ಅಕ್ಟೋಬರ್ 15 ರಿಂದ ರಾಜ್ಯದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭ: ಐದು ಕನ್ನಡ ಚಿತ್ರಗಳು ರೀ ರಿಲೀಸ್!

ರಾಜ್ಯಾದ್ಯಂತ ಅಕ್ಟೋಬರ್ 15ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭವಾಗುತ್ತಿದ್ದು, ಲಾಕ್ ಡೌನ್ ಮುಂಚಿತವಾಗಿ ಬಿಡುಗಡೆಯಾಗಿದ್ದ ಐದು ಚಿತ್ರಗಳು ಮತ್ತೆ ಬಿಡುಗಡೆಯಾಗುತ್ತಿವೆ.
ಶಿವಾಜಿ ಸುರತ್ಕಲ್ ಚಿತ್ರದಲ್ಲಿ ನಟ ರಮೇಶ್ ಅರವಿಂದ್
ಶಿವಾಜಿ ಸುರತ್ಕಲ್ ಚಿತ್ರದಲ್ಲಿ ನಟ ರಮೇಶ್ ಅರವಿಂದ್
Updated on

ಬೆಂಗಳೂರು: ರಾಜ್ಯಾದ್ಯಂತ ಇದೇ 15ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭವಾಗುತ್ತಿದ್ದು, ಲಾಕ್ ಡೌನ್ ಮುಂಚಿತವಾಗಿ ಬಿಡುಗಡೆಯಾಗಿದ್ದ ಐದು ಚಿತ್ರಗಳು ಮತ್ತೆ ಬಿಡುಗಡೆಯಾಗುತ್ತಿವೆ. ಅಕ್ಟೋಬರ್ 15 ರಿಂದ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್,ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

ಕೃಷ್ಣ ಚೊಚ್ಚಲ ನಿರ್ದೇಶನದ ಲವ್ ಮಾಕ್ ಟೈಲ್ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ಶಿವಾರ್ಜುನ ಅಕ್ಟೋಬರ್ 16 ರಿಂದ ಮತ್ತೆ ಬಿಡುಗಡೆಯಾಗುತ್ತಿವೆ. ದಿಯಾ ಚಿತ್ರ ದಸರಾದಲ್ಲಿ ಬಿಡುಗಡೆಯಾಗುತ್ತಿದ್ದು, ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಚಿತ್ರ ಅಕ್ಟೋಬರ್ 23 ರಂದು ರೀ ರೀಲಿಸ್ ಆಗಲಿದೆ.

ಲವ್ ಮಾಕ್ ಟೈಲ್, ದಿಯಾ ಮತ್ತು ಶಿವಾಜಿ ಸುರತ್ಕಲ್ ಚಿತ್ರಗಳಿಗೆ ಒಟಿಟಿ ವೇದಿಕೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜಂಟಲ್ ಮ್ಯಾನ್ ಚಿತ್ರ ಟಿವಿಯಲ್ಲೂ ಕೂಡಾ ಟೆಲಿಕಾಸ್ಟ್ ಆಗಿತ್ತು. ಬೇಡಿಕೆ ಹಿನ್ನೆಲೆಯಲ್ಲಿ ದಿಯಾ ಚಿತ್ರವನ್ನು ಮತ್ತೆ ಬಿಡುಗಡೆ ಮಾಡುತ್ತಿದ್ದು, ಹೆಚ್ಚುವರಿ ಹಾಡುಗಳನ್ನು ಸೇರಿಸಲಾಗಿದೆ ಎಂದು ನಿರ್ಮಾಪಕ ಕೃಷ್ಣ ಚೈತನ್ಯ ತಿಳಿಸಿದ್ದಾರೆ.

ಈ ಮಧ್ಯೆ 5 ಅಡಿ ಏಳು ಅಂಗುಲ, ಅಕ್ಟೋಬರ್ 16 ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಕೆ. ಜಿ. ರಸ್ತೆಯ ತ್ರಿವೇಣಿ ಸೇರಿದಂತೆ ವಿವಿಧ ಮಲ್ಟಿಪ್ಲಾಕ್ಸ್ ಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com