ಟಾಲಿವುಡ್ ನಲ್ಲಿ ಎನ್ ಟಿಆರ್ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಅವರ ಕುಟುಂಬದ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು, ಈ ಹಿಂದೆ ತೆರೆಮರೆಯಲ್ಲಿ ಸಾಗುತ್ತಿದ್ದ ವಾಕ್ಸಮರ ಇದೀಗ ನೇರಾ-ನೇರ ವೈಯುಕ್ತಿಕವಾಗಿ ಪರಸ್ಪರ ಕೆಸರೆರಚಾಟಕ್ಕೆ ತೊಡಗಿದೆ. ಈ ಹಿಂದೆ ಪವನ್ ಕಲ್ಯಾಣ್ ಯಾರು ನನಗೆ ಗೊತ್ತಿಲ್ಲ ಎಂದು ಹೇಳಿದ್ದ ಬಾಲಕೃಷ್ಣ ಅವರಿಗೆ ಟಾಂಗ್ ನೀಡಿದ್ದ ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಬಾಲಕೃಷ್ಣ ಯಾರು ಎಂದು ತಿಳಿದಿಲ್ಲ ಎಂದು ಹೇಳಿದ್ದರು. ಆ ಬಳಿಕ ಟ್ರೋಲ್ ಗೆ ತುತ್ತಾಗಿ ಮತ್ತೆ ಬಾಲಕೃಷ್ಣ ಮತ್ತು ಅವರ ಅಭಿಮಾನಿಗಳಿಗೆ ಟಾಂಗ್ ನೀಡಿದ್ದ ಅವರು, ಬಾಲಕೃಷ್ಣ ತೆಲುಗು ಸಿನಿಲೋಕದ ದಿಗ್ಗಜ ಹಾಸ್ಯನಟ ಎಂದು ಹೇಳಿದ್ದರು.