಹಿರಂಗಪಡಿಸಿವೆ ಎಂದು ಮೂಲಗಳು ಸಿಎನ್‌ಎನ್‌ಗೆ ತಿಳಿಸಿವೆ.

ಶುಕ್ರವಾರ ಉಭಯ ದೇಶಗಳು ಸಹಿ ಹಾಕಲಿರುವ ಶಾಂತಿ ಒಪ್ಪಂದವನ್ನು ಲೆಕ್ಕಿಸದೆ, ನಿರ್ಣಾಯಕ ಜಲಮಾರ್ಗವನ್ನು ಬಳಸಿಕೊಂಡು ಆರ್ಥಿಕತೆಗೆ ಹಾನಿ ಮಾಡುವ ಇರಾನ್‌ನ ಸಾಮರ್ಥ್ಯವು ಮತ್ತೆ ಹೆಚ್ಚಾಗಬಹುದು ಎಂದು ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ.

ಇರಾನ್ ಈಗಾಗಲೇ ನೆರೆಯ ದೇಶಗಳಲ್ಲಿನ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿದೆ. ಅಲ್ಲದೆ ಗಲ್ಫ್ ರಾಷ್ಟ್ರಗಳ ಇಂಧನ ಮೂಲಸೌಕರ್ಯದ ಮೇಲೆ ದಾಳಿಗಳನ್ನು ಬಳಸಿಕೊಳ್ಳಲು ಕಲಿತಿರುವುದರಿಂದ ಇರಾನ್ ಈಗ ಅಮೆರಿಕಕ್ಕೆ ಮಾರಕವಾಗಿ ಮಾರ್ಪಟ್ಟಿದೆ ಎಂದು ಮೂಲಗಳು ಸಿಎನ್‌ಎನ್‌ಗೆ ತಿಳಿಸಿವೆ.

"ನಾವು ಈಗ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ಗೆ ವಾಸ್ತವಿಕ ನಿಯಂತ್ರಣವನ್ನು ಹಸ್ತಾಂತರಿಸಿದ್ದೇವೆ - ಇದು ಯಾವುದೇ ಪರಮಾಣು ಬಾಂಬ್‌ಗಿಂತ ಹೆಚ್ಚು ಶಕ್ತಿಶಾಲಿ ಆಯುಧ" ಎಂದು ಅಮೆರಿಕದ ಗುಪ್ತಚರ ಮೌಲ್ಯಮಾಪನಗಳೊಂದಿಗೆ ಪರಿಚಿತವಾಗಿರುವ ಮೂಲಗಳಲ್ಲಿ ಒಬ್ಬರು ಸಿಎನ್‌ಎನ್‌ಗೆ ತಿಳಿಸಿದ್ದಾರೆ.

ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯಲು ಅಮೆರಿಕ ಇರಾನ್‌ನೊಂದಿಗೆ ತೀವ್ರ ಮಾತುಕತೆ ನಡೆಸಬೇಕಾಯಿತು. ಇದು ಇರಾನಿಯನ್ನರ ನಿರಂತರ ಹತೋಟಿಯನ್ನು ಒತ್ತಿಹೇಳುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ: ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು; ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!

West Asia War: ಒಪ್ಪಂದಕ್ಕೆ ಬರ್ತೀರಾ? ಇತಿಹಾಸ ಸೇರ್ತೀರಾ?; ಇರಾನ್‌ಗೆ ಟ್ರಂಪ್ ಲಾಸ್ಟ್ ವಾರ್ನಿಂಗ್..!

"ನನಗೊಬ್ಬ ಪಾಕಿಸ್ತಾನಿ ಹುಡುಗನನ್ನು ಹುಡುಕಿ ಕೊಡಿ" ಸಂಘಿ ಹೇಳಿಕೆ ಬೆನ್ನಲ್ಲೇ ಕಂಗನಾ ರಣಾವತ್ ಹಳೆಯ VIDEO ವೈರಲ್!

ಹೊಸ ಮುಖಗಳ ನಿರೀಕ್ಷೆ ಹುಸಿ; ಡಿಕೆಶಿ ಸಂಪುಟದಲ್ಲಿ ಹಿರಿಯರ ಪ್ರಾಬಲ್ಯ, ಅನುಭವಿಗಳಿಗೆ ಮಣೆ ಹಾಕಿದ ಹೈಕಮಾಂಡ್..!

ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ವರದಿ ನೀಡಲು ನೂತನ ಸಚಿವರಿಗೆ ಸೂಚನೆ: ಸಿದ್ದುಗೆ ಯಾವುದೇ ಅಸಮಾಧಾನವಿಲ್ಲ, ತಮಿಳುನಾಡಿಗೆ ಕಾನೂನು ಮೂಲಕವೇ ಉತ್ತರ- ಸಿಎಂ ಡಿಕೆ ಶಿವಕುಮಾರ್