ಏನಿದು ರಣ್ಬೀರ್ ಮಾತಿನರ್ಥ?

`ರಣ್ಬೀರ್ ಕಪೂರ್-ಕತ್ರೀನಾ ಕೈಫ್ ನಿಶ್ಚಿತಾರ್ಥವಾಗಿದೆಯಂತೆ. ಲಂಡನ್‍ನಲ್ಲಿ ಇಬ್ಬರೂ ಉಂಗುರ...
ಏನಿದು ರಣ್ಬೀರ್ ಮಾತಿನರ್ಥ?

`ರಣ್ಬೀರ್ ಕಪೂರ್-ಕತ್ರೀನಾ ಕೈಫ್ ನಿಶ್ಚಿತಾರ್ಥವಾಗಿದೆಯಂತೆ. ಲಂಡನ್‍ನಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರಂತೆ. ಮದುವೆಗೆ ಮುಹೂರ್ತ ನಿಗದಿಯಾಗಿದೆಯಂತೆ.

' ಈ ಎಲ್ಲಾ ಅಂತೆ ಕಂತೆಗಳು ಬಾಲಿವುಡ್‍ಅಂಗಳದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅಸಲಿಗೆ ಹೊಸ ವರ್ಷವನ್ನ ಈ ಬಾರಿ ಲಂಡನ್‍ನಲ್ಲಿ ಬರಮಾಡಿಕೊಂಡ ಈ ಪ್ರಣಯ ಪಕ್ಷಿಗಳು ಎಂಗೇಜ್ ಆಗಿರುವುದು ನಿಜವೇ? ಇಲ್ಲಿಯವರೆಗೂ ಗಪ್‍ಚುಪ್ ಆಗಿದ್ದ ರಣ್ಬೀರ್, ಈ ಪ್ರಶ್ನೆಗೆ ಖುದ್ದು ಉತ್ತರ ಕೊಟ್ಟಿದ್ದಾರೆ. ಅವರು ಎಂಗೇಜ್‍ಮೆಂಟ್ ಸುದ್ದಿಯನ್ನ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

`ನಾವಿಬ್ಬರೂ ಮದುವೆಯಾಗುವುದಕ್ಕೆ ಸಿದ್ಧರಿದ್ದೀವಿ ಅಂತ ಗಂಡು-ಹೆಣ್ಣು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದೇ ಎಂಗೇಜ್ಮೆಂಟ್. ಬದುಕಿನ ಆ ಹಂತಕ್ಕೆ ನಾನಿನ್ನೂ ತಲುಪಿಲ್ಲ' ಅಂತ ಹೇಳಿಕೆ ನೀಡಿದ್ದಾರೆ. ಅಲ್ಲಿಗೆ, ಇಷ್ಟು ದಿನ ಗುಲ್ಲೆದ್ದಿದ್ದ ಗಾಸಿಪ್‍ಗೆ ಈಗ ಮುಕ್ತಿ ಸಿಕ್ಕಿದೆ. ಈ ಸುದ್ದಿ ಕೇಳಿ ಹಾರ್ಟ್ ಬ್ರೇಕ್ ಮಾಡಿಕೊಂಡಿದ್ದ ಹುಡುಗಿಯರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ತಾಳಿ ಕಟ್ಟುವ ಶುಭ ವೇಳೆಗೆ ರೆಡಿ ಅನ್ನೋ ಹಾಗೆ, ಕತ್ರೀನಾ ಜತೆ ಒಂದೇ ಮನೆಯಲ್ಲಿ ವಾಸವಿರುವ ರಣ್ಬೀರ್‍ನ, `ಬದುಕಿನ ಆ ಹಂತಕ್ಕೆ ತಲುಪಿಲ್ಲ' ಅನ್ನುವ ಮಾತಿನ ಅರ್ಥವೇನು?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com