ಸಾಧು ಕೋಕಿಲಾ ಸಹೋದರಿ ಮನೆಗೆ ಹೋಗಿದ್ದಾಗ ವಿಜಯ್ ಕುಮಾರ್ ಗೆ ಕಾರು ಹೊರಗಡೆ ನಿಲ್ಲಿಸಲು ಹೇಳಿ ಸಾಧು ಮನೆಯೊಳಗೆ ಹೋಗಿದ್ದರು. ಈ ಸಂದರ್ಭದಲ್ಲಿ ಚಾಲಕ ಕಾರಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಮತ್ತು ಹಣವನ್ನು ತನ್ನ ಮನೆಗೆ ಸಾಗಿಸಿದ್ದ.ಈ ಸಂಬಂಧ ಸಾಧು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ನಂತರ ಚಾಲಕನೇ ಕೃತ್ಯವೆಸಗಿದ್ದು ಬೆಳಕಿಗೆ ಬಂದಿದೆ.