ಡೊನಾಲ್ಡ್ ಟ್ರಂಪ್! 
ವಿದೇಶ

Iran war ending? ಒಂದು ಕಡೆ ಶಾಂತಿ ಮಾತುಕತೆ, ಮತ್ತೊಂದೆಡೆ 'ಬಿಗ್ ಟಾರ್ಗೆಟ್' ಎಂದ ಡೊನಾಲ್ಡ್ ಟ್ರಂಪ್! ಏನಿದು ವಿಚಿತ್ರ ನಡೆ?

ಒಂದು ಕಡೆ ಇರಾನ್ ಜೊತೆಗೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಯುದ್ಧ ಶೀಘ್ರದಲ್ಲೇ ಕೊನೆಯಾಗಲಿದೆ ಅಂತಿದ್ದರೆ ಮತ್ತೊಂದೆಡೆ ಇರಾನ್ ನ ನೌಕಾಪಡೆ, ವಾಯುಪಡೆ ಎಲ್ಲವನ್ನೂ ಹಾಳು ಮಾಡಿದ್ದು, ಇಂದು ಮತ್ತಷ್ಟು ಕಡೆಗಳಲ್ಲಿ ಬಿಗ್ ಟಾರ್ಗೆಟ್ ಹಾಕಿಕೊಂಡಿದ್ದೇವೆ ಎಂದು ಹೇಳುತ್ತಾ ಬಂದಿದ್ದಾರೆ

ವಾಷಿಂಗ್ಟನ್: ಇರಾನ್ ಜೊತೆಗೆ ಯುದ್ಧ ಆರಂಭಿಸಿ ಒಂದು ತಿಂಗಳು ಕಳೆದರೂ ಇನ್ನೂ ಸಂಪೂರ್ಣ ಗೆಲುವು ಸಾಧಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಿನಕ್ಕೊಂದು, ಕ್ಷಣಕ್ಕೊಂದು ರೀತಿಯಲ್ಲಿ ವಿಚಿತ್ರವಾದ ಹೇಳಿಕೆ ನೀಡುತ್ತಾ ಬಂದಿದ್ದಾರೆ.

ಒಂದು ಕಡೆ ಇರಾನ್ ಜೊತೆಗೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಯುದ್ಧ ಶೀಘ್ರದಲ್ಲೇ ಕೊನೆಯಾಗಲಿದೆ ಅಂತಿದ್ದರೆ ಮತ್ತೊಂದೆಡೆ ಇರಾನ್ ನ ನೌಕಾಪಡೆ, ವಾಯುಪಡೆ ಎಲ್ಲವನ್ನೂ ಹಾಳು ಮಾಡಿದ್ದು, ಇಂದು ಮತ್ತಷ್ಟು ಕಡೆಗಳಲ್ಲಿ ಬಿಗ್ ಟಾರ್ಗೆಟ್ ಹಾಕಿಕೊಂಡಿದ್ದೇವೆ ಎಂದು ಹೇಳುತ್ತಾ ಬಂದಿದ್ದಾರೆ. ಭಾನುವಾರವೂ ಇದೇ ರೀತಿಯ ವಿಚಿತ್ರ ರೀತಿಯ ಹೇಳಿಕೆ ನೀಡಿದ್ದಾರೆ.

ಹೌದು. ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್‌ ಜೊತೆಗಿನ ಶಾಂತಿ ಮಾತುಕತೆ ಬಗ್ಗೆ ಆಶಾವಾದಿಯಾಗಿದ್ದೇನೆ. ಉತ್ತಮ ಮಾತುಕತೆಗಳು ನಡೆಯುತ್ತಿವೆ. ಗೌರವದ ಸಂಕೇತವಾಗಿ 20 ತೈಲ ಟ್ಯಾಂಕರ್‌ಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಿದೆ ಎಂದಿದ್ದಾರೆ.

ಏರ್ ಪೋರ್ಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಜೊತೆಗೆ ಶಾಂತಿ ಒಪ್ಪಂದವನ್ನು ಎದುರು ನೋಡುತ್ತಿದ್ದೇನೆ. ಶೀಘ್ರದಲ್ಲೇ ಅದು ಆಗಬಹುದು ಎಂದರು.

ಇರಾನ್‌ ಜೊತೆಗೆ ಉತ್ತಮ ಮಾತುಕತೆ ನಡೆಸಿದ್ದೇವೆ. ಬಹಳ ಹಿಂದೆಯೇ ನಮಗೆ ನೀಡಬೇಕಾಗಿದ್ದ ಬಹಳಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಿ, ಆದರೆ ಅವು ತುಂಬಾ ಚೆನ್ನಾಗಿವೆ. ಇರಾನ್ ಜೊತೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಮತ್ತೊಂದೆಡೆ ಇಂದು ಕೂಡಾ ಮತ್ತಷ್ಟು ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ಇರಾನ್ ನೌಕಾಪಡೆ ಹೋಗಿದೆ, ವಾಯುಪಡೆ ಹೋಗಿದೆ. ಇಂದು ಕೂಡಾ ಅನೇಕ ಕಡೆಗಳಲ್ಲಿ ಮತ್ತಷ್ಟು ನಾಶಪಡಿಸುತ್ತೇವೆ ಎಂದು ಹೇಳಿದರು. ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ.

ಇರಾನ್ ಆರಂಭದಲ್ಲಿ ಹಾರ್ಮುಜ್ ಜಲಸಂಧಿ ಮೂಲಕ 8 ಹಡಗುಗಳನ್ನು ಕಳುಹಿಸಲು ಒಪ್ಪಿಕೊಂಡಿತು.ತದನಂತರ 10 ಹಡಗುಗಳನ್ನು ಕಳುಹಿಸಿದೆ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಜಲಸಂಧಿ ಮೂಲಕ 20 ತೈಲ ಹಡಗುಗಳು ಸಾಗುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಡಗುಗಳ ಸಾಗಲಿವೆ ಎಂದು ಟ್ರಂಪ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ಹನೂರು ಶೂಟೌಟ್ ಪ್ರಕರಣ: ಮೃತರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ವಿತರಣೆ, ಪ್ರತಿಭಟನೆ ವಾಪಸ್

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

ಬೆಂಗಳೂರು: ಮನೆಯಲ್ಲೇ ತಂದೆ-4 ವರ್ಷದ ಮಗ ನಿಗೂಢ ಸಾವು; ಬೆಡ್​ರೂಮ್​​ನಲ್ಲಿ ಮಲಗಿದ್ದ ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರು!