ಯೋಗರಾಜ್ ಭಟ್ ಮುಂದಿನ ಸಿನಿಮಾ ‘ಮನದ ಕಡಲು’: 18 ವರ್ಷಗಳ ಬಳಿಕ ಒಂದಾದ ಮುಂಗಾರು ಮಳೆ ಟೀಂ

2006ರಲ್ಲಿ ಯೋಗರಾಜ್ ಭಟ್ ನಿರ್ದೇಶಿಸಿದ್ದ ಮುಂಗಾರು ಮಳೆ ಸ್ಯಾಂಡಲ್​ವುಡ್​'ನಲ್ಲಿ ದಾಖಲೆಯನ್ನೇ ಸೃಷ್ಟಿಸಿತ್ತು.
ಮನದ ಕಡಲು ಚಿತ್ರದ ನಟ ಹಾಗೂ ನಟಿಯರು.
ಮನದ ಕಡಲು ಚಿತ್ರದ ನಟ ಹಾಗೂ ನಟಿಯರು.
Updated on

‘ಮುಂಗಾರು ಮಳೆ’ ಸಿನಿಮಾದ 18 ವರ್ಷಗಳ ನಂತರ ಯೋಗರಾಜ್ ಭಟ್ ಮತ್ತು ಇ. ಕೃಷ್ಣಪ್ಪ ಮತ್ತೆ ಒಂದಾಗಿದ್ದು, ಹೊಸ ಸಿನಿಮಾಕ್ಕೆ ‘ಮನದ ಕಡಲು’ ಎಂದು ಹೆಸರಿಡಲಾಗಿದೆ.

2006ರಲ್ಲಿ ಯೋಗರಾಜ್ ಭಟ್ ನಿರ್ದೇಶಿಸಿದ್ದ ಮುಂಗಾರು ಮಳೆ ಸ್ಯಾಂಡಲ್​ವುಡ್​'ನಲ್ಲಿ ದಾಖಲೆಯನ್ನೇ ಸೃಷ್ಟಿಸಿತ್ತು. 18 ವರ್ಷಗಳ ಬಳಿಕ ಯೋಗರಾಜ್ ಭಟ್ ಮತ್ತು ಇ. ಕೃಷ್ಣಪ್ಪ ಮತ್ತೆ ಕೈಜೊಡಿಸಿದ್ದು, ಮನದ ಕಡಲು ಚಿತ್ರವನ್ನು ಹೊರತರುತ್ತಿದ್ದಾರೆ.

ಸುಮುಖ ಈ ಚಿತ್ರದ ನಾಯಕನಾಗಿ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಾಯಕಿಯರಾಗಿ ಹಾಗೂ ರಂಗಾಯಣ ರಘು, ದತ್ತಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮನದ ಕಡಲು ಚಿತ್ರದ ನಟ ಹಾಗೂ ನಟಿಯರು.
'ಮನದ ಕಡಲು' ಚಿತ್ರದ ಶೂಟಿಂಗ್​ ವೇಳೆ ಲೈಟ್ ಮ್ಯಾನ್ ಸಾವು: ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ FIR

ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, 2025 ರ ಮೊದಲಾರ್ಧದಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ,

ಮನದ ಕಡಲು ಇಕೆ ಎಂಟರ್ಟೈನರ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಹಾಡುಗಳಿಗೆ ಜಯಂತ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com