ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?; 2017 ಏಪ್ರಿಲ್ 28 ರಂದು ಉತ್ತರ!

ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಬಾಹುಬಲಿ-1 ಚಿತ್ರ ನೋಡಿದ ಬಹುತೇಕ ಪ್ರೇಕ್ಷಕರ ಪ್ರಶ್ನೆ ಇದು. ಅಸಂಖ್ಯ ಪ್ರೇಕ್ಷಕರ ಈ ಬಹುದೊಡ್ಡ ಪ್ರಶ್ನೆಗೆ ಮುಂದಿನ ವರ್ಷ| ಅಂದರೆ 2017ರ ಏಪ್ರಿಲ್ 28ರಂದು ಉತ್ತರ ದೊರೆಯಲಿದೆ.
ಬಾಹುಬಲಿ-2 ಚಿತ್ರ (ಸಂಗ್ರಹ ಚಿತ್ರ)
ಬಾಹುಬಲಿ-2 ಚಿತ್ರ (ಸಂಗ್ರಹ ಚಿತ್ರ)
Updated on

ಹೈದರಾಬಾದ್: ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಬಾಹುಬಲಿ-1 ಚಿತ್ರ ನೋಡಿದ ಬಹುತೇಕ ಪ್ರೇಕ್ಷಕರ ಪ್ರಶ್ನೆ ಇದು. ಅಸಂಖ್ಯ ಪ್ರೇಕ್ಷಕರ ಈ ಬಹುದೊಡ್ಡ ಪ್ರಶ್ನೆಗೆ ಮುಂದಿನ ವರ್ಷ|  ಅಂದರೆ 2017ರ ಏಪ್ರಿಲ್ 28ರಂದು ಉತ್ತರ ದೊರೆಯಲಿದೆ.

ತನ್ನ ಮೇಕಿಂಗ್ ನಿಂದಲೇ ಇಡೀ ಭಾರತೀಯ ಚಿತ್ರರಂಗವನ್ನು ಸೆಳೆಯುತ್ತಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹಬಲಿ-2 (ದಿ ಕನ್ ಕ್ಲುಷನ್) 2017ರ ಏಪ್ರಿಲ್  28ರಂದು ತೆರೆಕಾಣಲಿದೆಯಂತೆ. ಹೀಗೆಂದು ಸ್ವತಃ ಚಿತ್ರದ ಹಿಂದಿ ಭಾಷೆಯ ವಿತರಕ ಮತ್ತು ಖ್ಯಾತ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರಣ್,  ತಮ್ಮ ಕುಟುಂಬದ ನೇತೃತ್ವದ ಧರ್ಮ ಪ್ರೊಡಕ್ಷನ್ಸ್ ಮತ್ತು ಎಎ ಫಿಲ್ಮ್ಸ್ ಸಂಸ್ಥೆ ರಾಜಮೌಳಿಯವರಂತ ಚಾಣಾಕ್ಷ ನಿರ್ದೇಶಕರೊಂದಿಗೆ ಕೆಲಸ ಮಾಡಲು ಹೆಮ್ಮೆ ಪಡುತ್ತದೆ.

ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ-2 2017ರ ಏಪ್ರಿಲ್ 28 ರಂದು ತೆರೆಕಾಣಲಿದೆ. ಈ ಅದ್ಬುತ ಚಿತ್ರ ವೀಕ್ಷಣೆಗೆ ನಾನು ತುಂಬಾ ಕಾತುರನಾಗಿದ್ದೇನೆ ಎಂದು ಟ್ವೀಟ್  ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com