ಈ ಬಗ್ಗೆ ಆಂಗ್ಲ ದೈನಿಕವೊಂದು ವರದಿ ಮಾಡಿದ್ದು, ಅಧ್ಯಾತ್ಮಿಕ ಜೀವಿಯೂ ಆಗಿರುವ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರು ತಮ್ಮ ಕೆಲವು ಸ್ನೇಹಿತರೊಡನೆ ಸೇರಿ ಹಿಮಾಲಯದ ದುನಗಿರಿಯಲ್ಲಿ ಆಶ್ರಮವನ್ನು ನಿರ್ಮಿಸುತ್ತಿದ್ದಾರಂತೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಆಶ್ರಮದಲ್ಲಿ, ಧ್ಯಾನ, ಯೋಗಗಳನ್ನು ಅರಸಿ ಬರುವ ಸಾಧಕರು ಎಷ್ಟು ದಿನ ಬೇಕೋ ಅಷ್ಟು ದಿನ ಉಚಿತವಾಗಿ ಅಲ್ಲಿ ನೆಲೆಯೂರಲು ಅವಕಾಶ ನೀಡಲಾಗುತ್ತದೆಯಂತೆ.