ತೆರೆಯ ಮೇಲೆ ಬರಲಿದೆ ಡಿಐಜಿ ರೂಪಾ ಕಥೆ: ಐಪಿಎಸ್ ಅಧಿಕಾರಿ ಭೇಟಿ ಮಾಡಿದ ಎಎಂಆರ್ ರಮೇಶ್

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ವಿಐಪಿ ಸೌಲಭ್ಯ ಸೇರಿದಂತೆ ಅಲ್ಲಿ ನಡೆಯುವ ಅಕ್ರಮ ...
ಐಪಿಎಸ್ ಅಧಿಕಾರಿ ರೂಪಾ ಮತ್ತು ನಿರ್ದೇಶಕ ಎಎಂಆರ್ ರಮೇಶ್
ಐಪಿಎಸ್ ಅಧಿಕಾರಿ ರೂಪಾ ಮತ್ತು ನಿರ್ದೇಶಕ ಎಎಂಆರ್ ರಮೇಶ್
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ವಿಐಪಿ ಸೌಲಭ್ಯ ಸೇರಿದಂತೆ ಅಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ವರದಿ ನೀಡಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಐಪಿಎಸ್ ಅಧಿಕಾರಿ ರೂಪಾ ಅವರ ಜೀವನ ಚರಿತ್ರೆ ಸಿನಿಮಾವಾಗಿ ಮೂಡಿ ಬರಲಿದೆ.
ಸೈನೈಡ್ ಮತ್ತು ಅಟ್ಟಹಾಸ ಸಿನಿಮಾ ನಿರ್ದೇಶಕ ಎಎಂಆರ್ ರಮೇಶ್ ಕಳೆದ ವಾರ ರೂಪಾ ಅವರನ್ನು ಭೇಟಿ ಮಾಡಿದ್ದಾರೆ. ರೂಪಾ ಅವರ ಜೀವನ ಚರಿತ್ರೆ ಬಗ್ಗೆ ಸಿನಿಮಾ ಮಾಡಲು ಹೊರಟಿರುವ ರಮೇಶ್ ರೂಪಾ ಅವರ ಕೌಟುಂಬಿಕ ಹಿನ್ನೆಲೆ ಮತ್ತು ಜೀವನ ಶೈಲಿಗಳ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ. 
ಪರಪ್ಪನ ಅಗ್ರಹಾರ ಜೈಲು ಪ್ರಕರಣದ ಬಗ್ಗೆ ಮಾತ್ರ ಸಿನಿಮಾ ಮಾಡುವ ಉದ್ದೇಶವಿತ್ತು. ಆದರೆ ಅವರ ಜೀವನದ ಕೆಲ ವಿಷಯಗಳ ಬಗ್ಗೆ ಮಾಹಿತಿ ಅಗತ್ಯವಿತ್ತು, ಹೀಗಾಗಿ ಅವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದೇನೆ ಎಂದು ರಮೇಶ್ ತಿಳಿಸಿದ್ದಾರೆ, ಸಿಐಡಿ ಅಧಿಕಾರಿ ಶರತ್ ಚಂದ್ರ ಸೇರಿದಂತೆ ಮತ್ತಿತ್ತರ ಅಧಿಕಾರಿಗಳನ್ನು ಭೇಟಿ ಮಾಡಿ ನಂತರ ಚಿತ್ರಕಥೆ ಬರೆಯುವುದಾಗಿ ಹೇಳಿದ್ದಾರೆ.
ರೂಪಾ ಅವರ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್, ಅನುಷ್ಕಾ ಶೆಟ್ಟಿ ಅಥವಾ ನಯನಾ ತಾರಾ ಹೆಸರುಗಳು ನನ್ನ ತಲೆಯಲ್ಲಿವೆ, ಚಿತ್ರಕಥೆ ಅಂತಿಮಗೊಂಡ ನಂತರ ನಾಯಕಿ ಆಯ್ಕೆ ನಡೆಯಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com