'ತಾಜ್ ಮಹಲ್ 2' ನೈಜ ಕಥೆಯಾಧಾರಿತ ಚಿತ್ರ
ನಿರ್ದೇಶಕರಾಗಿ ಬದಲಾಗಿರುವ ಮೇಕಪ್ ಕಲಾವಿದ ದೇವರಾಜ್ ಕುಮಾರ್ ತಾಜ್ ಮಹಲ್ 2 ಚಿತ್ರ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾ ಆಗಿದೆ. ಈ ಹಿಂದೆ ಅವರು ಡೆಂಜರ್ ಜೋನ್, ನಿಶಾದಾ 2 ಮತ್ತು ಅನುಷ್ಕಾ ಚಿತ್ರವನ್ನು ನಿರ್ದೇಶಿಸಿದ್ದರು. ಈ ರೋಮ್ಯಾಂಟಿಕ್ ಸಿನಿಮಾದ ಕಥೆ, ಚಿತ್ರಕಥೆಯನ್ನು ದೇವರಾಜ್ ಕುಮಾರ್ ಅವರೇ ಬರೆದಿದ್ದಾರೆ. ಅಲ್ಲದೇ, ಚೊಚ್ಚಲ ಬಾರಿಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ತಾಜ್ ಮಹಲ್ 2 ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸೆಪ್ಟೆಂಬರ್ 2 ರಂದು ಚಿತ್ರ ಬಿಡುಗಡೆಗೆ ನಿರ್ಮಾಪಕರು ಎದುರು ನೋಡುತ್ತಿದ್ದಾರೆ.
ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ದೇವರಾಜ್, ತಾಜ್ ಮಹಲ್ 2 ಶೀರ್ಷಿಕೆಗೂ ಆರ್. ಚಂದ್ರು 2008ರಲ್ಲಿ ನಿರ್ದೇಶಿಸಿದ್ದ ತಾಜ್ ಮಹಲ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ, ಇದೊಂದು ರೋಮ್ಯಾಂಟಿಕ್ ಚಿತ್ರವಾವಾಗಿದೆ. ಕೊಯಂಬತ್ತೂರಿನಲ್ಲಿ ಸಂಭವಿಸಿದ ನೈಜ ಕಥೆಯಾಧಾರಿತ ಚಿತ್ರವಾಗಿದೆ ಎಂದರು.
ಆ ಘಟನೆ ನನ್ನನ್ನು ತೀವ್ರವಾಗಿ ಕಾಡಿತ್ತು. ಅದನ್ನು ತಾಜ್ ಮಹಲ್ 2 ಮೂಲಕ ಪ್ರೇಕ್ಷಕರ ಮುಂದೆ ತೋರಿಸುತ್ತಿದ್ದೇವೆ. ಸಮೃದ್ಧಿ ಶುಕ್ಲಾ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಶ್ರೀ ಗಂಗಾಭಿಕಾ ಎಂಟರ್ ಪ್ರೈಸಸ್ ಸಹಕಾರವಿದೆ.
ಸಂಭಾಷಣೆ ಮತ್ತು ಸಾಹಿತ್ಯವವನ್ನು ಮನುವರಸಿ ನವಲಗುಂದ ಬರೆದಿದ್ದು, ವಿಕ್ರಮ್ ಸೆಲ್ವಂ ಸಂಗೀತ ಸಂಯೋಜಿಸಿದ್ದಾರೆ. ವಿನಸ್ ಮೂರ್ತಿ ಅವರ ಛಾಯಾಗ್ರಹಣವಿರಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ