ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ 
ವಿದೇಶ

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ರೂ, ಇರಾನ್ ನಿಯಮ ಪಾಲಿಸದಿದ್ರೆ ದಾಳಿ ಮಾಡ್ತೀವಿ: ಅಮೆರಿಕ ರಕ್ಷಣಾ ಕಾರ್ಯದರ್ಶಿ Pete Hegseth

ಅಮೆರಿಕ ಮತ್ತೆ ಸೇನಾ ಕ್ರಮ ಕೈಗೊಳ್ಳಲು ಹಾಗೂ ನಿರ್ಬಂಧಾತ್ಮಕ ತಡೆ (ಬ್ಲಾಕೇಡ್) ಮರುಜಾರಿಗೊಳಿಸಲು ಸಿದ್ಧವಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಗುರುವಾರ ತಿಳಿಸಿದ್ದಾರೆ.

ವಾಷಿಂಗ್ಟನ್: ಮಧ್ಯಪ್ರಾಚ್ಯ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಹಾಡಲಾಗಿದ್ದು, ಇರಾನ್ ಮತ್ತು ಅಮೆರಿಕ ದೇಶಗಳು ಶಾಂತಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿವೆ. ಆದರೂ ಇರಾನ್ ಮೇಲೆ ದಾಳಿಗೆ ತಾನು ಹಿಂಜರಿಯುವಿದಿಲ್ಲ ಎಂಬ ಸಂದೇಶವನ್ನೂ ಕೂಡ ಅಮೆರಿಕ ಹೊರಡಿಸಿದೆ.

ಹೌದು.. ಅಮೆರಿಕದೊಂದಿಗೆ ಇರಾನ್ ಮಾಡಿಕೊಂಡಿರುವ ಒಪ್ಪಂದದಡಿ ತನ್ನ ಬದ್ಧತೆಗಳನ್ನು ಪಾಲಿಸದಿದ್ದರೆ, ಅಮೆರಿಕ ಮತ್ತೆ ಸೇನಾ ಕ್ರಮ ಕೈಗೊಳ್ಳಲು ಹಾಗೂ ನಿರ್ಬಂಧಾತ್ಮಕ ತಡೆ (ಬ್ಲಾಕೇಡ್) ಮರುಜಾರಿಗೊಳಿಸಲು ಸಿದ್ಧವಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಗುರುವಾರ ತಿಳಿಸಿದ್ದಾರೆ.

ನ್ಯಾಟೊ ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಿದ ಬಳಿಕ ಬ್ರಸ್ಸೆಲ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಮಾತುಕತೆಗಳಿಗೆ ನಿಗದಿಪಡಿಸಿರುವ ಕಾಲಮಿತಿಯೊಳಗೆ ಇರಾನ್ ತಾನು ಹೇಳಿರುವುದನ್ನು ಮಾಡದಿದ್ದರೆ, ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿರುವಂತೆ ನಾವು ಮತ್ತೆ ಕ್ರಮ ಕೈಗೊಳ್ಳಲು ಸಂಪೂರ್ಣ ಸಿದ್ಧರಾಗಿದ್ದೇವೆ" ಎಂದು ಹೇಳಿದರು.

"ಇರಾನ್ ಒಪ್ಪಂದದ ಷರತ್ತುಗಳನ್ನು ಪಾಲಿಸದಿದ್ದರೆ, ನಾವು ಕಠಿಣ ಹಾಗೂ ಸಂಪೂರ್ಣ ಪರಿಣಾಮಕಾರಿಯಾದ ಸಮುದ್ರ ನಿರ್ಬಂಧವನ್ನು (ಐರನ್‌ಕ್ಲಾಡ್ ಬ್ಲಾಕೇಡ್) ಮರುಜಾರಿಗೊಳಿಸುವ ಸಾಮರ್ಥ್ಯ ಹೊಂದಿದ್ದೇವೆ" ಎಂದು ಹೆಗ್ಸೆತ್ ಎಚ್ಚರಿಸಿದರು.

ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಇರಾನ್ ತನ್ನ ಬದ್ಧತೆಗಳನ್ನು ನೆರವೇರಿಸದಿದ್ದರೆ, ಅಮೆರಿಕ ಸೇನಾ ಕಾರ್ಯಾಚರಣೆಗಳನ್ನು ಪುನರಾರಂಭಿಸುವುದರ ಜೊತೆಗೆ ಕಠಿಣ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಲು ಸಜ್ಜಾಗಿದೆ.

ಈ ಕುರಿತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅಮೆರಿಕದ ಸಿದ್ಧತೆಯನ್ನು ಪುನರುಚ್ಚರಿಸಿದ್ದು, ಒಪ್ಪಂದದಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ಇರಾನ್ ತನ್ನ ಕರ್ತವ್ಯಗಳನ್ನು ನಿರ್ವಹಿಸದಿದ್ದರೆ, ಅಮೆರಿಕ ಕಠಿಣ ನಿರ್ಬಂಧಗಳನ್ನು ಮರುಜಾರಿಗೊಳಿಸಲು ಸಂಪೂರ್ಣವಾಗಿ ಸಮರ್ಥವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಂಡಾಯ ಸಂಸದರು 'ದೇಶದ್ರೋಹಿಗಳು'; ಅವರಿಗೆ ಮತ್ತೆ 10 ಕೋಟಿ ರೂ. ನೀಡಿ ರಾಜಸ್ಥಾನಕ್ಕೆ ಶಿಫ್ಟ್ ಮಾಡಲಾಗಿದೆ!

ನೀವು ತೃತೀಯ ಲಿಂಗಿ ತರ ಕಾಣ್ತೀರಾ: ಹಿರಿಯ ನಟಿ ಖುಷ್ಬೂ ಪುತ್ರಿಗೆ ನೆಟ್ಟಿಗರಿಂದ ಟ್ರೋಲ್, ಆನಂದಿತಾ ತಿರುಗೇಟು!

ಬೆಂಗಳೂರು: ಜನ ಎಲ್ಲೆಂದರಲ್ಲಿ ಕಸ ಎಸೆದರೆ ದುಪ್ಪಟ್ಟು ದಂಡ! ಕಸ ಸುರಿದವರಿಂದಲೇ ತೆರವು..

ರಾಜ್ಯದ 16 ಲಕ್ಷ ಜನರಿಗೆ ಪಿಂಚಣಿ ಸ್ಥಗಿತ: ತಕ್ಷಣ ಬಿಡುಗಡೆಗೆ ಪ್ರತಿಪಕ್ಷ ಬಿಜೆಪಿ ಒತ್ತಾಯ!

'ಇಸ್ರೇಲ್ ಹೊರತುಪಡಿಸಿ ಇಡೀ ಜಗತ್ತೇ ಅಮೆರಿಕ-ಇರಾನ್ ಶಾಂತಿ ಒಪ್ಪಂದವನ್ನು ಸ್ವಾಗತಿಸಿದೆ'

SCROLL FOR NEXT