ಯಶ್ ಗೆ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದೇ....; ತೆಲುಗು ನಟ ಆಕಾಶ್ ಶಾಕಿಂಗ್ ಹೇಳಿಕೆ!

ರಾಕಿಂಗ್ ಸ್ಟಾರ್ ಯಶ್ ಅವರ ಕುರಿತಂತೆ ಖ್ಯಾತ ತೆಲುಗು ನಟ ಜೈ ಆಕಾಶ್ ಶಾಕಿಂಗ್ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಹೈದರಾಬಾದ್: ರಾಕಿಂಗ್ ಸ್ಟಾರ್ ಯಶ್ ಅವರ ಕುರಿತಂತೆ ಖ್ಯಾತ ತೆಲುಗು ನಟ ಜೈ ಆಕಾಶ್ ಶಾಕಿಂಗ್ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಈ ಹಿಂದೆ ತೆಲುಗಿನಲ್ಲಿ ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಪೂರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಚಿತ್ರಕಥೆ ತನ್ನದು ಎಂದು ಹೇಳಿಕೊಂಡು ಭಾರಿ ಸುದ್ದಿ ಮಾಡಿದ್ದ ಜೈ ಆಕಾಶ್ ಈಗ ಮತ್ತೆ ತಮ್ಮ ವಿಚಿತ್ರ ಹೇಳಿಕೆಗಳ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ನಟ ಜೈ ಆಕಾಶ್, ತಮಗೆ ಯಾವುದೇ ನಿರ್ದೇಶಕ ಅವಕಾಶ ನೀಡುತ್ತಿಲ್ಲ. ಬೇಕೆಂದೇ ತಮ್ಮನ್ನು ತುಳಿಯಲು ಯತ್ನಿಸುತ್ತಿದ್ದಾರೆ. ಈಗ ಕೆಜಿಎಫ್ ಮೂಲಕ ಸದ್ದು ಮಾಡಿರುವ ನಟ ಯಶ್ ಗೆ ನಟನೆ ಹೇಳಿಕೊಟ್ಟಿದ್ದೇ ನಾನು ಎಂಬರ್ಥದಲ್ಲಿ ಹೇಳಿಕೆ ನೀಡಿ ನಟ ಜೈ ಆಕಾಶ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಅಂತೆಯೇ ಈಗಲೂ ನಾನು ಸಂಭಾವನೆ ಇಲ್ಲದೇ ನಟಿಸಲು ಸಿದ್ಧ. ಆದರೆ ಉತ್ತಮ ನಿರ್ದೇಶಕ ಮತ್ತು ನಿರ್ಮಾಪಕರು ಬೇಕು. ನನ್ನ ಕೆಲ ಚಿತ್ರಗಳನ್ನು ಬೇಕೆಂದೇ ಕೆಲವರು ತೆರೆಕಾಣದಂತೆ ಮಾಡಿದ್ದಾರೆ ಎಂದು ನಟ ಜೈ ಆಕಾಶ್ ಆರೋಪಿಸಿದ್ದಾರೆ.
ಇನ್ನು ನಟ ಜೈ ಆಕಾಶ್ ಈ ಹಿಂದೆ 2007ರಲ್ಲಿ ನಟಿ ಪ್ರಿಯಾ ಹಾಸನ್ ನಿರ್ದೇಶಿಸಿ ನಟಿಸಿದ್ದ ಜಂಭದ ಹುಡುಗಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಚಿತ್ರದಲ್ಲಿ ಸಹಾಯಕ ಪಾತ್ರದಲ್ಲಿ ನಟ ಯಶ್ ಕೂಡ ಅಭಿನಯಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com