ದೊಡ್ಮನೆ ಹುಡ್ಗ , ರಾಜಕುಮಾರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಸರಳತೆ, ವಿಧೇಯತೆಯಿಂದಲೂ ಅಭಿಮಾನಿಗಳ ಪಾಲಿನ ನೆಚ್ಚಿನ ನಾಯಕ ನಟರಾಗಿದ್ದಾರೆ.
ಸದ್ಯ ನಟ ಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರುವ ಪುನೀತ್ ರಾಜ್ ಕುಮಾರ್, ಚಿಕ್ಕಮಗಳೂರು ಸುತ್ತಮುತ್ತ ಬೀಡು ಬಿಟ್ಟಿದ್ದಾರೆ. ಚಿತ್ರೀಕರಣದ ಬಿಡುವಿನ ಸಮಯದಲ್ಲಿ 34 ವರ್ಷಗಳ ಬೆಟ್ಟದ ಹೂವು ಸಿನಿಮಾದ ಚಿತ್ರೀಕರಣ ನಡೆದ ಸ್ಥಳ ನೆನಪಾಗಿದ್ದು, ಕೂಡಲೇ ಅಲ್ಲಿಗೆ ಹೋಗಿದ್ದಾರೆ.
ತಾವೊಬ್ಬ ಸ್ಟಾರ್ ಎಂಬುದನ್ನೆ ಮರೆತು ಸಿನಿಮಾಗಾಗಿ ಸೆಟ್ ಹಾಕಿದ್ದ ಸ್ಥಳದ ಹುಡುಕಾಟ ನಡೆಸಿದ್ದಾರೆ. ನಂತರ ಖುದ್ದು ಪುನೀತ್ ಅವರೇ ಸ್ಥಳೀಯರನ್ನು ಪರಿಚಯ ಮಾಡಿಕೊಂಡಿದ್ದು, ಅವರೊಟ್ಟಿಗೆ ಪೋಟೋ ತೆಗೆಸಿಕೊಂಡು ಸರಳತೆ ಮೆರೆದಿದ್ದಾರೆ.
Advertisement