ಗೀತಾ ಬ್ಯಾಂಗಲ್ ಸ್ಟೋರ್ ಗೆ ಥಿಯೇಟರ್ ಸಮಸ್ಯೆ

ಬಿಡುಗಡೆಯಾದ ಒಂದು ವಾರದಲ್ಲೇ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರವನ್ನು ಹಲವು ಥಿಯೇಟರ್ ಗಳಿಂದ ತೆಗೆದುಹಾಕಲಾಗಿರುವುದಕ್ಕೆ ನಿರ್ದೇಶಕ ಮಂಜು ಮಿತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೀತಾ ಬ್ಯಾಂಗಲ್ ಸ್ಟೋರ್
ಗೀತಾ ಬ್ಯಾಂಗಲ್ ಸ್ಟೋರ್

ಬಿಡುಗಡೆಯಾದ ಒಂದು ವಾರದಲ್ಲೇ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರವನ್ನು ಹಲವು ಥಿಯೇಟರ್ ಗಳಿಂದ ತೆಗೆದುಹಾಕಲಾಗಿರುವುದಕ್ಕೆ ನಿರ್ದೇಶಕ ಮಂಜು ಮಿತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದರೂ, ಗಿರಿನಗರದಲ್ಲಿರುವ ಅನುಪಮ ಥಿಯೇಟರ್ ನಿಂದ ಚಿತ್ರವನ್ನು ಕೈಲಾಶ್ ಗೆ ವರ್ಗಾವಣೆ ಮಾಡಲಾಗಿದ್ದು, ನೀನೆ ಬರಿ ನೀನೆ ಚಿತ್ರ ಬಿಡುಗಡೆ ಮಾಡಿದ್ದಾರೆ. ಇದರಿಂದ ಪ್ರೋತ್ಸಾಹ ವಂಚಿತ ಭಾವನೆ ಮೂಡುತ್ತಿದೆ ಎಂದು ಮಂಜು ಮಿತ್ರ ಹೇಳಿದ್ದಾರೆ.
"ಹೊಸದಾಗಿ ಚಿತ್ರರಂಗವನ್ನು ಪ್ರವೆಶಿಸಿದ್ದೇವೆ, ಜನಗಳನ್ನು ತಲುಪಲು ಮತ್ತಷ್ಟು ಸಮಯ ಬೇಕಾಗಿದೆ. ಆದರೆ ಚಿತ್ರಮಂದಿರಗಳು ನಮಗೆ ಅವಕಾಶ ನೀಡುತ್ತಿಲ್ಲ, ಮೂರು ವರ್ಷಗಳ ಕಠಿಣ ಪರಿಶ್ರಮ ಒಂದೇ ವಾರದಲ್ಲಿ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಯಾರನ್ನು ಸಹಾಯ ಕೇಳಬೇಕೆಂಬುದು ತಿಳಿಯದೆ, ಚಿತ್ರತಂಡ ಮಾಧ್ಯಮಗಳ ಮೂಲಕ ಸಾರ್ವಜನಿಕ ಅಭಿಪ್ರಾಯ ಪಡೆಯಲು ಮುಂದಾಗಿದೆ. ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರ ಬಿಡುಗಡೆಯಾದ ದಿನವೇ ಐದು ಚಿತ್ರಗಳು ಬಿಡುಗಡೆಯಾಗಿದ್ದು ಚಿತ್ರವನ್ನು ಬಿಡುಗಡೆ ಮಾಡಿದ ಸಮಯ ಸಹ ಥಿಯೇಟರ್ ಸಮಸ್ಯೆಗೆ ಕಾರಣವಾಗಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com