ನನ್ನ ಗಮನ ಸಂಪೂರ್ಣವಾಗಿ ಡಾ. ಸೂರಿ ನಿರ್ದೇಶನದ 'ಬಘೀರಾ' ಮೇಲಿದೆ: ನಟ ಶ್ರೀಮುರಳಿ

ನಟ ಶ್ರೀಮುರಳಿ ಸಂಪೂರ್ಣ ವರ್ಕ್ ಮೋಡ್‌ನಲ್ಲಿದ್ದು, ಅವರ ಸಂಪೂರ್ಣ ಗಮನವೆಲ್ಲ ಅವರ ಮುಂದಿನ 'ಬಘೀರಾ' ಸಿನಿಮಾದ ಮೇಲೆ ಕೇಂದ್ರೀಕೃತವಾಗಿದೆ. ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಅಡಿಯಲ್ಲಿ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ಬಘೀರಾ ಸಿದ್ಧವಾಗುತ್ತಿದೆ.
ಶ್ರೀಮುರಳಿ
ಶ್ರೀಮುರಳಿ

ನಟ ಶ್ರೀಮುರಳಿ ಸಂಪೂರ್ಣ ವರ್ಕ್ ಮೋಡ್‌ನಲ್ಲಿದ್ದು, ಅವರ ಸಂಪೂರ್ಣ ಗಮನವೆಲ್ಲ ಅವರ ಮುಂದಿನ 'ಬಘೀರಾ' ಸಿನಿಮಾದ ಮೇಲೆ ಕೇಂದ್ರೀಕೃತವಾಗಿದೆ. ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಅಡಿಯಲ್ಲಿ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ಬಘೀರಾ ಸಿನಿಮಾ ಸಿದ್ಧವಾಗುತ್ತಿದೆ.

ಲಕ್ಕಿ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನದ ಆ್ಯಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್ ಬಘೀರಾ ಸಿನಿಮಾಗೆ ಶ್ರೀಮುರಳಿ ಅಭಿನಯದ 'ಉಗ್ರಂ' ಚಿತ್ರದ ಮೂಲಕ ನಿರ್ದೇಶಕರಾಗಿ  ಚೊಚ್ಚಲ ಪ್ರವೇಶ ಮಾಡಿದ್ದ ಹಾಗೂ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಚಿತ್ರಕಥೆ ಬರೆದಿದ್ದಾರೆ.

ಬಘೀರಾ ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೋಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಮತ್ತು ಫಸ್ಟ್ ಲುಕ್ ಪೋಸ್ಟರ್ 'ಸಮಾಜ ಕಾಡಿದಾಗ' ಎಂಬ ಅಡಿಬರಹದೊಂದಿಗೆ ರಿಲೀಸ್ ಆಗಿದೆ.  ಈ ವಾರದ ಆರಂಭದಲ್ಲಿ ಪ್ರಾರಂಭವಾಗುವ ಮುಂದಿನ ಹಂತದ ಶೂಟಿಂಗ್‌ಗಾಗಿ ಇಡೀ ತಂಡವು ಮಂಗಳೂರಿನಲ್ಲಿದೆ.

ಸಿನಿಮಾ ಸೆಟ್‌ನಲ್ಲಿರುವ ಶ್ರೀಮುರಳಿ ಮಾತನಾಡಿ, ತನ್ನ ಸಂಪೂರ್ಣ ಗಮನ ಬಘೀರಾದ ಮೇಲಿದೆ. 'ಶೇ 25 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಮತ್ತು ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ. ಮಂಗಳೂರಿನಲ್ಲಿ ಶೂಟಿಂಗ್ ನಂತರ, ವಿಶ್ರಾಂತಿ ತೆಗೆದುಕೊಂಡು ಅಕ್ಟೋಬರ್ 29 ರಿಂದ ಗೋವಾದಲ್ಲಿ ಶೂಟಿಂಗ್ ನಡೆಯಲಿದೆ' ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com