ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ. ಇದರ ಸಾಂದರ್ಭಿಕ ಚಿತ್ರ 
ವಿದೇಶ

ಇರಾಕ್‌ನಲ್ಲಿ US ಪಡೆ ತಂಗಿದ್ದ ಹೋಟೆಲ್ ಮೇಲೆ ಇರಾನ್ ಬೆಂಬಲಿತ ಗುಂಪು ದಾಳಿ!

ಎರ್ಬಿಲ್‌ನಲ್ಲಿರುವ ಹೋಟೆಲ್‌ನ ಮೇಲೆ ದಾಳಿಯ ಹೊಣೆಯನ್ನು ಇರಾಕಿನ ಸಶಸ್ತ್ರ ಗುಂಪು ಹೊತ್ತುಕೊಂಡಿದೆ. ಈ ಹೋಟೆಲ್ ನಲ್ಲಿ ಯುಎಸ್ ಪಡೆಗಳಿಗೆ ಆಶ್ರಯ ನೀಡಲಾಗಿತ್ತು ಎಂದು ಆರೋಪಿಸಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.

ಲೆಬನಾನ್‌: ಪಶ್ಚಿಮ ಏಷ್ಯಾದಾದ್ಯಂತ ಮಂಗಳವಾರವೂ ಉದ್ವಿಗ್ನತೆ ಮುಂದುವರೆದಿದೆ. ಇರಾಕ್, ಸೌದಿ ಅರೇಬಿಯಾ ಮತ್ತು ಲೆಬನಾನ್‌ನಲ್ಲಿ ಹಲವು ದಾಳಿಯ ಘಟನೆಗಳ ಬಗ್ಗೆ ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಎರ್ಬಿಲ್‌ನಲ್ಲಿರುವ ಹೋಟೆಲ್‌ನ ಮೇಲೆ ದಾಳಿಯ ಹೊಣೆಯನ್ನು ಇರಾಕಿನ ಸಶಸ್ತ್ರ ಗುಂಪು ಹೊತ್ತುಕೊಂಡಿದೆ. ಈ ಹೋಟೆಲ್ ನಲ್ಲಿ ಯುಎಸ್ ಪಡೆಗಳಿಗೆ ಆಶ್ರಯ ನೀಡಲಾಗಿತ್ತು ಎಂದು ಆರೋಪಿಸಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.

ಸೌದಿ ಅರೇಬಿಯಾದಲ್ಲಿ ರಿಯಾದ್ ಮತ್ತು ಅಲ್-ಖರ್ಜ್ ನಗರಗಳ ಬಳಿ ಎಂಟು ಡ್ರೋನ್‌ಗಳನ್ನು ತಡೆಹಿಡಿದು ನಾಶಪಡಿಸಲಾಗಿದೆ ಎಂದು ಸೌದಿ ರಕ್ಷಣಾ ಸಚಿವಾಲಯ ತಿಳಿಸಿರುವುದಾಗಿ ಅಲ್ ಅರೇಬಿಯಾ ಹೇಳಿದೆ. ಈ ಮಧ್ಯೆ ಲೆಬನಾನ್‌ನಲ್ಲಿ ಹಿಬ್ಜುಲಾ ಸಂಘಟನೆಯೊಂದಿಗೆ ಸೇರಿರುವ ಬ್ರಾಡ್‌ಕಾಸ್ಟರ್ ಅಲ್-ಮನಾರ್‌ನ ಪ್ರಧಾನ ಕಛೇರಿಯ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎಂದು IRNA ವರದಿ ಮಾಡಿದೆ.

ದಾಳಿಯಾದ ನಂತರ ಅಲ್-ಮನರ್ ತನ್ನ ಕಾರ್ಯಕ್ರಮಗಳ ಪ್ರಸಾರವನ್ನು ಪುನರಾರಂಭಿಸಿತು. ಇದಕ್ಕೂ ಮುನ್ನಾ ರಾತ್ರಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಗುಪ್ತಚರ ವಿಭಾಗದ ಮುಖ್ಯಸ್ಥನನ್ನು ಹತ್ಯೆಗೈಯಲಾಗಿದೆ. ಭಯೋತ್ಪಾದಕ ಗುಂಪಿನ ಮಿಲಿಟರಿ ಚಟುವಟಿಕೆಗಳನ್ನು ನಿಷೇಧಿಸುವುದಾಗಿ ಬೈರುತ್ ಹೇಳಿದೆ.

ಇಸ್ರೇಲ್ ರಕ್ಷಣಾ ಪಡೆಗಳು ಲೆಬನಾನಿನ ರಾಜಧಾನಿಯಲ್ಲಿ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹುಸೇನ್ ಮಕ್ಲೆಡ್ ನನ್ನು ಹತ್ಯೆ ಮಾಡಿವೆ. ಈತ ಹಿಜ್ಬುಲ್ಲಾ ಸಂಘಟನೆಯ ಗುಪ್ತಚರ ಪ್ರಧಾನ ಕಛೇರಿಯ ಮುಖ್ಯಸ್ಥ ಎನ್ನಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿದ ಹಗೆತನದ ನಡುವೆ ಈ ಬೆಳವಣಿಗೆಯಾಗಿದೆ. ಗಡಿಯಾಚೆಗಿನ ಉದ್ವಿಗ್ನ ಪರಿಸ್ಥಿತಿ ಮತ್ತು ವೈಮಾನಿಕ ದಾಳಿಗಳು ಈ ಪ್ರದೇಶದಲ್ಲಿ ಮತ್ತಷ್ಟು ಕಳವಳವನ್ನು ಹೆಚ್ಚಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಸಂಘರ್ಷ: ಚಿಂತೆ ಬೇಡ.. Hormuz ನಲ್ಲಿ ಭಾರತಕ್ಕೆ ತೊಂದರೆ ಇಲ್ಲ: ಜೈಶಂಕರ್ ಗೆ Araghchi ಭರವಸೆ!

ವಿದೇಶ ಪ್ರವಾಸಕ್ಕೆ ತೆರಿಗೆ: ಸತ್ಯಾಂಶವೇ ಇಲ್ಲ.. ವರದಿ ತಳ್ಳಿಹಾಕಿದ ಪ್ರಧಾನಿ ಮೋದಿ

ಬಾಂಗ್ಲಾದೇಶ ವಿರುದ್ಧ ಸೋತ ಪಾಕಿಸ್ತಾನಕ್ಕೆ ಬರೆ ಹಾಕಿದ ICC, ಶೇ.40ರಷ್ಟು ದಂಡ, 8 WTC ಅಂಕ ಕಡಿತ

ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video

NEET-UG 2026 ಪ್ರಶ್ನೆ ಪತ್ರಿಕೆ ಲೀಕ್ ಕಿಂಗ್ ಪಿನ್, ಪುಣೆಯ ಕೆಮಿಸ್ಟ್ರಿ 'ಲೆಕ್ಚರರ್' ಬಂಧಿಸಿದ ಸಿಬಿಐ!

SCROLL FOR NEXT