ಬೆಂಗಳೂರು: ಅನಾರೋಗ್ಯದ ಕಾರಣ ಸ್ವಲ್ಪ ದಿನ ವಿರಾಮ ಪಡೆದುಕೊಂಡಿದ್ದ ಮನೋರಂಜನ್, ಮತ್ತೇ ಕಂಬ್ಯಾಕ್ ಆಗುತ್ತಿದ್ದಾರೆ. ಮುಂದಿನ ವರ್ಷ ನಾಲ್ಕು ಚಿತ್ರಗಳಿಗೆ ಅವರು ಈಗ್ಗಾಗಲೇ ಸಹಿ ಮಾಡಿದ್ದಾರೆ.
ಬೃಹಸ್ಮತಿ ನಂತರ ಕ್ಯಾಮರಾ ಮುಂದೆ ಕಾಣಿಸಿಕೊಳ್ಳದ ಮನೋರಂಜನ್, ಸದ್ಯ ಪಾತ್ರಕ್ಕೆ ತಕ್ಕಂತೆ ದೇಹ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ವರ್ಷ ಈ ಎಲ್ಲಾ ಚಿತ್ರಗಳ ಚಿತ್ರೀಕರಣ ಆರಂಭವಾಗಲಿದ್ದು, ಹೊಸಬರೊಂದಿಗೆ ಮತ್ತೆ ಬಣ್ಣಹಚ್ಚಲಿದ್ದಾರೆ.
ಸ್ವಲ್ಪ ಅನಾರೋಗ್ಯ ಕಾರಣ 20 ದಿನಗಳ ಕಾರಣ ಆಸ್ಪತ್ರೆಯಲ್ಲಿಬೇಕಾಗಿತ್ತು. ಮೂರು ತಿಂಗಳ ಕಾಲ ಮೆಡಿಕೇಷನ್ ನಲ್ಲಿದ್ದ ಕಾರಣ ಬಾರ ಎತ್ತದಂತೆ ಸಲಹೆ ನೀಡಲಾಗಿತ್ತು. 10 ದಿನಗಳ ನಂತರ ಇದರಿಂದ ಮುಕ್ತಿ ಸಿಕ್ಕಿದ್ದು, ಮುಂದಿನ ಮೂರು ತಿಂಗಳ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದು ಮನೋರಂಜನ್ ತಿಳಿಸಿದರು.
ಜೆ.ಚಂದ್ರಕಲಾ ನಿರ್ದೇಶದ ಚಿಲ್ಲಂ ಚಿತ್ರದ ಚಿತ್ರೀಕರಣ ಆರಂಭವಾದ್ದರೂ ಮಧ್ಯದಲ್ಲಿಯೇ ನಿಂತಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಖಚಿತ ಮಾಹಿತಿ ಇಲ್ಲ. ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.
ಮನು ನಿರ್ದೇಶನದ ಚಿತ್ರದಲ್ಲಿ ಮನೋರಂಜನ್ ನಟಿಸಲಿದ್ದು, ಸಂಕ್ರಾಂತಿ ದಿನ ಮುಹೂರ್ತ ಆರಂಭವಾಗಲಿದೆ. ಮನೋರಂಜನ್ ಜನ್ಮದಿನದಂದು ಮತ್ತೊಂದು ಚಿತ್ರದ ಹೆಸರು ಘೋಷಣೆಯಾಗಲಿದೆ
Advertisement