ನನ್ನ ಮೊದಲ ಚಿತ್ರ ಕಲಾತ್ಮಕ- ಕಮರ್ಷಿಯಲ್ ಆಗಿರುತ್ತದೆ: ನಿರ್ದೇಶಕ-ನಟ ವಂಶಿ ಕೃಷ್ಣ

ರಾಧಾಕೃಷ್ಣ ರೆಡ್ಡಿ ಅವರ ಮಾಯಾಬಜಾರ್ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ವಂಶಿ ತಮ್ಮ ಸಿನಿಮಾ ಪಯಣ ಆರಂಭಿಸಿದ್ದರು. ಈ ಯುವ ಪ್ರತಿಭೆ ಇದೀಗ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಚಿತ್ರದಲ್ಲಿ ಅವರು ಪೂರ್ಣ ಪ್ರಮಾಣದ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ವಂಶಿ ಕೃಷ್ಣ
ವಂಶಿ ಕೃಷ್ಣ
Updated on

ರಾಧಾಕೃಷ್ಣ ರೆಡ್ಡಿ ಅವರ ಮಾಯಾಬಜಾರ್ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ವಂಶಿ ತಮ್ಮ ಸಿನಿಮಾ ಪಯಣ ಆರಂಭಿಸಿದ್ದರು. ಅವರು ಪೆಂಟಗನ್ (2023) ಸಿನಿಮಾ ಮೂಲಕ ನಟನೆಯಲ್ಲೂ ಗುರುತಿಸಿಕೊಂಡರು. ಈ ಯುವ ಪ್ರತಿಭೆ ಇದೀಗ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಚಿತ್ರದಲ್ಲಿ ಅವರು ಪೂರ್ಣ ಪ್ರಮಾಣದ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

'ನಿವೇದಿತಾ ವೆಬ್ ಸರಣಿಯ ವಿಷಯಕ್ಕಾಗಿ ಹುಡುಕುತ್ತಿದ್ದರು. ಕಮರ್ಷಿಯಲ್ ಆಗಿ ಅಷ್ಟೇನೂ ಕೆಲಸ ಮಾಡದ ಎರಡು ಕಥೆಗಳನ್ನು ಅವರಿಗೆ ಹೇಳಿದೆ. ನಂತರ ನಾನು ಅವರಿಗೆ ಸ್ಕ್ರಿಪ್ಟ್ ಅನ್ನು ವಿವರಿಸಿದೆ. ನಾನೇ ನಿರ್ದೇಶಿಸಲು ಯೋಜಿಸಿದ್ದೆ. ಅದೃಷ್ಟವಶಾತ್, ಅವರು ಕಥೆಯನ್ನು ಇಷ್ಟಪಟ್ಟರು ಮತ್ತು ಅದಕ್ಕೆ ಹಸಿರು ನಿಶಾನೆ ನೀಡಿದರು ಎನ್ನುತ್ತಾರೆ ವಂಶಿ.

ಇಂಜಿನಿಯರ್ ಆಗಿರುವ ವಂಶಿ ಅವರು ತಮ್ಮ ಕಾಲೇಜು ದಿನಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶವನ್ನು ಪಡೆದರು. ಮೇಕಿಂಗ್‌ನಲ್ಲಿರುವ ನಿರ್ದೇಶಕರು ತಮ್ಮ ಯೋಜನೆಯನ್ನು 'ಅದರದೇ ಆದ ರೀತಿಯಲ್ಲಿ ಕಲಾತ್ಮಕ ಮತ್ತು ವಾಣಿಜ್ಯಿಕವಾಗಿರುವ ನೈಜ-ಜೀವನದ ಸಿನಿಮಾ' ಎಂದು ವಿವರಿಸುತ್ತಾರೆ. 

ಚಿತ್ರವು ಜೂನ್‌ನಲ್ಲಿ ಸೆಟ್ಟೇರಲು ಸಿದ್ಧವಾಗಿದ್ದು, ಅವರು ಚಿತ್ರದ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ. ಈ ಚಿತ್ರವನ್ನು ನಟ ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ಅವರು 'ಶ್ರೀ ಮುತ್ತು ಸಿನಿ ಸರ್ವಿಸಸ್ ಬ್ಯಾನರ್' ಅಡಿಯಲ್ಲಿ ನಿರ್ಮಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com