ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?; 2017 ಏಪ್ರಿಲ್ 28 ರಂದು ಉತ್ತರ!

ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಬಾಹುಬಲಿ-1 ಚಿತ್ರ ನೋಡಿದ ಬಹುತೇಕ ಪ್ರೇಕ್ಷಕರ ಪ್ರಶ್ನೆ ಇದು. ಅಸಂಖ್ಯ ಪ್ರೇಕ್ಷಕರ ಈ ಬಹುದೊಡ್ಡ ಪ್ರಶ್ನೆಗೆ ಮುಂದಿನ ವರ್ಷ| ಅಂದರೆ 2017ರ ಏಪ್ರಿಲ್ 28ರಂದು ಉತ್ತರ ದೊರೆಯಲಿದೆ.
ಬಾಹುಬಲಿ-2 ಚಿತ್ರ (ಸಂಗ್ರಹ ಚಿತ್ರ)
ಬಾಹುಬಲಿ-2 ಚಿತ್ರ (ಸಂಗ್ರಹ ಚಿತ್ರ)

ಹೈದರಾಬಾದ್: ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಬಾಹುಬಲಿ-1 ಚಿತ್ರ ನೋಡಿದ ಬಹುತೇಕ ಪ್ರೇಕ್ಷಕರ ಪ್ರಶ್ನೆ ಇದು. ಅಸಂಖ್ಯ ಪ್ರೇಕ್ಷಕರ ಈ ಬಹುದೊಡ್ಡ ಪ್ರಶ್ನೆಗೆ ಮುಂದಿನ ವರ್ಷ|  ಅಂದರೆ 2017ರ ಏಪ್ರಿಲ್ 28ರಂದು ಉತ್ತರ ದೊರೆಯಲಿದೆ.

ತನ್ನ ಮೇಕಿಂಗ್ ನಿಂದಲೇ ಇಡೀ ಭಾರತೀಯ ಚಿತ್ರರಂಗವನ್ನು ಸೆಳೆಯುತ್ತಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹಬಲಿ-2 (ದಿ ಕನ್ ಕ್ಲುಷನ್) 2017ರ ಏಪ್ರಿಲ್  28ರಂದು ತೆರೆಕಾಣಲಿದೆಯಂತೆ. ಹೀಗೆಂದು ಸ್ವತಃ ಚಿತ್ರದ ಹಿಂದಿ ಭಾಷೆಯ ವಿತರಕ ಮತ್ತು ಖ್ಯಾತ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರಣ್,  ತಮ್ಮ ಕುಟುಂಬದ ನೇತೃತ್ವದ ಧರ್ಮ ಪ್ರೊಡಕ್ಷನ್ಸ್ ಮತ್ತು ಎಎ ಫಿಲ್ಮ್ಸ್ ಸಂಸ್ಥೆ ರಾಜಮೌಳಿಯವರಂತ ಚಾಣಾಕ್ಷ ನಿರ್ದೇಶಕರೊಂದಿಗೆ ಕೆಲಸ ಮಾಡಲು ಹೆಮ್ಮೆ ಪಡುತ್ತದೆ.

ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ-2 2017ರ ಏಪ್ರಿಲ್ 28 ರಂದು ತೆರೆಕಾಣಲಿದೆ. ಈ ಅದ್ಬುತ ಚಿತ್ರ ವೀಕ್ಷಣೆಗೆ ನಾನು ತುಂಬಾ ಕಾತುರನಾಗಿದ್ದೇನೆ ಎಂದು ಟ್ವೀಟ್  ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com