ಸಂಕಷ್ಟದಲ್ಲಿ ತಮಿಳು ಹಾಸ್ಯನಟ ವಡಿವೇಲು: ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ

ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ತಮಿಳು ಹಾಸ್ಯ ನಟ ವಡಿವೇಲು ಅವರಿಗೆ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ ಹೊರಡಿಸಿದೆ.
ನಟ ವಡಿವೇಲು
ನಟ ವಡಿವೇಲು
Updated on

ಚೆನ್ನೈ: ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ತಮಿಳು ಹಾಸ್ಯ ನಟ ವಡಿವೇಲು ಅವರಿಗೆ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ ಹೊರಡಿಸಿದೆ.

ಸಿಂಗಮುತ್ತು ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ತನ್ನ ಮುಂದೆ ಹಾಜರಾಗುವಂತೆ ಪ್ರಮುಖ ತಮಿಳು ಚಿತ್ರರಂಗದ ಹಾಸ್ಯ ನಟ ವಡಿವೇಲು ಅವರಿಗೆ ಎಗ್ಮೋರ್ ನ್ಯಾಯಾಲಯ ಗುರುವಾರ ನೋಟಿಸ್ ನೀಡಿದೆ.

ವಡಿವೇಲು ನಿವಾಸದ ಮೇಲೆ ಈ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ತಾಂಬರಂ ಸಮೀಪ 1.93 ಕೋಟಿ ರೂಪಾಯಿಗೆ 3.5 ಎಕರೆ ಜಮೀನು ಖರೀದಿಸಿ ಅದನ್ನು ಆದಾಯ ತೆರಿಗೆ ಲೆಕ್ಕದಲ್ಲಿ ತೋರಿಸದೆ ವಂಚಿಸಲಾಗಿದೆ ಎಂದು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ನಟ ವಡಿವೇಲು, ಭೂಮಿ ಖರೀದಿ ವಿಷಯದಲ್ಲಿ ಸಹ ನಟ ಸಿಂಗಮುತ್ತು ತಮಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಅಪರಾಧ ವಿಭಾಗ ಪೊಲೀಸರ ಮೊರೆ ಹೋಗಿದ್ದರು.

ವಡಿವೇಲು ಅವರು 2007 ರಲ್ಲಿ ಖರೀದಿಸಿದ ಭೂಮಿಯಲ್ಲಿ ತಮ್ಮ ಸಹ ನಟ ಸಿಂಗಮುತ್ತು ವಂಚಿಸಿದ್ದಾರೆ ಮತ್ತು ಅವರ ಭಾಗಿಯಾಗದೆ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ಆದಾಗ್ಯೂ ಈ ಪ್ರಕರಣವು ಎಗ್ಮೋರ್ ನ್ಯಾಯಾಲಯದಲ್ಲಿ ಬಾಕಿಯಿದ್ದು, ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಈ ಹಿಂದೆ ವಡಿವೇಲು ಅವರಿಗೆ ಸಮನ್ಸ್ ನೀಡಿತ್ತು. ಆದಾಗ್ಯೂ, ಕೆಲವು ಅನಿರೀಕ್ಷಿತ ಕಾರಣಗಳಿಂದಾಗಿ ಅವರು ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. 

ಪ್ರಕರಣ ಗುರುವಾರ ವಿಚಾರಣೆಗೆ ಬಂದಿತು. ಈ ಹಿನ್ನೆಲೆಯಲ್ಲಿ ಸಿಂಗಮುತ್ತು ಪರ ವಕೀಲರು ಬಲವಾದ ವಾದಗಳನ್ನು ಮಂಡಿಸಿದರು. ತಂಬರಂ ಬಳಿ ಶೇಖರ್ ಎಂಬ ವ್ಯಕ್ತಿಗೆ ವಡಿವೇಲು ಭೂಮಿಯನ್ನು ಮಾರಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ವಡಿವೇಲು ತಕ್ಷಣ ವಿಚಾರಣೆಗೆ ಬರಬೇಕು ಎಂದು ಆದೇಶ ನೀಡಿತು. ಅಂತೆಯೇ ನ್ಯಾಯಾಧೀಶ ನಾಗರಾಜನ್ ಪ್ರಕರಣವನ್ನು ಡಿಸೆಂಬರ್ 7 ಕ್ಕೆ ಮುಂದೂಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com