ಅತ್ಯಾಚಾರ ಪ್ರಕರಣದಲ್ಲಿ ಜಾಮೀನು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಥುನ್ ಚಕ್ರವರ್ತಿ ಪುತ್ರ
ಅತ್ಯಾಚಾರ ಪ್ರಕರಣದಲ್ಲಿ ಜಾಮೀನು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಥುನ್ ಚಕ್ರವರ್ತಿ ಪುತ್ರ

ಅತ್ಯಾಚಾರ ಪ್ರಕರಣದಲ್ಲಿ ಜಾಮೀನು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಥುನ್ ಚಕ್ರವರ್ತಿ ಪುತ್ರ

ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಅಕ್ಷಯ್ ಮಂಗಳವಾರ ವಿವಾಹವಾಗಿದ್ದಾರೆ.
ಊಟಿ: ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಅಕ್ಷಯ್ ಮಂಗಳವಾರ ವಿವಾಹವಾಗಿದ್ದಾರೆ. 

ಮಹಾಅಕ್ಷಯ್ -ಮಾದಲಸಾ ಶರ್ಮಾ ಹಸೆಮಣೆ ಏರಿದ್ದು ಊಟಿಯಲ್ಲಿನ ಹೋಟೆಲ್ ನಲ್ಲಿ ವಿವಾಹ ಕಾರ್ಯಕ್ರಮ ಸರಳವಾಗಿ ನೆರವೇರಿತು.

ಕಳೆದ ಶನಿವಾರ ಊಟಿಯಲ್ಲಿನ ಮಿಥುನ್ ಚಕ್ರವರ್ತಿ ಒಡೆತನದ ಐಷಾರಾಮಿ ಹೋಟೆಲ್ ನಲ್ಲಿ ಏರ್ಪಾಡಾಗಿದ್ದ ಮದುವೆ ಕಡೆ ಕ್ಷಣದಲ್ಲಿ ರದ್ದಾಗಿತ್ತು. ಯುವತಿಯೊಬ್ಬರು ಮಹಾಅಕ್ಷಯ್ ತನ್ನನ್ನು ಮದುವೆಯಾಗುವುದಾಗಿ ವಂಚಿಸಿದ್ದಾನೆ ಎಂದು ಆರೊಪಿಸಿದ ಹಿನ್ನೆಲೆಯಲ್ಲಿ ಪೋಲೀಸರು ಮದುವೆಯನ್ನು ರದ್ದು ಮಾಡಿದ್ದರು.

ಅಂದು ಪೋಲೀಸರು ನಿರ್ಗಮಿಸಿದ ಬಳಿಕ ರಿಜಿಸ್ಟರ್ ವಿವಾಹವಾಗಿದ್ದ ಮಹಾಅಕ್ಷಯ್ -ಮಾದಲಸಾ ಶರ್ಮಾ ಇಂದು ಶಾಸ್ತ್ರೋಕ್ತವಾಗಿ ಮದುವೆ ಆಗಿ ದಾಂಪತ್ಯ ಜೀವನ ಪ್ರಾರಂಭಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com