ಯಕ್ಷ ಚಿತ್ರದ ನಂತರ ಬಾಲಿವುಡ್ ನಟ ನಾನಾ ಪಾಟೇಕರ್ ಮತ್ತೆ ಸ್ಯಾಂಡಲ್ ವುಡ್ ಗೆ ಆಗಮಿಸುತ್ತಿದ್ದಾರೆ.
ನಾಯಕ ನಟ ಮನೋರಂಜನ್ ಅಭಿನಯದ ಚಂದ್ರಕಲಾ ನಿರ್ದೇಶನದ ಚಿಲ್ಲಂ ಚಿತ್ರದಲ್ಲಿ ಅವರು ಅಭಿಯಿಸುತ್ತಿದ್ದಾರೆ. ಈ ಚಿತ್ರದಲ್ಲಿನ ಅಭಿನಯಿಸುವಂತೆ ಚಿತ್ರತಂಡ ನಾನಾ ಪಾಟೇಕರ್ ಬಳಿ ಕೆಲ ತಿಂಗಳ ಹಿಂದೆ ಕೇಳಿಕೊಂಡಿತ್ತು. ಅದಕ್ಕೆ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬಂತಹ ಮಾಹಿತಿ ತಿಳಿದುಬಂದಿದೆ.
ಚಿಲ್ಲಂ ಮೂಲಕ ಡಾ. ರಾಜ್ ಕುಮಾರ್ ಪುತ್ರ ರಾಘವೇಂದ್ರ ಕುಮಾರ್ ಧೀರ್ಘ ಕಾಲದ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ವಿಲನ್ ಆಗಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ತೆರೆಯ ಮೇಲೆ ಭಿನ್ನ ಪ್ರತಿಭೆ ವೀಕ್ಷಿಸುವ ಅವಕಾಶ ಕಲ್ಪಿಸುತ್ತಿದ್ದಾರೆ.
ಪ್ರಿಯಾಂಕ ತಿಮ್ಮೇಶ್ ನಟಿಯಾಗಿದ್ದು, ಬಿಗ್ ಬಾಸ್ ಖ್ಯಾತಿಯ ದಿವಾಕರ್, ಸಂದೀಪ್ ರಾಗ, ವಿ. ನಾಥ್, ಹಾಗೂ ನಿರ್ದೇಶಕರ ಮಗ ಭರತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿಲ್ಲಂ ನಿರ್ಮಾಣ ಪೂರ್ವ ಹಂತದಲ್ಲಿದ್ದು, ಮೇ 16 ರಿಂದ ಚಿತ್ರೀಕರಣ ಆರಂಭವಾಗಲಿದೆ. ನೊಬಿನ್ ಪೌಲ್ ಅವರು ಸಂಗೀತ ಸಂಯೋಜಿಸಿದ್ದು, ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ.
Advertisement