ಚೆನ್ನೈನಲ್ಲಿ ಕೊಳಕು ಬಟ್ಟೆ, ಬರಿಗಾಲಲ್ಲಿ 'ಹುಚ್ಚ'ನಂತೆ ಅಲೆದಾಡುತ್ತಿರುವ ವೆಂಕಟ್, ಈ ವಿಡಿಯೋ ನೋಡಿ!

'ನನ್ ಮಗಂದ್', 'ನನ್ ಎಕ್ಕಡ' ಎಂದು ಎಲ್ಲರನ್ನು ಬೈಯುತ್ತಿದ್ದ ಹುಚ್ಚ ವೆಂಕಟ್ ಇದೀಗ ಚೆನ್ನೈನಲ್ಲಿ ಕೊಳಕು ಬಟ್ಟೆ ಧರಿಸಿ, ಬರಿಗಾಲಲ್ಲಿ ಅಲೆದಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹುಚ್ಚ ವೆಂಕಟ್...
ವೆಂಕಟ್
ವೆಂಕಟ್

ಬೆಂಗಳೂರು: 'ನನ್ ಮಗಂದ್', 'ನನ್ ಎಕ್ಕಡ' ಎಂದು ಎಲ್ಲರನ್ನು ಬೈಯುತ್ತಿದ್ದ ಹುಚ್ಚ ವೆಂಕಟ್ ಇದೀಗ ಚೆನ್ನೈನಲ್ಲಿ ಕೊಳಕು ಬಟ್ಟೆ ಧರಿಸಿ, ಬರಿಗಾಲಲ್ಲಿ ಅಲೆದಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹುಚ್ಚ ವೆಂಕಟ್ ಗೆ ಏನಾಯ್ತು ಎಂದು ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಭುವನ್ ಪೊನ್ನಣ್ಣ ಅಭಿನಯದ ರಾಂಧವ ಚಿತ್ರತಂಡ ಇತ್ತೀಚೆಗಷ್ಟೇ ಯುಎಫ್ ಓ ಕ್ಯೂಬ್ ಅಪ್ ಲೌಡ್ ವಿಚಾರವಾಗಿ ಚೆನ್ನೈಗೆ ತೆರಳಿತ್ತು. ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಹುಚ್ಚ ವೆಂಕಟ್ ಅವರು ಈ ರೀತಿ ಕಾಣಿಸಿಕೊಂಡಿದ್ದರು. ಕೂಡಲೇ ಕೆಳಗಿಳಿದು ವೆಂಕಟ್ ರನ್ನು ಮಾತನಾಡಿಸಲು ಮುಂದಾದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಹೋದರಂತೆ. 

ಹೀಗಾಗಿ ಹುಚ್ಚ ವೆಂಕಟ್ ಅವರ ಫೋಟೋ ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ಅವರು ಕುಟುಂಬಕ್ಕೆ ತಿಳಿದು ಅವರು ಚೆನ್ನೈನಿಂದ ವೆಂಕಟ್ ರನ್ನು ಕರೆತರುವ ಪ್ರಯತ್ನ ಮಾಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಚೆನ್ನೈನ ವೊಡಾಪಳನಿಯಲ್ಲಿ ಹುಚ್ಚ ವೆಂಕಟ್ ಅಲೆದಾಡುತ್ತಿರುವ ವಿಡಿಯೋವನ್ನು ಚಿತ್ರ ತಂಡ ಸೆರೆ ಹಿಡಿದು ಭುವನ್ ಗೆ ಕಳುಹಿಸಿ ಕೊಟ್ಟಿದ್ದು ಅವರು ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com