'ಶಿವಾಜಿ ಸುರತ್ಕಲ್' ಯಶಸ್ವಿ ಪ್ರದರ್ಶನ, ಭಾಗ 2 ಬರುತ್ತೆ ಎಂದ ರಮೇಶ್ ಅರವಿಂದ್!

ರಣ ರೋಚಕ ರಣಗಿರಿ ರಹಸ್ಯವನ್ನು ತೆರೆದಿಟ್ಟಿರುವ ‘ಶಿವಾಜಿ ಸುರತ್ಕಲ್ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದ್ದು, ಜನರ ಮನಗೆದ್ದಿದೆ ಎಂದು ಚಿತ್ರತಂಡ ಸಂತಸ ಹಂಚಿಕೊಂಡಿದೆ.
ಚಿತ್ರದ ಫೋಟೋ
ಚಿತ್ರದ ಫೋಟೋ
Updated on

ಬೆಂಗಳೂರು: ರಣ ರೋಚಕ ರಣಗಿರಿ ರಹಸ್ಯವನ್ನು ತೆರೆದಿಟ್ಟಿರುವ ‘ಶಿವಾಜಿ ಸುರತ್ಕಲ್ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದ್ದು, ಜನರ ಮನಗೆದ್ದಿದೆ ಎಂದು ಚಿತ್ರತಂಡ ಸಂತಸ ಹಂಚಿಕೊಂಡಿದೆ.

ಚಿತ್ರದ ಯಶಸ್ಸಿನ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ನಟ ರಮೇಶ್ ಅರವಿಂದ್, “ಶಿವಾಜಿ ಸುರತ್ಕಲ್ ಪ್ರತಿಯೊಬ್ಬರೂ ನೋಡಲೇಬೇಕಾದಂತಹ ಚಿತ್ರ ಕುಟುಂಬ ಸಮೇತರಾಗಿ ಹೋಗಿ ಚಿತ್ರ ವೀಕ್ಷಿಸುತ್ತಿರುವುದಾಗಿ ಅಭಿಮಾನಿಗಳು ಫೋಟೋ ಸಹಿತ ಟ್ವೀಟ್ ಮಾಡ್ತಿದ್ದಾರೆ ತುಂಬ ಖುಷಿಯಾಗ್ತಿದೆ” ಎಂದರು.

“ಕ್ರಿಕೆಟಿಗ ರಾಹುಲ್ ದ್ರಾವಿಡ್ ಚಿತ್ರ ವೀಕ್ಷಿಸಿ ಬೆನ್ನು ತಟ್ಟಿದ್ದಾರೆ ಕಥೆ ಅಷ್ಟರಮಟ್ಟಿಗಿನ ಗಟ್ಟಿತನ ಹೊಂದಿದ್ದು ಶಿವಾಜಿ ಸುರತ್ಕಲ್ ಭಾಗ 2 ಖಚಿತ  ಶಿವಾಜಿಯ ‍ಫ್ಲ್ಯಾಷ್ ಬ್ಯಾಕ್ ಅಥವಾ ಮುಂದೇನು ಎಂಬುದರ ಮೇಲೆಯೂ ಕಥೆ ಹೆಣೆಯಬಹುದು” ಎಂದು ರಮೇಶ್ ಅರವಿಂದ್ ಹೇಳಿದರು.

ನಿರ್ದೇಶಕ ಶ್ರೀವತ್ಸ, “ಕನ್ನಡ ಚಿತ್ರ ಪ್ಯಾನ್ ಇಂಡಿಯಾ ಟ್ರಾವೆಲ್ ಮಾಡುತ್ತ 173 ಚಿತ್ರಮಂದಿರಗಳಲ್ಲಿ ಶಿವಾಜಿ ಸುರತ್ಕಲ್ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದೆ ಚಿತ್ರಕಥೆಯ ಬಗ್ಗೆ ತಮಿಳು, ತೆಲುಗು ಚಿತ್ರರಂಗ ಹುಬ್ಬೇರಿಸಿದೆ  ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಹೌಸ್ ಫುಲ್ ಆಗಿದ್ದು, ನಿಜಕ್ಕೂ ರೋಮಾಂಚನವಾಯಿತು ಈ ಯಶಸ್ಸು ಇನ್ನಷ್ಟು ವಿಸ್ತರಣೆಗೆ ಅವಕಾಶ ನೀಡಲಿದೆ ಎಂಬ ಆಶಯವಿದೆ” ಎಂದರು.

ಬಿಗಿಯಾದ ನಿರೂಪಣೆ,  ಅಚ್ಚುಕಟ್ಟಾದ ಚಿತ್ರಕಥೆ ಜೊತೆಗೆ ರಮೇಶ್ ಅರವಿಂದ್ ಅಭಿನಯ. ಕೊನೆಯ ತನಕ ಎಲ್ಲೂ ಸುಳಿವು ಬಿಟ್ಟುಕೊಡದಂತೆ ಸಾಗುವ ಕಥೆ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುವಂತಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಆಕರ್ಷಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com