ಕೊರೋನಾ ಸಂಕಷ್ಟ ಮಧ್ಯೆ ಜನರಿಗೆ ಸ್ಯಾಂಡಲ್ ವುಡ್ ನ ಹರ್ಷಿಕಾ ಪುಣಚ್ಚ, ಭುವನ್ ಪೊನ್ನಣ್ಣ ಸಹಾಯಹಸ್ತ!

ಕೋವಿಡ್-19 ಎರಡನೇ ಅಲೆಯ ಈ ಸಂಕಷ್ಟ ಕಾಲದಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಗಣ್ಯರು ಜನರಿಗೆ ಆಹಾರ, ವೈದ್ಯಕೀಯ ನೆರವಿನ ವಿಚಾರದಲ್ಲಿ ಸಹಾಯ ಮಾಡಲು ಮುಂದೆ ಧಾವಿಸಿದ್ದಾರೆ. ಅವರಲ್ಲಿ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪುಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಕೂಡ ಸೇರಿದ್ದಾರೆ.
ಹರ್ಷಿಕಾ ಪುಣಚ್ಚ
ಹರ್ಷಿಕಾ ಪುಣಚ್ಚ
Updated on

ಬೆಂಗಳೂರು: ಕೋವಿಡ್-19 ಎರಡನೇ ಅಲೆಯ ಈ ಸಂಕಷ್ಟ ಕಾಲದಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಗಣ್ಯರು ಜನರಿಗೆ ಆಹಾರ, ವೈದ್ಯಕೀಯ ನೆರವಿನ ವಿಚಾರದಲ್ಲಿ ಸಹಾಯ ಮಾಡಲು ಮುಂದೆ ಧಾವಿಸಿದ್ದಾರೆ. ಅವರಲ್ಲಿ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪುಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಕೂಡ ಸೇರಿದ್ದಾರೆ.

ಕೋವಿಡ್ ಎರಡನೇ ಅಲೆ ಆರಂಭವಾದ ಸಂದರ್ಭದಲ್ಲಿ ನಟ ಭುವನ್ ಪೊನ್ನಣ್ಣ ಫೇಸ್ ಬುಕ್ ನಲ್ಲಿ ತಮ್ಮ ಫೋನ್ ನಂಬರ್ ಹಂಚಿಕೊಂಡಿದ್ದರಂತೆ. ಆರಂಭದಲ್ಲಿ ದಿನಕ್ಕೆ 200ರಷ್ಟು ಫೋನ್ ಗಳು ಬರುತ್ತಿದ್ದರೆ ಇಂದು ದಿನಕ್ಕೆ ಸುಮಾರು ಸಾವಿರದಷ್ಟು ಫೋನ್ ಕರೆಗಳು ಬರುತ್ತಿವೆಯಂತೆ. ಇವರ ತಂಡದಲ್ಲಿ 9 ಸ್ವಯಂ ಸೇವಕರಿದ್ದಾರೆ. 10 ವಾಟ್ಸಾಪ್ ಗ್ರೂಪ್ ನ್ನು ತಯಾರು ಮಾಡಿದ್ದಲ್ಲದೆ, ಒಂದು ಟೆಲಿಗ್ರಾಂ ಗ್ರೂಪ್ ಮಾಡಿ ಯಾರಿಂದೆಲ್ಲಾ ಮನವಿಗಳು ಬರುತ್ತಿವೆ ಅದರಲ್ಲಿ ನೋಡಿಕೊಂಡು ನೆರವು ನೀಡುತ್ತಿದ್ದಾರೆ.

ನಮ್ಮ ಕೆಲಸ ಆರಂಭವಾದಾಗಿನಿಂದ ಐಸಿಯು ಬೆಡ್ ಮತ್ತು ಇತರ ವೈದ್ಯಕೀಯ ಸೌಲಭ್ಯ ಒದಗಿಸಿ ಸುಮಾರು 170 ಜೀವಗಳನ್ನು ಉಳಿಸಿದ್ದೇವೆ. ಇಂತಹ ಸಣ್ಣ ಕೆಲಸ ಮಾಡುವ ಮೂಲಕ ಜೀವನದಲ್ಲಿ ಏನಾದರೊಂದು ಸಾರ್ಥಕ್ಯ ಮಾಡಿದ ಖುಷಿಯಾಗುತ್ತದೆ ಎಂದು ಹರ್ಷಿಕಾ ಪುಣಚ್ಚ ಹೇಳುತ್ತಾರೆ. ಕಳೆದ ಶುಕ್ರವಾರ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಶ್ವಾಸ ಮತ್ತು ಬಂಧವ ಎಂಬ ಎರಡು ಪ್ರಾಜೆಕ್ಟ್ ಗಳನ್ನು ಉದ್ಘಾಟಿಸಿದ್ದರು.

ಶ್ವಾಸ ಯೋಜನೆಯಡಿ ಆಕ್ಸಿಜನ್ ಎಕ್ಸ್ ಪ್ರೆಸ್ ಬಸ್ಸನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಎರಡು ಬಸ್‌ಗಳಿಗೆ ತಲಾ ಐದು ಆಮ್ಲಜನಕ ಸಾಂದ್ರಕಗಳನ್ನು ಅಳವಡಿಸಲಾಗುವುದು ಮತ್ತು ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಇಬ್ಬರು ದಾದಿಯರನ್ನು ನೇಮಿಸಲಾಗುವುದು. ಅವುಗಳನ್ನು ವಿಕ್ಟೋರಿಯಾ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಗಳ ಬಳಿ ನಿಲ್ಲಿಸಲಾಗುವುದು. ಉಸಿರಾಡಲು ತುಂಬಾ ಕಷ್ಟಪಡುತ್ತಿರುವವರು ಆಸ್ಪತ್ರೆಯಲ್ಲಿ ಹಾಸಿಗೆ ಸಿಗುವವರೆಗೆ ಬಸ್ಸಿನಲ್ಲಿ ಆಮ್ಲಜನಕವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದರು. ಸಿಎಸ್ ವಾಟರ್ ಪ್ರೂಫಿಂಗ್ ಸೊಲ್ಯೂಷನ್ ಮತ್ತು ಭುವನಮ್ ಫೌಂಡೇಶನ್ ಆಕ್ಸಿಜನ್ ಸಾಂದ್ರಕವನ್ನು ಒದಗಿಸುತ್ತದೆ.
ಈ ಬಗ್ಗೆ ಕೆಲಸ ವಿಸ್ತರಿಸಲು ಹಲವು ಆಸ್ಪತ್ರೆಗಳು ಮತ್ತು ಬಿಬಿಎಂಪಿ ಜೊತೆ ಮಾತುಕತೆ ನಡೆಯುತ್ತಿದೆ ಎಂದರು.

ಭುವನಮ್ ಫೌಂಡೇಶನ್ ನ ಬಂಧವ ಯೋಜನೆಯಡಿ ಮನೆಯಲ್ಲಿ ಚೇತರಿಸಿಕೊಳ್ಳುವ ಅಥವಾ ಪ್ರತ್ಯೇಕವಾಗಿರುವ ಕೋವಿಡ್ ರೋಗಿಗಳಿಗೆ ಅಗತ್ಯ ವಸ್ತುಗಳನ್ನು ಮತ್ತು ಆಮ್ಲಜನಕವನ್ನು ತಲುಪಿಸಲು ಆಟೋರಿಕ್ಷಾಗಳನ್ನು ಬಳಸಲಾಗುತ್ತದೆ. “ಬಿಬಿಎಂಪಿ ತಮ್ಮ ಗೇಟ್‌ಗಳ ಮುಂದೆ ಪೋಸ್ಟ್‌ಗಳನ್ನು ಹಾಕಿದ್ದರಿಂದ, ಅನೇಕರು ಔಷಧಿಗಳನ್ನು ಅಥವಾ ಅಗತ್ಯ ವಸ್ತುಗಳನ್ನು ತಲುಪಿಸಲು ಹಿಂಜರಿಯುತ್ತಾರೆ. ನಾವು ಈ ಜನರೊಂದಿಗೆ ಸಂಪರ್ಕ ಸಾಧಿಸುತ್ತಿದ್ದೇವೆ. ನಾವು ಪ್ರಸ್ತುತ ಐದು ಆಟೊಗಳನ್ನು ಹೊಂದಿದ್ದು ಸ್ವಯಂಸೇವಕರು ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ ಎಂದರು.

ಇದರ ಜೊತೆಗೆ ಈ ಇಬ್ಬರು ಕಲಾವಿದರು ಸಿನೆಮಾದಲ್ಲಿರುವ ಕಾರ್ಮಿಕರಿಗೆ ದಿನಸಿ ಪದಾರ್ಥಗಳನ್ನು ನೀಡಿದ್ದಾರೆ. ರಾಜ್ಯದ ಅನೇಕ ಕಡೆಗಳಿಗೆ ಪ್ರಯಾಣ ಮಾಡಿ ಅಗತ್ಯ ಆಹಾರ ಪದಾರ್ಥಗಳನ್ನು ಬಡವರು, ನಿರ್ಗತಿಕರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com