ಕಾವೇರಿ ಗಲಾಟೆ: ಚೆನ್ನೈನಲ್ಲಿ ರಜನಿಕಾಂತ್, ಪ್ರಭುದೇವಾ ಸೇರಿ ಕನ್ನಡ ಮೂಲದ ನಟರಿಗೆ ಭದ್ರತೆ

ಕರ್ನಾಟಕದಲ್ಲಿ ಕಾವೇರಿ ವಿವಾದ ಹಿಂಸಾಚಾರ ರೂಪ ಪಡೆಯುತ್ತಿದ್ದಂತೆ ಅತ್ತ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡ ಮೂಲದ ನಟ ನಟಿಯರಿಗೆ ಜಯಲಲಿತಾ ಸರ್ಕಾರ ಸೂಕ್ತ...
ರಜನಿಕಾಂತ್, ಪ್ರಭುದೇವಾ
ರಜನಿಕಾಂತ್, ಪ್ರಭುದೇವಾ
Updated on

ಚೆನ್ನೈ: ಕರ್ನಾಟಕದಲ್ಲಿ ಕಾವೇರಿ ವಿವಾದ ಹಿಂಸಾಚಾರ ರೂಪ ಪಡೆಯುತ್ತಿದ್ದಂತೆ ಅತ್ತ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡ ಮೂಲದ ನಟ ನಟಿಯರಿಗೆ ಜಯಲಲಿತಾ ಸರ್ಕಾರ ಸೂಕ್ತ ಭದ್ರತೆ ಒದಗಿಸಿದೆ.

ಚೆನ್ನೈನಲ್ಲಿ ನೆಲೆಸಿರುವ ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್, ಪ್ರಭುದೇವಾ ಸೇರಿದಂತೆ ಇನ್ನಿತರ ನಟ-ನಟಿಯರಿಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಗಳು  ನಡೆದಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಎಂ ಜಯಲಲಿತಾಗೆ ಪತ್ರ ಬರೆದು ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com