ಅಥರ್ವ್ ಆರ್ಯ ನಿರ್ದೇಶನದ ಫ್ಯಾಮಿಲಿ ಎಂಟರ್ಟೈನರ್ನಲ್ಲಿ ನೆನಪಿರಲಿ ಪ್ರೇಮ್, ತಬಲಾ ನಾಣಿ
ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ಜೂಟಾಟ ಮತ್ತು ಅರ್ಧದಷ್ಟು ಪೂರ್ಣಗೊಂಡ ಹಾಗೂ ಹೊಸಬರೇ ನಟಿಸಿರುವ ಗುಬ್ಬಚ್ಚಿ ಚಿತ್ರದ ನಂತರ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕ ಅಥರ್ವ್ ಆರ್ಯ ಸಜ್ಜಾಗುತ್ತಿದ್ದಾರೆ. ಕೌಟುಂಬಿಕ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಮತ್ತು ತಬಲಾ ನಾಣಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ತಾತ್ಕಾಲಿಕವಾಗಿ ಪ್ರೊಡಕ್ಷನ್ 1 ಎಂದು ಹೆಸರಿಸಲಾಗಿರುವ ಈ ಚಿತ್ರಕ್ಕೆ ಜನವರಿ 23 ರಂದು ಮುಹೂರ್ತ ನೆರವೇರಲಿದ್ದು, ಕೆಆರ್ಎಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿನ ಈ ಚಿತ್ರವು ಫೆಬ್ರುವರಿ 1 ರಂದು ಚಿತ್ರೀಕರಣ ಪ್ರಾರಂಭಿಸಲಿದೆ. ನಿರ್ದೇಶಕ ಅಥರ್ವ್ ಅವರೇ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಚಿತ್ರವು ಕುಟುಂಬದಲ್ಲಿನ ತಂದೆಯ ಪ್ರಾಮುಖ್ಯತೆಯ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಪ್ರೇಮ್ ಸಾಫ್ಟ್ವೇರ್ ಕಂಪನಿಯನ್ನು ನಡೆಸುವ ಉದ್ಯಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದ ಛಾಯಾಗ್ರಾಹಕರಾಗಿ ನಾಗರಾಜ್ ಡಿಆರ್, ಸಂಗೀತ ನಿರ್ದೇಶಕರಾಗಿ ಆಕಾಶ್ ಪರ್ವ ಮತ್ತು ಸಂಕಲನಕಾರರಾಗಿ ವೇದಿಕ್ ವೀರ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಚಿತ್ರದ ಸಂಪೂರ್ಣ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದ್ದು, ನಿರ್ದೇಶಕರು ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಪೋಷಕ ಪಾತ್ರವರ್ಗದಲ್ಲಿ ಬಾಲ ರಾಜವಾಡಿ, ಗಿರೀಶ್ ಜತ್ತಿ ಮತ್ತು ಮಿತ್ರ ಮುಂತಾದ ಹೆಸರುಗಳಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ