ತನ್ನ ಮೊದಲ ಚಿತ್ರದ ನಿರ್ಮಾಪಕನ ಕಿಡ್ನಿ ಕಸಿಗೆ ಅಕ್ಷಯ್ ನೆರವು

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಬಾಲಿವುಡ್ ಗೆ ಪರಿಚಯಿಸಿದ್ದ ನಿರ್ಮಾಪಕ ರವಿ ಶ್ರೀವಾಸ್ತವ ಅವರ ಕಿಡ್ನಿ ಕಸಿಗೆ ಅಕ್ಷಯ್ ಹಣದ ನೆರವು ನೀಡಿದ್ದಾರೆ...
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
Updated on
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಬಾಲಿವುಡ್ ಗೆ ಪರಿಚಯಿಸಿದ್ದ ನಿರ್ಮಾಪಕ ರವಿ ಶ್ರೀವಾಸ್ತವ ಅವರ ಕಿಡ್ನಿ ಕಸಿಗೆ ಅಕ್ಷಯ್ ಹಣದ ನೆರವು ನೀಡಿದ್ದಾರೆ. 
ರವಿ ಶ್ರೀವಾತ್ಸವ್ ಅವರು ಸೌಗಂಧ್ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಅವರನ್ನು ಬಾಲಿವುಡ್ ಗೆ ಪರಿಚಯಿಸಿದ್ದರು. ಒಂದು ಕಾಲದಲ್ಲಿ ನಿರ್ಮಾಪಕರಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದ ರವಿ ಅವರು ಇಂದು ತೀರಾ ಬಡತನದಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದಾರೆ. ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಕಿಡ್ನಿ ಕಸಿಗೆ ನೆರವಿನ ಹಸ್ತ ಚಾಚಿದ್ದಾರೆ. 
ಕಿಡ್ನಿ ಕಸಿಗೆ ತಗುಲುವ 17 ಲಕ್ಷ ರುಪಾಯಿಗಳನ್ನು ಭರಿಸಲು ಅಕ್ಷಯ್ ಕುಮಾರ್ ಮುಂದಾಗಿದ್ದಾರೆ. ಅಲ್ಲದೆ ಇದುವರೆಗೂ ತಮ್ಮನ್ನು ಭೇಟಿಯಾಗದಿದ್ದಕ್ಕೆ ಕ್ಷಮೆಯನ್ನೂ ಯಾಚಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com