The New Indian Express
ಬೆಂಗಳೂರು: ನವಿರಾದ ಪ್ರೀತಿ, ತಮಾಷೆಭರಿತ ಸಿನಿಮಾಗಳಿಗೆ ಹೆಸರಾದ ಕನ್ನಡ ಚಿತ್ರ ನಿರ್ದೇಶಕ ಸುನಿ ಫ್ರೆಶ್ ಮತ್ತು ಪ್ರಯೋಗಾತ್ಮಕ ಸಿನಿಮಾಗಳಿಗೆ ತೆರೆದುಕೊಂಡವರು. ಅವರು ನಿರ್ದೇಶಿಸಿರುವ ಹೊಸ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಕತ್' ನವೆಂಬರ್ 26ರಂದು ತೆರೆಕಾಣುತ್ತಿದೆ.
ಇದನ್ನೂ ಓದಿ: 'ಭಾವಚಿತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಗಾನವಿ ಲಕ್ಷ್ಮಣ್, ಚಕ್ರವರ್ತಿ
ಕಾಮಿಡಿ- ಕೋರ್ಟ್ ರೂಮ್ ಡ್ರಾಮ ಸಿನಿಮಾ ಆಗಿರುವ ಸಕತ್ ಸಿನಿಮಾ ಯಾವುದೇ ರೀತಿಯಲ್ಲೂ ಬಾಲಿವುಡ್ ನ ಅಂಧಾಧುನ್ ಸಿನಿಮಾಗೆ ಹೋಲುವುದಿಲ್ಲ ಎಂದು ಸುನಿ ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ: ನಿಖಿಲ್ ನಟನೆಯ 'ರೈಡರ್' ಡಿಸೆಂಬರ್ 24ಕ್ಕೆ ಬಿಡುಗಡೆ
ನ್ಯಾಯಾಲಯದ ಯಾವುದೇ ವಿಚಾರಣೆಯಲ್ಲಿ ಐವಿಟ್ನೆಸ್ ಪ್ರಧಾನ ಪಾತ್ರ ವಹಿಸುತ್ತಾರೆ. ಆದರೆ ಒಬ್ಬ ಕಣ್ಣು ಕಾಣದ ಕುರುಡ ಐವಿಟ್ನೆಸ್ ಆದರೆ ಏನಾಗುತ್ತದೆ ಎನ್ನುವುದೇ ನನ್ನ ಸ್ಕ್ರಿಪ್ಟ್ ಗೆ ಮೂಲ ಪ್ರೇರಣೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಎಮ್ಮೀ ಅವಾರ್ಡ್ 2021: ಮೂರೂ ವಿಭಾಗಗಳಲ್ಲಿ ಅವಾರ್ಡ್ ಮಿಸ್ ಆದರೂ ಬೀಗಿದ ಭಾರತ
ಹಾಲಿವುಡ್ ನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಅಂಧಾಧುನ್ ಸಿನಿಮಾವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿ ಆಯುಷ್ಮಾನ್ ಖುರಾನ, ತಬು ಮತ್ತು ರಾಧಿಕಾ ಆಪ್ಟೆ ನಟಿಸಿದ್ದರು. ಅದರಲ್ಲಿ ಆಯುಷ್ಮಾನ್ ಕುರುಡನ ಪಾತ್ರದಲ್ಲಿ ಮಿಂಚಿದ್ದರು.
ಇದನ್ನೂ ಓದಿ: ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ ಪುನೀತ್ ರಾಜ್ ಕುಮಾರ್ ಬಯೋಪಿಕ್
ಸಕತ್ ಸಿನಿಮಾದಲ್ಲಿ ಗಣೇಶ್ ಅವರ ಲುಕ್ ಅಂಧಾಧುನ್ ಸಿನಿಮಾದ ನಾಯಕನ ಪಾತ್ರವನ್ನು ಹೋಲುತ್ತಿದ್ದುದರಿಂದ ಇದು ಅಂಧಾಧುನ್ ಸಿನಿಮಾದಿಮ್ದ ಪ್ರೇರಣೆ ಪಡೆದುಕೊಂಡಿರಬಹುದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಇದನ್ನೂ ಓದಿ: ನ.23ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ 'ಕೋಟಿಗೊಬ್ಬ 3' ಬಿಡುಗಡೆ
ಆದರೆ ಸಕತ್ ಸಿನಿಮಾ ನೂರಕ್ಕೆ ನೂರು ಪ್ರತಿಶತ ಅಂಧಾಧುನ್ ಗಿಂತ ಭಿನ್ನವಾಗಿದೆ ಎಂದು ಸುನಿ ಗ್ರಾರಂಟಿ ಕೊಡುತ್ತಾರೆ.
ಇದನ್ನೂ ಓದಿ: ಗರುಡ ಗಮನ ಋಷಭ ವಾಹನಕ್ಕೆ ಲಾಕ್ ಡೌನ್ ವರವಾಗಿ ಪರಿಣಮಿಸಿತು: ರಾಜ್ ಬಿ. ಶೆಟ್ಟಿ