ಮುಂಬೈ: ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಖ್ತರ್ ತಾವು ಜನರನ್ನು ಒಡೆಯುವ ಯಾವುದೇ ಶಕ್ತಿಯನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಮುಸ್ಲಿಂ ಮೂಲಭೂತವಾದಿಗಳನ್ನು, ಹಿಂದೂ ತೀವ್ರವಾದಿಗಳನ್ನೂ ತಾವು ಸಹಿಸುವುದಿಲ್ಲ ಎಂದಿದ್ದಾರೆ.
ಇತ್ತೀಚಿಗೆ ಅವರು ತಾಲಿಬಾನ್ ಮತ್ತು ಹಿಂದೂ ತೀವ್ರವಾದಿಗಳ ನಡುವೆ ಹೋಲಿಕೆ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಜಾವೇದ್ ಸ್ಪಷ್ಟನೆ ನೀಡಿದ್ದಾರೆ. ತಮಗೆ ಮುಸ್ಲಿಮರೂ ಜೀವ ಬೆದರಿಕೆ ಒಡ್ಡಿದ್ದಾರೆ ಹೀಗಾಗಿ ತಾವು ಯಾರೊಬ್ಬರ ಪರವಲ್ಲ. ಜನಸಾಮಾನ್ಯರ ಪರ ಎಂದು ಹೇಳಿದ್ದಾರೆ.
ಭಾರತೀಯರು ಯಾವತ್ತೂ ತಾಲಿಬಾನಿಗಳಾಗಲು ಸಾಧ್ಯವಿಲ್ಲ. ಒಳ್ಲೆಯತನ ಎನ್ನುವುದು ನಮ್ಮೆಲ್ಲರ ವಂಶವಾಹಿಯಲ್ಲೇ ಹರಿಯುತ್ತಿದೆ. ನಾವು ಎಲ್ಲವನ್ನೂ ಸಮತೋಲನ ಮಾಡಲಿಚ್ಛಿಸುವವರು. ಲೆಫ್ಟೂ ಅಲ್ಲ ರೈಟೂ ಅಲ್ಲ ರಸ್ತೆಯ ಮಧ್ಯದಲ್ಲಿರುವವರು ಎಂದು ಅಖ್ತರ್ ಮಾರ್ಮಿಕವಾಗಿ ನುಡಿದಿದ್ದಾರೆ.
Advertisement